ಮನಸ್ಸಿದ್ದರೆ ಮಾರ್ಗ: ಇತರರಿಗೆ ಮಾದರಿಯಾದ ಹಾವೇರಿಯ ರೈತ..!
First Published Apr 30, 2020, 11:40 AM ISTಹಾವೇರಿ(ಏ.30): ಲಾಕ್ಡೌನ್ ಮಧ್ಯೆಯೂ ಸ್ಥಳೀಯವಾಗಿಯೇ ತರಕಾರಿಗಳ ಮಾರಾಟಕ್ಕೆ ಮಾರುಕಟ್ಟೆ ಕಂಡುಕೊಂಡ ರೈತನೊಬ್ಬ ಇತರ ರೈತರಿಗೆ ಮಾದರಿಯಾಗಿದ್ದಾರೆ. ಹೌದು, ಜಿಲ್ಲೆಯ ಬ್ಯಾಡಗಿ ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮದ ಈರಪ್ಪ ಶಿವಪ್ಪ ಕಲ್ಲಪ್ಪನವರ ಎಂದ ರೈತ ಲಾಕ್ಡೌನ್ ನಡುವೆಯೂ ದೃತಿಗೆಡದೆ ತಾವು ಬೆಳೆದ ತರಕಾರಿಗಳನ್ನು ಹಳ್ಳಿ ಹಳ್ಳಿಗಳಲ್ಲಿ ಮಾರಾಟ ಮಾಡಿ ಲಾಭಗಳಿಸಿದ್ದಾರೆ.