ವರುಣನ ಆರ್ಭಟ: ಕೊಡಗು ಜಿಲ್ಲೆಯಲ್ಲಿ ಸತತ ಮೂರನೇ ವರ್ಷ ಪ್ರಕೃತಿ ದುರಂತ..!

Published : Aug 07, 2020, 09:25 AM ISTUpdated : Aug 07, 2020, 09:30 AM IST

ಕೊಡಗು(ಆ.07): ಜಿಲ್ಲೆಯಲ್ಲಿ ವರುಣನ ಆರ್ಭಟ ಇನ್ನೂ ನಿಂತಿಲ್ಲ. ನಿರಂತರವಾಗಿ ಭಾರೀ ಮಳೆಯಿಂದಾಗಿ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಒಳಗೆ ನೀರು ನುಗ್ಗಿದೆ.  ಜಿಲ್ಲೆಯ ಹಲವು ಕಡೆಗಳಲ್ಲಿ ಭೂಕುಸಿತ, ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ತಲಕಾವೇರಿಯಲ್ಲಿಯೂ ಭೂಕುಸಿತ ಉಂಟಾಗಿದೆ. ಆದರೆ, ಕಾರ್ಯಾಚರಣೆ ಮಾತ್ರ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಜನರು ಸಂಕಷ್ಟಗಳನ್ನ ಎದುರಿಸುವಂತಾಗಿದೆ. 

PREV
110
ವರುಣನ ಆರ್ಭಟ: ಕೊಡಗು ಜಿಲ್ಲೆಯಲ್ಲಿ ಸತತ ಮೂರನೇ ವರ್ಷ ಪ್ರಕೃತಿ ದುರಂತ..!

ಕೊಡಗು ಜಿಲ್ಲೆಯಲ್ಲಿ ಆಗಸ್ಟ್‌ ತಿಂಗಳು ಕರಾಳ ತಿಂಗ​ಳಾ​ಗು​ತ್ತಿ​ರು​ವುದು ಇದು ಸತತ 3ನೇ ವರ್ಷ

ಕೊಡಗು ಜಿಲ್ಲೆಯಲ್ಲಿ ಆಗಸ್ಟ್‌ ತಿಂಗಳು ಕರಾಳ ತಿಂಗ​ಳಾ​ಗು​ತ್ತಿ​ರು​ವುದು ಇದು ಸತತ 3ನೇ ವರ್ಷ

210

ಈ ಹಿಂದೆ 2018 ರಿಂದ ಆಗಸ್ಟ್‌ನಲ್ಲಿ ಸತ​ತ ಪ್ರಕೃತಿ ವಿಕೋಪ ಉಂಟಾಗಿ ಜಿಲ್ಲೆ​ಯ​ಲ್ಲಿ ಅಪಾರ ಆಸ್ತಿ, ಪ್ರಾಣ ಹಾನಿಯಾಗು​ತ್ತಲೇ ಬಂದಿದೆ. ಇದ​ರಿಂದಾಗಿ ಜಿಲ್ಲೆಯ ಪಾಲಿಗೆ ಆಗಸ್ಟ್‌ ತಿಂಗಳು ಬಂತೆಂದರೆ ನಡುಕ ಶುರು​ವಾ​ಗು​ತ್ತ​ದೆ.

ಈ ಹಿಂದೆ 2018 ರಿಂದ ಆಗಸ್ಟ್‌ನಲ್ಲಿ ಸತ​ತ ಪ್ರಕೃತಿ ವಿಕೋಪ ಉಂಟಾಗಿ ಜಿಲ್ಲೆ​ಯ​ಲ್ಲಿ ಅಪಾರ ಆಸ್ತಿ, ಪ್ರಾಣ ಹಾನಿಯಾಗು​ತ್ತಲೇ ಬಂದಿದೆ. ಇದ​ರಿಂದಾಗಿ ಜಿಲ್ಲೆಯ ಪಾಲಿಗೆ ಆಗಸ್ಟ್‌ ತಿಂಗಳು ಬಂತೆಂದರೆ ನಡುಕ ಶುರು​ವಾ​ಗು​ತ್ತ​ದೆ.

310

ಜಿಲ್ಲೆಯಲ್ಲಿ 2018ರಲ್ಲಿ ಸುರಿದ ಭಾರಿ ಮಳೆಗೆ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಹೆಬ್ಬೆಟ್ಟಗೇರಿ, ಮುಕ್ಕೋಡ್ಲು, ಮಾದಾಪುರ, ಮಕ್ಕಂದೂರು, ಹಟ್ಟಿಹೊಳೆ, ಮೇಘತ್ತಾಳು, ಹೆಮ್ಮೆತ್ತಾಳು, ಮೊಣ್ಣಂಗೇರಿ, ಗಾಳಿಬೀಡು, ಜೋಡುಪಾಲ, ಮದೆನಾಡು, ಕಾಲೂರು, ಹಟ್ಟಿಹೊಳೆ ಸೇರಿ ಹಲವು ಕಡೆಗಳಲ್ಲಿ ಭೂಕುಸಿತ ಸಂಭವಿಸಿ ಅಪಾರ ಹಾನಿಯಾಗಿತ್ತು. 

ಜಿಲ್ಲೆಯಲ್ಲಿ 2018ರಲ್ಲಿ ಸುರಿದ ಭಾರಿ ಮಳೆಗೆ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಹೆಬ್ಬೆಟ್ಟಗೇರಿ, ಮುಕ್ಕೋಡ್ಲು, ಮಾದಾಪುರ, ಮಕ್ಕಂದೂರು, ಹಟ್ಟಿಹೊಳೆ, ಮೇಘತ್ತಾಳು, ಹೆಮ್ಮೆತ್ತಾಳು, ಮೊಣ್ಣಂಗೇರಿ, ಗಾಳಿಬೀಡು, ಜೋಡುಪಾಲ, ಮದೆನಾಡು, ಕಾಲೂರು, ಹಟ್ಟಿಹೊಳೆ ಸೇರಿ ಹಲವು ಕಡೆಗಳಲ್ಲಿ ಭೂಕುಸಿತ ಸಂಭವಿಸಿ ಅಪಾರ ಹಾನಿಯಾಗಿತ್ತು. 

410

ಕೆಲ ಕಡೆ ಪ್ರವಾಹ ಕಾಣಿ​ಸಿ​ಕೊಂಡಿತ್ತು. ಸಾವಿರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು. 20ಕ್ಕೂ ಹೆಚ್ಚು ಮಂದಿ ಮಳೆ ಅನಾಹುತಕ್ಕೆ ಬಲಿಯಾಗಿದ್ದರು. ಜಿಲ್ಲೆಗೆ ಮುಖ್ಯಮಂತ್ರಿ, ಕೇಂದ್ರ ರಕ್ಷಣಾ ಸಚಿವರು ಭೇಟಿ ನೀಡಿದ್ದರು. 

ಕೆಲ ಕಡೆ ಪ್ರವಾಹ ಕಾಣಿ​ಸಿ​ಕೊಂಡಿತ್ತು. ಸಾವಿರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು. 20ಕ್ಕೂ ಹೆಚ್ಚು ಮಂದಿ ಮಳೆ ಅನಾಹುತಕ್ಕೆ ಬಲಿಯಾಗಿದ್ದರು. ಜಿಲ್ಲೆಗೆ ಮುಖ್ಯಮಂತ್ರಿ, ಕೇಂದ್ರ ರಕ್ಷಣಾ ಸಚಿವರು ಭೇಟಿ ನೀಡಿದ್ದರು. 

510

2018ರಲ್ಲಿ ಮನೆ ಕಳೆದುಕೊಂಡ 500ಕ್ಕೂ ಅಧಿಕ ಸಂತ್ರಸ್ತರಿಗೆ ಇತ್ತೀಚೆಗಷ್ಟೇ ರಾಜ್ಯ ಸರ್ಕಾರದಿಂದ ಮನೆ ಹಸ್ತಾಂತರ ಮಾಡಲಾಗಿದೆ.

2018ರಲ್ಲಿ ಮನೆ ಕಳೆದುಕೊಂಡ 500ಕ್ಕೂ ಅಧಿಕ ಸಂತ್ರಸ್ತರಿಗೆ ಇತ್ತೀಚೆಗಷ್ಟೇ ರಾಜ್ಯ ಸರ್ಕಾರದಿಂದ ಮನೆ ಹಸ್ತಾಂತರ ಮಾಡಲಾಗಿದೆ.

610

ಸಂಪಾಜೆ ಮಡಿಕೇರಿ ಮಧ್ಯೆ ಮೊಣ್ಣಂಗೇರಿ ಎಂಬಲ್ಲಿ ಗುಡ್ಡ ಕುಸಿದು ಮನೆ ನೆಲಸಮವಾಗಿ ಐದು ಮಂದಿ ಪ್ರಾಣ ಕಳೆದುಕೊಂಡಿದ್ದರು. ಮರುದಿನವೇ ಜೋಡುಪಾಲದಲ್ಲಿ ಮೇಘ ಸ್ಫೋಟದಿಂದ ರಸ್ತೆ, ಕೃಷಿ ಭೂಮಿಗಳಿಗೆ ಭಾರೀ ಹಾನಿ ಸಂಭವಿಸಿತ್ತು. 

ಸಂಪಾಜೆ ಮಡಿಕೇರಿ ಮಧ್ಯೆ ಮೊಣ್ಣಂಗೇರಿ ಎಂಬಲ್ಲಿ ಗುಡ್ಡ ಕುಸಿದು ಮನೆ ನೆಲಸಮವಾಗಿ ಐದು ಮಂದಿ ಪ್ರಾಣ ಕಳೆದುಕೊಂಡಿದ್ದರು. ಮರುದಿನವೇ ಜೋಡುಪಾಲದಲ್ಲಿ ಮೇಘ ಸ್ಫೋಟದಿಂದ ರಸ್ತೆ, ಕೃಷಿ ಭೂಮಿಗಳಿಗೆ ಭಾರೀ ಹಾನಿ ಸಂಭವಿಸಿತ್ತು. 

710

ಮನೆಗಳು ನೆಲ ಸಮಗೊಂಡಿತ್ತು. 2019ರ ಆಗಸ್ವ್‌ನಲ್ಲೂ ವಿರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ಭೂಕುಸಿತ ಸಂಭವಿಸಿತ್ತು. ಭಾಗಮಂಡಲದ ಕೋರಂಗಾಲದಲ್ಲಿ ಭೂಕುಸಿತ ಸೇರಿ ಹಲವು ಕಡೆಗಳಲ್ಲಿ ಪ್ರವಾಹ ಉಂಟಾಗಿತ್ತು. ಇದರಿಂದ ಜಿಲ್ಲೆಯಲ್ಲಿ 17 ಮಂದಿ ಮೃತ​ಪ​ಟ್ಟಿ​ದ್ದ​ರು. 

ಮನೆಗಳು ನೆಲ ಸಮಗೊಂಡಿತ್ತು. 2019ರ ಆಗಸ್ವ್‌ನಲ್ಲೂ ವಿರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ಭೂಕುಸಿತ ಸಂಭವಿಸಿತ್ತು. ಭಾಗಮಂಡಲದ ಕೋರಂಗಾಲದಲ್ಲಿ ಭೂಕುಸಿತ ಸೇರಿ ಹಲವು ಕಡೆಗಳಲ್ಲಿ ಪ್ರವಾಹ ಉಂಟಾಗಿತ್ತು. ಇದರಿಂದ ಜಿಲ್ಲೆಯಲ್ಲಿ 17 ಮಂದಿ ಮೃತ​ಪ​ಟ್ಟಿ​ದ್ದ​ರು. 

810

ಈ ಬಾರಿಯೂ ಆಗಸ್ಟ್‌ ಆರಂಭದಲ್ಲೇ ಭಾರಿ ಮಳೆಯಿಂದ ತಲಕಾವೇರಿಯಲ್ಲಿ ಭೂಕುಸಿತ ಹಾಗೂ ವಿವಿಧೆಡೆ ಪ್ರವಾಹ ಸಂಭವಿಸಿರುವುದು ಆತಂಕ ಮೂಡಿ​ಸಿದೆ.

ಈ ಬಾರಿಯೂ ಆಗಸ್ಟ್‌ ಆರಂಭದಲ್ಲೇ ಭಾರಿ ಮಳೆಯಿಂದ ತಲಕಾವೇರಿಯಲ್ಲಿ ಭೂಕುಸಿತ ಹಾಗೂ ವಿವಿಧೆಡೆ ಪ್ರವಾಹ ಸಂಭವಿಸಿರುವುದು ಆತಂಕ ಮೂಡಿ​ಸಿದೆ.

910

ಕಳೆದ ಕೆಲವು ದಿನಗಳಿಂದ ನಿರಂತರವಾಗಿನ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. 

ಕಳೆದ ಕೆಲವು ದಿನಗಳಿಂದ ನಿರಂತರವಾಗಿನ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. 

1010

ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಒಳಗೆ ನುಗ್ಗಿದ ನೀರು

ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಒಳಗೆ ನುಗ್ಗಿದ ನೀರು

click me!

Recommended Stories