ಸಿದ್ದಾಪುರ To ಶಿರಸಿ: ಸಾರಿಗೆ ಬಸ್ ವೇಳಾಪಟ್ಟಿ ಬದಲಾವಣೆ, ವಿದ್ಯಾರ್ಥಿಗಳ ಹೋರಾಟದ ಫಲ

Published : May 14, 2026, 07:20 AM IST

ಸಿದ್ದಾಪುರದಿಂದ ವಾಜಗದ್ದೆ, ನಾಣಿಕಟ್ಟಾ ಮಾರ್ಗವಾಗಿ ಶಿರಸಿಗೆ ಸಂಚರಿಸುವ ಸಾರಿಗೆ ಬಸ್‌ನ ಸಮಯವನ್ನು  ಬದಲಾಯಿಸಲಾಗಿದೆ. ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ನಿರಂತರ ಹೋರಾಟದ ಫಲವಾಗಿ ಈ ಬದಲಾವಣೆ ಮಾಡಲಾಗಿದ್ದು, ಇದು ಪ್ರಯಾಣಿಕರ ಬಹುಕಾಲದ ಸಮಸ್ಯೆಗೆ ಪರಿಹಾರ ನೀಡಿದೆ.

PREV
15
ಸಿದ್ದಾಪುರ To ಶಿರಸಿ

ಸಿದ್ದಾಪುರದಿಂದ ವಾಜಗದ್ದೆ, ನಾಣಿಕಟ್ಟಾ ಮಾರ್ಗವಾಗಿ ಶಿರಸಿಗೆ ಸಂಚರಿಸುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಬೆಳಗ್ಗೆ 9.30ಕ್ಕೆ ಇದ್ದ ಸಮಯವನ್ನು 9 ಗಂಟೆಗೆ ಮಾರ್ಪಡಿಸಿ ಸಂಸ್ಥೆ ಅಧಿಕೃತ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದ ಕಳೆದ ಆರು ವರ್ಷಗಳಿಂದ ಪ್ರಯಾಣಿಕರು ಅನುಭವಿಸುತ್ತಿದ್ದ ತೊಂದರೆಗೆ ಕೊನೆಗೂ ಪರಿಹಾರ ಸಿಕ್ಕಂತಾಗಿದೆ.

25
ಸಮಯ ಬದಲಾಗಿದ್ದು ಯಾಕೆ?

ಸುಮಾರು 20 ವರ್ಷಗಳಿಂದ ಈ ಬಸ್ ಬೆಳಗ್ಗೆ 8.45ಕ್ಕೆ ಸರಿಯಾಗಿ ಸಂಚರಿಸುತ್ತಿತ್ತು. ಆದರೆ, ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ಜಾರಿಗೆ ತಂದ ಮಾರ್ಗ ಮತ್ತು ಸಮಯ ಬದಲಾವಣೆಯ ನಿಯಮಗಳಿಂದಾಗಿ, ಈ ಬಸ್ಸಿನ ಸಮಯವನ್ನು 9.30ಕ್ಕೆ ಮುಂದೂಡಲಾಗಿತ್ತು. ಈ ಬದಲಾವಣೆಯಿಂದ ಸಾರ್ವಜನಿಕರಿಗೆ ತೀವ್ರ ಅನನುಕೂಲವಾಗುತ್ತಿತ್ತು.

35
ಹೋರಾಟದ ಫಲ

ಅಂದು ಹಿರಿಯ ಅಧಿಕಾರಿಗಳು ಕೆಲವೇ ತಿಂಗಳಲ್ಲಿ ಸಮಯವನ್ನು ಸರಿಪಡಿಸುವ ಭರವಸೆ ನೀಡಿದ್ದರೂ, ಅದು ಜಾರಿಯಾಗಿರಲಿಲ್ಲ. ವರ್ಷಗಟ್ಟಲೆ ಕಳೆದರೂ ಯಾವುದೇ ಸ್ಪಂದನೆ ಸಿಗದ ಕಾರಣ ಸಾರ್ವಜನಿಕರು ಇದರ ಆಸೆಯನ್ನೇ ಕೈಬಿಟ್ಟಿದ್ದರು. ಆದರೆ, ಸಾರ್ವಜನಿಕರ ನಿರಂತರ ಒತ್ತಡ ಮತ್ತು ಹೋರಾಟದ ಫಲವಾಗಿ ಸಾರಿಗೆ ಸಂಸ್ಥೆ ಈಗ ಎಚ್ಚೆತ್ತುಕೊಂಡು ಸಮಯ ಬದಲಾವಣೆ ಮಾಡಿದೆ.

45
ವೇಳಾಪಟ್ಟಿ ಬದಲಾವಣೆ

ಈ ವೇಳಾಪಟ್ಟಿ ಬದಲಾವಣೆಯು ಈ ಭಾಗದ ಪ್ರಯಾಣಿಕರಲ್ಲಿ ಹರ್ಷ ತಂದಿದೆ. ವಿಶೇಷವಾಗಿ ಸಿದ್ದಾಪುರದಿಂದ ಕೊಲಸಿರ್ಸಿ, ಬಿದ್ರಕಾನ್, ಮುತ್ತಿಗೆ, ಕವಲಕೊಪ್ಪ ಹಾಗೂ ಹಾರ್ಸಿಕಟ್ಟಾ ಕಡೆಗೆ ತೆರಳುವ ಶಿಕ್ಷಕರು ಈವರೆಗೆ ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಅವಲಂಬಿಸಬೇಕಿತ್ತು. ಬಸ್ 9.30ಕ್ಕೆ ಬಿಡುತ್ತಿದ್ದರಿಂದ ವಾಜಗದ್ದೆ ಭಾಗದ ಜನರಿಗೆ ಶಿರಸಿ ಹಾಗೂ ಸಿದ್ದಾಪುರಕ್ಕೆ ತೆರಳಲು ವಿಳಂಬವಾಗುತ್ತಿತ್ತು. ಈಗ ಸಮಯ ಬದಲಾವಣೆಯಿಂದ ಶಾಲಾ ಮಕ್ಕಳು ಹಾಗೂ ನಾಣಿಕಟ್ಟಾ ಸರ್ಕಾರಿ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಅನುಕೂಲವಾಗಲಿದೆ.

55
ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಬೇಡಿಕೆಗೆ

ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿ ವೇಳಾಪಟ್ಟಿ ಪರಿಷ್ಕರಿಸಿದ ಉತ್ತರ ಕನ್ನಡ ವಿಭಾಗದ ಸಾರಿಗೆ ಅಧಿಕಾರಿಗಳಿಗೆ ಬಿದ್ರಕಾನ್, ಮುತ್ತಿಗೆ, ಹಾರ್ಸಿಕಟ್ಟಾ ಹಾಗೂ ವಾಜಗದ್ದೆ ಗ್ರಾಮಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

Read more Photos on
click me!

Recommended Stories