ಉತ್ತರಖಂಡ ದುರಂತ; 10 ಮೃತ ದೇಹ ಪತ್ತೆ, ಪ್ರವಾಹದ ಭೀಕರ ಚಿತ್ರಣ ಇಲ್ಲಿದೆ!
First Published Feb 7, 2021, 9:27 PM ISTಉತ್ತರಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿರುವ ಹಿಮಪಾತ ಹಾಗೂ ಪ್ರವಾಹಕ್ಕೆ ಇಡೀ ರಾಜ್ಯವೇ ತತ್ತರಿಸಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, 10 ಮೃತದೇಹ ಪತ್ತೆಯಾಗಿದೆ. 150ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. 180ಕ್ಕೆ ಕುರಿ, ಮೇಕೆ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಇತ್ತ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಹೆಚ್ಚುವರಿ ಹಣ ಘೋಷಿಸಿದ್ದಾರೆ. ಪ್ರವಾಹದ ಭೀಕರ ಚಿತ್ರಣ ಇಲ್ಲಿದೆ.