ಕಳೆದ ಎರಡು ವರ್ಷಗಳ ಹಿಂದೆಯೇ ಎಫ್ಎಂಸಿ ಕಾಲೇಜು ರಸ್ತೆಯಲ್ಲಿ ಸಾಯಿ ಕ್ರೀಡಾಂಗಣದ ಎದುರು ಮಳೆಗೆ ಕುಸಿದಿದ್ದ ರಾಜಕಾಲುವೆ ತಡೆಗೋಡೆ ಮತ್ತೆ ಕುಸಿಯುವ ಆತಂಕ ಎದುರಾಗಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತೆ ಬಿರುಕುಗಳು ಕಾಣಿಸಿಕೊಂಡಿದ್ದು ಇಡೀ ಮಣ್ಣು ಕುಸಿದು ಕಾಲುವೆ ಮುಚ್ಚಿ ಹೋಗುವ ಆತಂಕ ಎದುರಾಗಿದೆ. ಕಾಮಗಾರಿ ಮಾಡಲಾಗುತ್ತಿದ್ದರೂ ಅದು ಪೂರ್ಣಗೊಂಡಿಲ್ಲ.
ಮಧ್ಯಭಾಗದಲ್ಲಿ ಮಾತ್ರವೇ ತಡೆಗೋಡೆ ನಿರ್ಮಿಸಲಾಗಿದೆ. ಇದರಿಂದ ಎರಡು ಬದಿಗಳಲ್ಲಿ ಭಾರೀ ಪ್ರಮಾಣದ ಮಣ್ಣು ಕುಸಿಯುವ ಹಂತ ತಲುಪಿದೆ. ತಡೆಗೋಡೆ ಪಕ್ಕಕ್ಕೆ ಸುರಿದಿರುವ ಮಣ್ಣು ಕಾಲುವೆಗೆ ಜಾರುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಜಾರಿದಲ್ಲಿ ರಸ್ತೆಯೂ ಕುಸಿಯುವ ಭೀತಿ ಇದೆ. ರಸ್ತೆ ಕುಸಿದಲ್ಲಿ ಸುಬ್ರಹ್ಮಣ್ಯನಗರ, ಎಫ್ಎಂಸಿ ಕಾಲೇಜು, ಗಾಳಿಬೀಡು ಸೇರಿದಂತೆ ಹಲವೆಡಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಬಂದ್ ಆಗಲಿದೆ. ಒಂದು ವೇಳೆ ಹಾಗೆಯೇ ಆದಲಿ, ವಿಜಯ ವಿನಾಯಕ ದೇವಾಲಯ ಮುಂಭಾಗದಿಂದ ಕಿರಿದಾದ ರಸ್ತೆಯಲ್ಲಿ ಎಲ್ಲಾ ವಾಹನಗಳ ಓಡಾಡಬೇಕಾದ ಪರಸ್ಥಿತಿ ನಿರ್ಮಾಣವಾಗಲಿದೆ.