ಗುಜರಾತ್, ಮಹಾರಾಷ್ಟ್ರದ ಸೇರಿದಂತೆ ಕೆಲ ಐತಿಹಾಸಿಕ ಪ್ರದೇಶಗಳಲ್ಲಿ ಮಾತ್ರ ಕುದುರೆ ಮೇಲೆ ಸವಾರಿ ಮಾಡಿ ಪ್ರೇಕ್ಷಣೆಯ ಸ್ಥಳ ವೀಕ್ಷಣೆ ವ್ಯವಸ್ಥೆ ಇದೆ. ಅಲ್ಲದೆ ಬದರಿನಾಥ, ಗಯಾ ಸೇರಿದಂತೆ ಬೆಟ್ಟಗುಡ್ಡಗಳ ಪ್ರದೇಶದಲ್ಲೂ ಕುದುರೆ ಸವಾರಿ ಪ್ರಖ್ಯಾತಿ ಪಡೆದಿದೆ. ಈಗ ಇದೇ ಮಾದರಿಯಲ್ಲಿ ಜಿಲ್ಲಾಧಿಕಾರಿಗಳ ಮುತುವರ್ಜಿಯಿಂದ ಕೊಪ್ಪಳ ಜಿಲ್ಲೆ ಅದರಲ್ಲೂ ಗಂಗಾವತಿ ತಾಲೂಕಿನ ಕುಮಾರ ರಾಮ ಬೆಟ್ಟದ ಕುದುರೆ ಕಲ್ಲು, ಹೇಮಗುಡ್ಡ, ವಾಣಿ ಭದ್ರೇಶ್ವರ ದೇವಸ್ಥಾನ, ಚಿಕ್ಕಬೆಣಕಲ್ ಗುಡ್ಡದ ಮೇಲೆ ಇರುವ ಮೌರ್ಯರ ಮನೆಗಳು, ಮುಕ್ಕುಂಪ ಮಲ್ಲಿಕಾರ್ಜುನ ದೇವಸ್ಥಾನ ಸೇರಿದಂತೆ ಈ ಭಾಗದಲ್ಲಿರುವ ಐತಿಹಾಸಿಕ ಪ್ರದೇಶ ವೀಕ್ಷಣೆಗೆ ಕುದುರೆ ಸವಾರಿ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಜಿಲ್ಲಾದಿಕಾರಿಗಳೇ ಸವಾರಿ ಮಾಡಿ ವೀಕ್ಷಣೆ ಮಾಡಿ ಸಂತಸ ಪಟ್ಟ ಜಿಲ್ಲಾಧಿಕಾರಿ