Chikkamagaluru shocking incident ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಆಟದ ಮೈದಾನದಲ್ಲೇ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಘಟನೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ!
ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಆಟದ ಮೈದಾನದಲ್ಲೇ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಘಟನೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
24
ಹಾಸ್ತೆಲ್ ಬಳಿ ಧಮ್ಕಿ, ಹಾಸ್ಟೆಲ್ ವಾರ್ಡ್ನಗಳೊಂದಿಗೂ ಕಿರಿಕ್
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಣಾವರ ಮೂಲದವನಾದ ಪಾಗಲ್ ಪ್ರೇಮಿ ಪುನೀತ್ ಎಂಬುವವನೇ ಈ ಕೃತ್ಯ ಎಸಗಿದ ಆರೋಪಿ. ಹಾಸ್ಟೆಲ್ನಲ್ಲಿದ್ದುಕೊಂಡು ಓದುತ್ತಿದ್ದ ಕಡೂರು ಮೂಲದ ಅಪ್ರಾಪ್ತ ಬಾಲಕಿ ಮೇಲೆ ಕಣ್ಣು ಹಾಕಿದ್ದ. ನೀನೇ ನೇನೆ ಮನಸೆಲ್ಲ ನೀನೇ ಅಂತಾ ಅಪ್ರಾಪ್ತ ಬಾಲಕಿಯ ಬೆನ್ನುಬಿದ್ದಿದ್ದ ಪಾಗಲ್ ಪ್ರೇಮಿ ಪುನೀತ್. ಆ ಬಾಲಕಿಯಾದರೋ ವಯಸ್ಕಳಲ್ಲ. ಇವನ ಕಾಟಕ್ಕೆ ಬೇಸತ್ತುಹೋಗಿ ಅಸಹಾಯಕಳಾಗಿದ್ದಳು. ಹಾಸ್ಟೆಲ್ನಿಂದ ಹೊರಬರುವುದು ನಿಲ್ಲಿಸಿದಾಗ ಪ್ರತಿದಿನ ಅಪ್ರಾಪ್ತ ಬಾಲಕಿ ನೋಡಲು ಹಾಸ್ಟೆಲ್ ಬಳಿ ಹೋಗುತ್ತಿದ್ದ ಆಸಾಮಿ ಅಲ್ಲಿಯೂ ಕಿರಿಕ್ ಮಾಡುತ್ತಿದ್ದ. ಇದರಿಂದ ಹಾಸ್ಟೆಲ್ ವಾರ್ಡನ್ ಅಪ್ರಾಪ್ತ ಬಾಲಕಿಗೆ ಎಚ್ಚರಿಕೆ ನೀಡಿದ್ದರು.
34
ಬಾಲಕಿಯ ಪೋಷಕರಿಗೂ ಧಮ್ಕಿ!
ಹುಚ್ಚನ ಕಾಟಕ್ಕೆ ಬೇಸತ್ತು ಹಾಸ್ಟೆಲ್ ನಿಂದ ಕೆಲದಿನಗಳ ಊರಿಗೆ ಹೋದ್ರೂ, ಪೋಷಕರ ನಂಬರ್ ಕಲೆಕ್ಟ್ ಮಾಡಿಕೊಂಡು ಅವರಿಗೂ ಬೆದರಿಕೆ ಹಾಕಿದ್ದನಂತೆ ಪಾಗಲ್ ಪ್ರೇಮಿ. ಕುಟುಂಬಸ್ಥರು ಕೂಡ ಪಾಗಲ್ ಪ್ರೇಮಿಯ ಬೆದರಿಕೆಗೆ ದಂಗಾಗಿದ್ದಾರೆ.
ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿಯನ್ನ ಕಾಲಲ್ಲಿ ಹಾಕಿ ತುಳಿದ ಪಾಪಿ
ಚಿಕ್ಕಮಗಳೂರು ನಗರದ ಎಸ್ಪಿ ಡಿಸಿ ಕಚೇರಿ ಬಳಿಯೇ ಇರುವ ಕ್ರೀಡಾಂಗಣದಲ್ಲಿ ಯುವತಿ ಸಿಕ್ಕಿದ್ದಾಳೆ. ಅಲ್ಲಿಯೂ ಪ್ರೀತಿಸುವಂತೆ ಯುವತಿಗೆ ಧಮ್ಕಿ ಹಾಕಿದ್ದಾನೆ. ಆಗ ಅಪ್ರಾಪ್ತ ಯುವತಿ ಪ್ರೀತಿ ನಿರಾಕರಿಸಿದ್ದಾಳೆ. ಇದರಿಂದ ಕುಪಿತಗೊಂಡ ಪ್ರೇಮಿ ಹುಚ್ಚನಾಗಿದ್ದಾನೆ. ಏಕಾಏಕಿ ಬಾಲಕಿ ಮೇಲೆ ಎರಗಿ ಮನಬಂದಂತೆ ಥಳಿಸಿದ್ದಾನೆ. ಯುವತಿಯನ್ನ ಕಾಲಲ್ಲಿ ಹಾಕಿ ತುಳಿದಿದ್ದಾನೆ. ಅವನ ಅನಿರಿಕ್ಷಿತ ದಾಳಿಯಿಂದ ಯುವತಿ ಭಯಭೀತಳಾಗಿದ್ದಾಳೆ.
ಬಾಲಕಿ ಮೇಲೆ ಹಲ್ಲೆ ನಡೆಸುವುದು ಕಂಡು ಸುತ್ತಮುತ್ತಲಿನ ಸ್ಥಳೀಯರು ಓಡಿ ಬಂದಿದ್ದಾರೆ. ಜನ ತನ್ನ ಬರುತ್ತಿರುವುದು ಕಂಡು ಪಾಗಲ್ ಪ್ರೇಮಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಸ್ಥಳೀಯರು ಆರೋಪಿಯನ್ನ ಚೇಸ್ ಮಾಡಿ ಎಸ್ಪಿ ಮನೆ ಮುಂದೆಯೇ ಹಿಡಿದು ಅಕ್ಕ ಪಡೆಗೆ ಕರೆಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.