ಕೇಜ್ರಿವಾಲ್ ಗೊಂದಲ ನಿವಾರಿಸಲು ಬಿಗ್ ಆಫರ್ ನೀಡಿದ ಬಿಜೆಪಿ ನಾಯಕ!

First Published Dec 26, 2020, 8:12 PM IST

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರದ ಕೃಷಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೃಷಿ ಮಸೂದೆ ಪ್ರತಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿತ್ತು. ಇದೀಗ ಕೃಷಿ ಮಸೂದೆಯಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ. ಕೇಜ್ರಿವಾಲ್ ತದ್ವಿರುದ್ದ ಹೇಳಿಕೆ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ಇದಕ್ಕಾಗಿ ಕೇಜ್ರಿವಾಲ್ ಗೊಂದಲ ನಿವಾರಿಸಲು ಬಿಜೆಪಿ ನಾಯಕ ಮುಂದಾಗಿದ್ದಾರೆ.

ಕೇಂದ್ರ ಕೃಷಿ ಮಸೂದೆ ವಿರೋಧಿಸಿದವರ ಪೈಕಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಂಚೂಣಿಯಲ್ಲಿದ್ದಾರೆ. ಕೇಂದ್ರ ಕೃಷಿ ಮಸೂದೆಯಿಂದ ರೈತರಿಗೆ ಯಾವ ಪ್ರಯೋಜನವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
undefined
ಕೇಜ್ರಿವಾಲ್ ಹೇಳಿಕೆಗೆ ಬಿಜೆಪಿ ನಾಯಕ ಮನೋಜ್ ತಿವಾರಿ ತಿರುಗೇಟು ನೀಡಿದ್ದಾರೆ. ಕೇಜ್ರಿವಾಲ್ ಮನೆ ಪ್ರವೇಶಿಸಲು ಯಾರಿಗೂ ಅನುಮತಿ ಇಲ್ಲ. ಹೀಗಾಗಿ ಗೊಂದಲ ನಿವಾರಿಸಲು ನಮ್ಮ ಮನೆಗೆ ಕೇಜ್ರಿವಾಲ್‌ಗೆ ಆಹ್ವಾನ ನೀಡುತ್ತಿದ್ದೇನೆ ಎಂದಿದ್ದಾರೆ.
undefined
ಭಾನುವಾರ ಮಧ್ಯಾಹ್ನ 3 ಗಂಟೆಗೆ ಕೇಜ್ರಿವಾಲ್ ನಮ್ಮ ಮನೆಗೆ ಬಂದರೆ ಅವರಿಗೆ ಕೃಷಿ ಮೂಸೂದೆ ಕುರಿತಿ ವಿವರವಾಗಿ ತಿಳಿಸುತ್ತೇನೆ. ಈ ಮೂಲಕ ಅವರ ಗೊಂದಲ ನಿವಾರಿಸುತ್ತೇನೆ ಎಂದಿದ್ದಾರೆ.
undefined
ಕೇಜ್ರಿವಾಲ್‌ರನ್ನು ನಮ್ಮ ಮನೆಗೆ ಆಹ್ವಾನಿಸಲು ಕಾರಣವಿದೆ. ಇತ್ತೀಚೆಗೆ ಬಿಜೆಪಿ ಮೇಯರ್ ಹಾಗೂ ನಾಯಕರು ಕೇಜ್ರಿವಾಲ್ ಮನೆ ಮುಂದೆ 13 ಧರಣಿ ಕೂತಿದ್ದರೂ ಸಿಎಂ ತಿರುಗಿಯೂ ನೋಡಿಲ್ಲ ಎಂದು ಮನೋಜ್ ತಿವಾರಿ ಹಳೆ ಘಟನೆ ನೆನಪಿಸಿದ್ದಾರೆ.
undefined
ಈ ಕಾರಣದಿಂದ ಕೇಜ್ರಿವಾಲ್‌ ನಮ್ಮ ಮನೆಗೆ ಬರುವಂತೆ ಆಹ್ವಾನಿಸುತ್ತಿದ್ದೇನೆ ಎಂದು ಮನೋಜ್ ತಿವಾರಿ ಹೇಳಿದ್ದಾರೆ. ಜೊತೆಯಾಗಿ ಗೊಂದಲ ನಿವಾರಿಸಿ, ರೈತರ ಏಳಿಗೆಗೆ ಶ್ರಮಿಸೋಣ ಎಂದಿದ್ದಾರೆ.
undefined
ಕೇಂದ್ರದ 3 ಕೃಷಿ ಮಸೂದೆಯಿಂದ ರೈತರಿಗೆ ಹಲವು ಪ್ರಯೋಜನಗಳಿವೆ. ಹೀಗಾಗಿ ಈ ಮಸೂದೆ ರೈತರ ಬಾಳನ್ನು ಹಸನು ಮಾಡಲಿದೆ ಎಂದು ಮನೋಜ್ ತಿವಾರಿ ಹೇಳಿದ್ದಾರೆ.
undefined
ಡಿಸೆಂಬರ್ ತಿಂಗಳ ಆರಂಭದಲ್ಲಿ ಕೇಜ್ರಿವಾಲ್ ಹಾಗೂ ಆಪ್ ಪಕ್ಷದ ಮುಖಂಡರು ರೈತ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಸಿಂಘು ಗಡಿಗೆ ತೆರಳಿ ರೈತರಿಗೆ ಬೆಂಬಲ ಸೂಚಿಸಿದ್ದರು.
undefined
click me!