Shivanand neelannavar release: ಶಿವಂ ಅಸೋಸಿಯೇಟ್ ವಂಚನೆ ಕೇಸ್ ಆರೋಪಿ ಶಿವಾನಂದ ನೀಲಣ್ಣವರ ಜೈಲಿಂದ ಬಿಡುಗಡೆ!

Published : Jun 15, 2026, 09:19 PM IST

ಬೆಳಗಾವಿಯ ಶಿವಂ ಅಸೋಸಿಯೇಟ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ನೀಲಣ್ಣವರ (shivanand neelannavar), ಬೆಂಗಳೂರಿನ ನ್ಯಾಯಾಲಯದಿಂದ ಮಧ್ಯಂತರ ಜಾಮೀನು (Bail) ಪಡೆದು ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕಠಿಣ ಷರತ್ತುಗಳ ಅಡಿಯಲ್ಲಿ ತನಿಖೆಯನ್ನು ಎದುರಿಸಲಿದ್ದಾರೆ.

PREV
15
ಶಿವಂ ಅಸೋಸಿಯೇಟ್ ವಂಚನೆ ಪ್ರಕರಣ

ಬೆಳಗಾವಿ ವಂಚನೆ ಪ್ರಕರಣಕ್ಕೆ (Belagavi Fraud Case) ಸಂಬಂಧಿಸಿದಂತೆ ರಾಜ್ಯಾದ್ಯಂತ ಸದ್ದು ಮಾಡಿದ್ದ ಬೆಳಗಾವಿಯ 'ಶಿವಂ ಅಸೋಸಿಯೇಟ್' (shivam associates) ವಂಚನೆ ಪ್ರಕರಣದ ಮುಖ್ಯ ಆರೋಪಿ ಶಿವಾನಂದ ನೀಲಣ್ಣವರ (shivanand neelannavar) ಕೊನೆಗೂ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಈ ಬಿಡುಗಡೆ ನಡೆದಿದೆ.

25
ಬಂಧನ ಮತ್ತು ಕಾನೂನು ಪ್ರಕ್ರಿಯೆ:

ಹೂಡಿಕೆದಾರರಿಗೆ ವಂಚಿಸಿದ ಆರೋಪದ ಮೇಲೆ ಶಿವಾನಂದ ನೀಲಣ್ಣವರ ಅವರನ್ನು ಮೇ 15 ರಂದು ಬೆಳಗಾವಿಯ ಮಾಳಮಾರುತಿ ಪೊಲೀಸರು ಬಂಧಿಸಿದ್ದರು. ಅಂದಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಇವರು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದರು. ಈ ನಡುವೆ ಜಾಮೀನಿಗಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪುರಸ್ಕರಿಸಿದ ಬೆಂಗಳೂರಿನ 92ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್, ಜೂನ್ 12 ರಂದು ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿತ್ತು.

35
'ಓಂ ನಮಃ ಶಿವಾಯ' ಎಂದ ಆರೋಪಿ:

ಜೈಲಿನಿಂದ ಬಿಡುಗಡೆಯಾಗಿ ಹೊರಬರುತ್ತಿದ್ದಂತೆ ಮಾಧ್ಯಮಗಳು ಶಿವಾನಂದ ನೀಲಣ್ಣವರ ಅವರನ್ನು ಮಾತನಾಡಿಸಲು ಪ್ರಯತ್ನಿಸಿದವು. ಆದರೆ, ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಅವರು, ಕ್ಯಾಮರಾ ಮುಂದೆ ಕೇವಲ ‘ಓಂ ನಮಃ ಶಿವಾಯ, ಇದಕ್ಕಿಂತ ಬೇರೆ ಏನನ್ನೂ ನಾನು ಹೇಳುವುದಿಲ್ಲ’ ಎಂದು ಹೇಳಿ ಅಲ್ಲಿಂದ ಹೊರಟುಹೋದರು.

45
ಕೋರ್ಟ್ ವಿಧಿಸಿರುವ ಕಠಿಣ ಷರತ್ತುಗಳು:

ಆರೋಪಿಗೆ ಮಧ್ಯಂತರ ಜಾಮೀನು ನೀಡುವಾಗ ನ್ಯಾಯಾಲಯವು ಕೆಲವು ಕಠಿಣ ಷರತ್ತುಗಳನ್ನು ವಿಧಿಸಿದೆ:

ಬಾಂಡ್ ಶೂರಿಟಿ: 3 ಲಕ್ಷ ರೂಪಾಯಿಗಳ ಬಾಂಡ್ ಶೂರಿಟಿಯನ್ನು ಒದಗಿಸಬೇಕು.

ಹಾಜರಾತಿ: ಜೂನ್ 27 ರಂದು ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು.

ದೇಶ ಬಿಡುವಂತಿಲ್ಲ: ಯಾವುದೇ ಕಾರಣಕ್ಕೂ ಅನುಮತಿಯಿಲ್ಲದೆ ದೇಶ ಬಿಟ್ಟು ತೆರಳುವಂತಿಲ್ಲ ಎಂದು ಕೋರ್ಟ್ ಷರತ್ತು ವಿಧಿಸಿದೆ.

55
ಕೋಟ್ಯಂತರ ರೂ. ವಂಚನೆ

ಶಿವಂ ಅಸೋಸಿಯೇಟ್ ಮೂಲಕ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ ಎಂಬ ಗಂಭೀರ ಆರೋಪ ಇವರ ಮೇಲಿದ್ದು, ತನಿಖೆ ಮುಂದುವರೆದಿದೆ. ಈಗ ಬಿಡುಗಡೆಯಾಗಿರುವ ನೀಲಣ್ಣವರ ಮುಂದಿನ ದಿನಗಳಲ್ಲಿ ತನಿಖೆಗೆ ಹೇಗೆ ಸಹಕರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Read more Photos on
click me!

Recommended Stories