ಒಂದೆಡೆ ವ್ಯಾಲೆಂಟೈನ್ ಡೇ ಸಂಭ್ರಮ, ಮತ್ತೊಂದೆಡೆ ನಮ್ಮ ಬೆಂಗ್ಳೂರು ಕೆರೆ ಸಂರಕ್ಷಣೆಗೆ ದಿಟ್ಟ ಕ್ರಮ

First Published Feb 14, 2020, 5:02 PM IST

ರಾಜಧಾನಿ ಬೆಂಗಳೂರಿನ ಸೌಂದರ್ಯ ಹಾಗೂ ವಾತಾವರಣಕ್ಕೆ ಕಾರಣವಾಗಿದ್ದ ಕೆರೆಗಳು ಇಂದು ಬಹುತೇಕರಿಗೆ ಮರೆತುಹೋಗಿವೆ. ಇದೀಗ ಅವುಗಳನ್ನ ಹಿಂದಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸಲು 'ಕೆರೆ ಹಬ್ಬ' ಆಚರಿಸುವ ಮೂಲಕ ನಮ್ಮ ಬೆಂಗಳೂರು ಪೌಂಡೇಶನ್ ಮಹತ್ವದ ಹೆಜ್ಜೆ ಇಟ್ಟಿದೆ. ಅದರಂತೆ  ಶುಕ್ರವಾರ ಆಯೋಜಿಸಲಾಗಿದ್ದ ಜೋಗಿ ಕೆರೆ ಹಬ್ಬದಲ್ಲಿ ಚಿಣ್ಣರು ಪಾಲ್ಗೊಂಡು ಕೆರೆ ಬಗ್ಗೆ ತಿಳಿದುಕೊಂಡರು.

ಶಾಲಾ ಕಾಲೇಜು ಮಕ್ಕಳನ್ನು ಕೆರೆ ಆವರಣಕ್ಕೆ ಕರೆಸಿ ಅದರ ಇತಿಹಾಸದ ಕುರಿತು ಅರಿವು ಮೂಡಿಸಿ ಆಹ್ಲಾದಕರ ಚಟುವಟಿಕೆಗಳನ್ನು ನಡೆಸುವ ಮಕ್ಕಳ ಕೆರೆ ಹಬ್ಬವನ್ನು ನಮ್ಮ ಬೆಂಗಳೂರು ಪ್ರತಿಷ್ಠಾನ ಹಮ್ಮಿಕೊಂಡಿದೆ.
undefined
ಇದಕ್ಕಾಗಿ ಗುರುತಿಸಲಾದ ಕೆರೆಗಳಲ್ಲಿ ಮೊದಲನೆಯದಾಗಿ ಜೋಗಿ ಕೆರೆಯಲ್ಲಿ ಮಕ್ಕಳ ಕೆರೆ ಹಬ್ಬ ನಡೆಯಿತು.
undefined
ರೆಯ ಸುತ್ತ ನಡಿಗೆ, ಚಿತ್ರಕಲೆ ಸ್ಪರ್ಧೆ, ಸಸಿ ನೆಡುವುದು, ಪ್ರಬಂಧ ಮತ್ತು ರಸಪ್ರಶ್ನೆ ಸ್ಪರ್ಧೆ ಇತ್ಯಾದಿ ಚಟುವಟಿಕೆಗಳನ್ನು ಆಯೋಜಿಸಿ ಆ ಕೆರೆಯ ಬಗ್ಗೆ ಅರಿವು ಮೂಡಿಸಲಾಯ್ತು.
undefined
ಜೋಗಿ ಕೆರೆ ಹಬ್ಬದಲ್ಲಿ ಚಿತ್ರಕಲೆ ಬಿಡುಸುತ್ತಿರುವ ಮಕ್ಕಳು
undefined
ಜೋಗಿ ಕೆರೆ ಹಬ್ಬದಲ್ಲಿ ಮಕ್ಕಳು ಬಿಡಿಸಿರುವ ಚಿತ್ರಗಳ ನೋಟ
undefined
ನಗರದಲ್ಲಿ ಹಲವು ಕೆರೆಗಳು ಅಸ್ತಿತ್ವಕ್ಕೇ ಹೋರಾಟ ಮಾಡುತ್ತಿವೆ. ಕೆಲವುಗಳ ಅಸ್ತಿತ್ವವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆರೆಗೊಂದು ಹಬ್ಬ ಮಾಡಿ ಹಿಂದಿನ ಸಂಸ್ಕೃತಿಯನ್ನು ತಿಳಿಸಿಕೊಡುವ ಜೊತೆಗೆ, ಮಕ್ಕಳನ್ನು ಜೊತೆಗೂಡಿಸಿಕೊಂಡು ಅವರಿಗೆ ಪರಿಸರ, ಕೆರೆಯ ಮಹತ್ವ ತಿಳಿಸಿಕೊಡುವುದು
undefined
ಶುಕ್ರವಾರ ಆಯೋಜಿಸಲಾಗಿದ್ದ ಜೋಗಿ ಕೆರೆ ಹಬ್ಬದಲ್ಲಿ ಚಿಣ್ಣರು ಪಾಲ್ಗೊಂಡಿರುವುದು.
undefined
ಕೆರೆಗಳ ಸ್ವಚ್ಛತೆ ಹಾಗೂ ಅದರ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಮಹತ್ವದ ಕಾರ್ಯ ಇದಾಗಿದ್ದು, ಮತ್ತಷ್ಟು ನಾಗರಿಕರಿಗೆ, ಸಂಘ-ಸಂಸ್ಥೆಗಳಿಗೆ ಇದು ಮಾದರಿ ಆಗಬೇಕು ಎಂಬುದೇ ಇದರ ಉದ್ದೇಶವಾಗಿದೆ.
undefined
ಶಾಲಾ ಮಕ್ಕಳನ್ನು ಕೆರೆ ಆವರಣಕ್ಕೆ ಕರೆಸಿ ಅದರ ಇತಿಹಾಸದ ಕುರಿತು ಅರಿವು ಮೂಡಿಸುತ್ತಿರುವುದು.
undefined
ಈ ವರ್ಷದ ಮೊದಲ ಮಕ್ಕಳ ಕೆರೆ ಹಬ್ಬಕ್ಕಾಗಿ ಪ್ರತಿಷ್ಠಾನ ಶಾಲೆ, ಕಾಲೇಜುಗಳು ಮತ್ತು ಸ್ಥಳೀಯ ಸರಕಾರಿ ಸಂಸ್ಥೆಯೊಂದಿಗೆ ಕೈ ಜೋಡಿಸಿದೆ.
undefined
ಕೆರೆಯ ಸುತ್ತ ನಡಿಗೆ, ಚಿತ್ರಕಲೆ ಸ್ಪರ್ಧೆ, ಸಸಿ ನೆಡುವುದು, ಪ್ರಬಂಧ ಮತ್ತು ರಸಪ್ರಶ್ನೆ ಸ್ಪರ್ಧೆ ಇತ್ಯಾದಿ ಚಟುವಟಿಕೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯ್ತು.
undefined
ಮಕ್ಕಳಿಗೆ ಕೆರೆ ಸಂರಕ್ಷಣೆ ಬಗ್ಗೆ ತಿಳುವಳಿಕೆ ಮೂಡಿಸುತ್ತಿರುವುದು
undefined
click me!