ಗಂಗಾವತಿ: 6 ತಿಂಗಳ ಬಳಿಕ ಭಕ್ತರಿಗೆ ದರ್ಶನ ನೀಡಿದ ಆಂಜ​ನೇಯ ಸ್ವಾಮಿ

First Published Sep 10, 2020, 11:14 AM IST

ರಾಮಮೂರ್ತಿ ನವಲಿ

ಕೊಪ್ಪಳ(ಸೆ.10): ಆಂಜನೇಯ ಜನ್ಮ ಸ್ಥಳ, ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿರುವ ಆಂಜನೇಯಸ್ವಾಮಿ ದರ್ಶನಕ್ಕೆ ಭಕ್ತರ ಸಮೂಹ ಹೊರಟಿದೆ. 6 ತಿಂಗಳಿನಿಂದ ಕೊರೋನಾ ಹಿನ್ನೆಲೆಯಲ್ಲಿ ದೇವಸ್ಥಾನಗಳು ಸೇರಿದಂತೆ ಪ್ರವಾಸಿತಾಣಗಳ ವೀಕ್ಷಣೆಗೆ ನಿಷೇಧ ಮಾಡಲಾಗಿತ್ತು.
 

ಒಂದು ತಿಂಗಳಿನಿಂದ ಲಾಕ್‌ಡೌನ್‌ ಸಡಿಲಗೊಳಿಸಿದ್ದರಿಂದ ಈಗ ದರ್ಶನಕ್ಕೆ ಮುಂದಾದ ಭಕ್ತರು
undefined
ರಾಮಾಯಣ ಇತಿಹಾಸ ಹೊಂದಿರುವ ಗಂಗಾವತಿ ತಾಲೂಕಿನ ಆನೆಗೊಂದಿ ಪ್ರದೇಶದ ಕಿಷ್ಕಿಂಧೆಯ ಅಂಜನಾದ್ರಿ ವಿಶ್ವ ವಿಖ್ಯಾತಿ ಪಡೆದಿದೆ.
undefined
ಕಳೆದ ಆರು ತಿಂಗಳಿನಿಂದ ಕೊರೋನಾ ಸೋಂಕಿನಿಂದ ಬೇಸತ್ತ ಭಕ್ತರು ಈಗ ದೇವರ ಮೊರೆ ಹೊಕ್ಕಿದ್ದಾರೆ. ಈಗ ಸರ್ಕಾರ ಕೊರೋನಾ ಮಾಗ​ರ್‍ಸೂಚಿ ಸಡಿಲಗೊಳಿಸಿದ್ದರಿಂದ ದೇವಸ್ತಾನಗಳ ಬಾಗಿಲು ತೆರೆದಿದ್ದು, ಭಕ್ತರು ದೇವಸ್ಥಾನಗಳಿಗೆ ತೆರಳಿ ಕೊರೋನಾ ನಿವಾರಣೆಗಾಗಿ ವಿಶೇಷ ಪೂಜೆ ಸಲ್ಲಿಸುತ್ತಿರುವುದು ಸಾ​ಮಾನ್ಯವಾಗಿದೆ.
undefined
ದೇವಸ್ಥಾನ ಬೆಳಗ್ಗೆ 6 ಗಂಟೆಗೆ ಬಾಗಿಲು ತೆರೆಯಲಾಗುತ್ತಿದ್ದು, ಸಂಜೆ 6ರ ವರೆಗೆ ಪ್ರವೇಶ ಕಲ್ಪಿಸಲಾಗಿದೆ. ಈಗ ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಕನಾ​ರ್‍ಟಕದ ವಿವಿಧ ಜಿಲ್ಲೆಗಳಿಂದ ಭಕ್ತರು ದಿನ ನಿತ್ಯ ಆಗಮಿಸುತ್ತಿದ್ದಾರೆ. ಮಾಸ್ಕ್‌ , ಸ್ಯಾನಿ​ಟೈ​ಸ​ರ್‌ ಕಡ್ಡಾಯವಾಗಿದೆ. ಸಾಮಾಜಿಕ ಅಂತರ ಕಾಪಾಡು​ವುದರ ಮೂಲಕ ದರ್ಶನ ಪಡೆಯ ಬಹುದಾಗಿದೆ.
undefined
ದೇವಸ್ಥಾನಗಳ ಬಾಗಿಲು ತೆರೆದಿದ್ದರಿಂದ ದಿನ ನಿತ್ಯ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.
undefined
ಅಂಜನಾದ್ರಿ ಪರ್ವತಕ್ಕೆ ಬರುವ ಭಕ್ತರಿಗೆ ಕಡ್ಡಾಯವಾಗಿ ಮಾಸ್ಕ್‌ ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಸೂಚಿಸಲಾಗಿದೆ.
undefined
ಬೆಟ್ಟ ಹತ್ತುವ ಒಂದು ಮಾರ್ಗ ಮತ್ತು ಬೆಟ್ಟದಿಂದ ನಿರ್ಗಮಿಸಲು ಬೇರೆ ಮಾರ್ಗ ಮಾಡಲಾಗಿದೆ. ದಿನಕ್ಕೆ ಮೂರು ಬಾರಿ ದೇವಸ್ಥಾನದ ಆವರಣ ಮತ್ತು ಮೆಟ್ಟಿಲುಗಳನ್ನು ಸ್ಯಾನಿ​ಟೈ​ಸ​ರ್‌ನಿಂದ ಸ್ವಚ್ಛಗೊಳಿಸಲಾಗುತ್ತದೆ. ದಿನನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಶನಿವಾರ ಮಾತ್ರ 5 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಿದ್ದಾರೆ. 60 ವರ್ಷ ಮೇಲ್ಪಟ್ಟವೃದ್ಧ​ರಿಗೆ ದರ್ಶನದ ಅವಕಾಶ ನೀಡುವುದಿಲ್ಲ ಎಂದು ಅಂಜನಾದ್ರಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಹಾಗೂ ಕಂದಾಯ ನಿರೀಕ್ಷಕರು ಮಂಜುನಾಥಸ್ವಾಮಿ ಅವರು ತಿಳಿಸಿದ್ದಾರೆ.
undefined
click me!