ಉದ್ಯೋಗದಲ್ಲಿ(Jobs) ಮೀಸಲು(Reservation) ಕಲ್ಪಿಸುವುದು ರಾಜಕೀಯ(Politics) ಉದ್ದೇಶಕ್ಕಾಗಿ ಅಲ್ಲ. ಆಡಳಿತದಲ್ಲಿ ಆರ್ಥಿಕತೆ ಮತ್ತು ಸಾಮಾಜಿಕ ಸಮತೋಲನ ಅಗತ್ಯ. ಉತ್ತಮ ಆರ್ಥಿಕ ತಜ್ಞ ಅಥವಾ ಉತ್ತಮ ಆಡಳಿತಗಾರ ಯಾವಾಗಲೂ ಒಮ್ಮೆಗೆ ಎರಡು ಕುದುರೆ ಏರಿ ಮುಂದೆ ಸಾಗಬೇಕು. ಒಂದು ಕಾರ್ಯಕ್ಷಮತೆಗೆ, ಮತ್ತೊಂದು ಸಮಾನತೆಗಾಗಿ. ನಾನು ಎರಡೂ ಕುದುರೆಗಳನ್ನು ಏರಿ ಒಂದೇ ದಿಕ್ಕಿನಲ್ಲಿ, ಒಂದೇ ವೇಗದಲ್ಲಿ ಸಾಗಬೇಕಿದೆ. ಇದು ಈ ದೇಶದ ಸವಾಲು ಎಂದು ಬೊಮ್ಮಾಯಿ ಹೇಳಿದರು.