ಒಂದು ದೇಹ ಎರಡು ಜೀವ, ಅವಳಿಗಳ ವಿಶಿಷ್ಟ ಜೋಡಿ: ಸರ್ಕಾರದಿಂದಲೂ ಸಿಕ್ತು ನ್ಯೂ ಇಯರ್ ಗಿಫ್ಟ್!

First Published Dec 24, 2021, 12:06 AM IST

ಇಲ್ಲಿಯವರೆಗೆ ನೀವು ಒಂದಲ್ಲ ಒಂದು ರೀತಿಯ ಜನರನ್ನು ನೋಡಿರುತ್ತೀರಿ. ಆದರೆ ದೇಹ ಒಂದು ಎರಡು ಜೀವಗಳ ಚಿತ್ರವನ್ನು ನೋಡಿರಲಿಕ್ಕಿಲ್ಲ. ಾದರೀಗ ಅಂತಹ ಅವಳಿಗಳ ಕತೆ ಭಾರೀ ವೈರಲ್ ಆಗುತ್ತಿದೆ. ಇವರ ದೇಹ ಒಂದು, ಆದರೆ ಎರಡು ತಲೆ, ನಾಲ್ಕು ಕೈ ಮತ್ತು ಎರಡು ಕಾಲುಗಳಿವೆ. ಇದೀಗ ಪಂಜಾಬ್ ನ ಚನ್ನಿ ಸರ್ಕಾರ ಹೊಸ ವರ್ಷಕ್ಕೂ ಮುನ್ನ ಇಬ್ಬರಿಗೂ ಬಹುದೊಡ್ಡ ಉಡುಗೊರೆ ನೀಡಿದೆ.

ವಾಸ್ತವವಾಗಿ, ಅಮೃತಸರದಲ್ಲಿ ವಾಸಿಸುತ್ತಿರುವ ಅವಳಿ ಸಹೋದರರಾದ ಸೊಹ್ನಾ-ಮೊಹ್ನಾ ಅವರು ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (PSPCL) ನಲ್ಲಿ ಉದ್ಯೋಗವನ್ನು ಪಡೆದಿದ್ದಾರೆ. ರಾಜ್ಯ ಸರ್ಕಾರ ಅವರ ನೋವು ಅರ್ಥ ಮಾಡಿಕೊಂಡು ಸರ್ಕಾರಿ ನೌಕರಿ ನೀಡಿದೆ. ಇಬ್ಬರೂ ಸಹೋದರರು ಡಿಸೆಂಬರ್ 20 ರಿಂದ ಕರ್ತವ್ಯಕ್ಕೆ ಸೇರಿದ್ದಾರೆ.

ಸರ್ಕಾರಿ ನೌಕರಿ ಸಿಕ್ಕಿದ್ದಕ್ಕೆ ಸೊಹ್ನಾ-ಮೊಹ್ನಾ ತುಂಬಾ ಖುಷಿಯಾಗಿದ್ದಾರೆ. ನಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾ ಅವರು ಈ ಸಂದರ್ಭದಲ್ಲಿ ನಮಗೆ ಶಾಲಾ ಶಿಕ್ಷಣವನ್ನು ನೀಡಿದ ಪಂಜಾಬ್ ಸರ್ಕಾರ ಮತ್ತು ಪಿಂಗಲ್ವಾರಾ ಸಂಸ್ಥೆಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದಿದ್ದಾರೆ. ಲಭ್ಯವಾದ ಮಾಹಿತಿ ಪ್ರಕಾರ, ಆರಂಭದಲ್ಲಿ ಅವರಿಗೆ 20 ಸಾವಿರ ರೂಪಾಯಿ ಸಂಬಳ ನೀಡಲಾಗುವುದು ಎಂದು ತಿಳಿದು ಬಂದಿದೆ.

ಪಿಎಸ್‌ಪಿಸಿಎಲ್ ಸಿಎಂಡಿ ವೇಣು ಪ್ರಸಾದ್ ಮಾತನಾಡಿ, ಅಪರೂಪದ ಅಂಗವೈಕಲ್ಯ ಹೊಂದಿರುವ ವ್ಯಕ್ತಿ ಐಟಿಐನಲ್ಲಿ ಡಿಪ್ಲೊಮಾ ಮಾಡುತ್ತಿದ್ದು, ಎಲೆಕ್ಟ್ರಿಷಿಯನ್ ವೃತ್ತಿಯನ್ನು ಮಾಡಲು ಬಯಸಿದ್ದಾರೆ ಎಂದಿದ್ದಾರೆ. ನಾವು ಅವನೊಂದಿಗೆ ಸಂಪರ್ಕದಲ್ಲಿದ್ದೆವು ಮತ್ತು ಅವರು ತುಂಬಾ ಸಕ್ರಿಯವಾಗಿರುವುದನ್ನು ಕಂಡುಕೊಂಡೆವು. ಅವಳಿಗಳಿಗೆ ಉತ್ತಮ ತಾಂತ್ರಿಕ ಜ್ಞಾನವಿದೆ. ಹೀಗಾಗಿ ಅವರನ್ನು ವಿಕಲಚೇತನ ಕೋಟಾದಡಿ ವಿದ್ಯುತ್ ಇಲಾಖೆಗೆ ನೇಮಕ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಈ ಇಬ್ಬರೂ ಸಹೋದರರು 14 ಜೂನ್ 2003 ರಂದು ನವದೆಹಲಿಯ ಸುಚೇತಾ ಕೃಪ್ಲಾನಿ ಆಸ್ಪತ್ರೆಯಲ್ಲಿ ಜನಿಸಿದರು. ಜನನದ ನಂತರ, ಇವರಿಂದ ಹೆತ್ತವರು ದೂರವಾದರು. ಇದಾದ ನಂತರ ಅಮೃತಸರದ ಪಿಂಗಲವಾಡ ಅವರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಬೀಬಿ ಇಂದರ್‌ಜಿತ್ ಕೌರ್ ಈ ಇಬ್ಬರು ಸಹೋದರರಿಗೆ ಸೊಹ್ನಾ-ಮೋಹನ ಎಂದು ಹೆಸರಿಟ್ಟಿದ್ದಾರೆ.

ಈ ಅವಳಿ ಸಹೋದರರು ಎರಡು ಹೃದಯ, ಎರಡು ಜೋಡಿ ಮೂತ್ರಪಿಂಡ, ಎರಡು ಜೋಡಿ ಕೈ ಮತ್ತು ಬೆನ್ನೆಲುಬು ಹೊಂದಿದ್ದಾರೆ. ಆದರೆ ಕೇವಲ ಒಂದು ಯಕೃತ್ತು, ಪಿತ್ತಕೋಶ, ಗುಲ್ಮ ಮತ್ತು ಒಂದು ಜೋಡಿ ಕಾಲುಗಳನ್ನು ಹೊಂದಿದ್ದಾರೆ. ಜನನದ ನಂತರ, ಅವರು ದೆಹಲಿ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆದರು. ಆದರೆ, ಅಲ್ಲಿ ಒಂದುಯ ಮಗುವಿನ ಪ್ರಾಣಕ್ಕೆ ಹಾನಿ ಇದೆ, ಹೀಗಾಗಿ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 

ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ತನಗೆ ಕೆಲಸದ ಭರವಸೆ ನೀಡಿದ್ದರೆಂದು ಕೆಲಸ ಸಿಕ್ಕ ನಂತರ ಸೋಹ್ನಾ ಹೇಳಿದ್ದಾರೆ. ಇದಾದ ನಂತರ ಪವರ್‌ಕಾಮ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ವೇಣು ಪ್ರಸಾದ್ ಹಾಲಿ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರೊಂದಿಗೆ ಮಾತನಾಡಿದ್ದಾರೆ. ಇದೀಗ 5 ತಿಂಗಳ ನಂತರ ಈ ಕೆಲಸ ಸಿಗಬೇಕೆಂಬ ಅವರ ಆಸೆ ಈಡೇರಿದೆ.

click me!