ಮಸ್ಕಿ ಉಪಚುನಾವಣೆ: ಬಿಜೆಪಿ ರೈತರ ಪರವಾಗಿದೆ, ಬಿ. ವೈ.ವಿಜಯೇಂದ್ರ

First Published Apr 7, 2021, 3:22 PM IST

ಮಸ್ಕಿ(ಏ.07): ಮುಖ್ಯಮಂತ್ರಿ ಯಡಿಯೂಸರಪ್ಪ ರೈತರ ಬಗ್ಗೆ ಕಾಳಜಿ ಇರುವ ನಾಯಕ. ಅವರ ಮಗನಾಗಿ ನೀವು ಕೂಡ ರೈತರನ್ನು ಕೈ ಬಿಡಬೇಡಿ. ರೈತರು ನಿಮ್ಮನ್ನು ನಂಬಿದರೆ, ಕೊನೆಯವರೆಗೂ ನಿಮ್ಮ ಕೈ ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಲ್ಲಿ ಉದ್ಬಾಳ ಗ್ರಾಮದ ರೈತರು ಮನವಿ ಮಾಡಿದರು.

ತಾಲೂಕಿನ ಉದ್ಬಾಳ ಗ್ರಾಮದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಪ್ರಚಾರ ನಡೆಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ
undefined
ಮತಯಾಚನೆ ಸಂದರ್ಭದಲ್ಲಿ ವಿಜಯೇಂದ್ರ ಅವರಿಗೆ ನೇಗಿಲು ಕಾಣಿಕೆಯಾಗಿ ನೀಡಿದ ರೈತರು
undefined
ನೇಗಿಲನ್ನು ಹೆಗಲ ಮೇಲೆ ಹೊತ್ತುಕೊಂಡ ವಿಜಯೇಂದ್ರ ಖುಷಿಪಟ್ಟು, ಬಿಜೆಪಿ ರೈತರ ಪರವಾಗಿದೆ. ರೈತರಿಗೆ ಬೇಕಾದ ನೀರು ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ನಿಮ್ಮ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದು ಅಭಿಮಾನ ವ್ಯಕ್ತಪಡಿಸಿದರು.
undefined
ಮುದ್ದೇಬಿಹಾಳ ಶಾಸಕ ನಡಹಳ್ಳಿ, ರಾಜೂಗೌಡ, ಎಂ.ಪಿ.ರೇಣುಕಾಚಾರ್ಯ ಬಿಜೆಪಿಯ ಯುವ ಮುಖಂಡ ವೀರೇಶ ಕಮತರ ಇದ್ದರು.
undefined
click me!