ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂದೆ ಉತ್ಖನನಕ್ಕೆ ಗದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಚಾಲನೆ ನೀಡಿದರು. ಇಲ್ಲಿನ ಗಾರೆಗೆ ಪೂಜೆ ಸಲ್ಲಿಸಿ, ಉತ್ಖನನಕ್ಕೆ ಚಾಲನೆ ನೀಡಿದ್ದು, ಸ್ಥಳೀಯ ಜನರಿಗೆ ಚಿನ್ನ, ನಿಕ್ಷೇಪ ಹಾಗೂ ನಾಣ್ಯಗಳು ಸಿಗುವ ಬಗ್ಗೆ ಕುತೂಹಲ ಹೆಚ್ಚಾಗಿದೆ. ಜೊತೆಗೆ, ಅಧಿಕಾರಿಗಳಿಗೂ ಕುತೂಹಲ ಹೆಚ್ಚಾಗಿದ್ದು, ಎಲ್ಲವನ್ನೂ ಪಾರದರ್ಶಕವಾಗಿ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಜೊತೆಗೆ, ಸ್ಥಳೀಯ ಜನರೂ ಕೂಡ ಎಲ್ಲವೂ ಗ್ರಾಮಸ್ಥರ ಕಣ್ಣೆದುರಿಗೇ ನಡೆಯಬೇಕು ಎಂದು ಮನವಿ ಮಾಡಿದ್ದು, ಗ್ರಾಮದ ಜನರು ಅಲ್ಲಿ ಜಮಾಯಿಸಿದ್ದಾರೆ.