ಪಂಜಾಬ್ ಮುಂಬೈ ಇಂಡಿಯನ್ಸ್ ಪಂದ್ಯ ರದ್ದಾದರೆ ಆರ್ಸಿಬಿಗೆ ಆಗೋ ಲಾಭವೇನು?
ಆರ್ಸಿಬಿ ಅಭಿಮಾನಿಗಳು ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರಾಳಿಯಾಗಲಿ ಎಂದು ಕೆಲವರು ಬಯಸಿದ್ದಾರೆ. ಕಾರಣ ಮುಂಬೈ ಇಂಡಿಯನ್ಸ್ ಫೈನಲ್ ಪ್ರವೇಶಿಸಿದರೆ ಪ್ರಶಸ್ತಿ ಗೆಲ್ಲಲಿದೆ. ಇಷ್ಟೇ ಅಲ್ಲ ಮುಂಬೈ ಇಂಡಿಯನ್ಸ್ ಫೈನಲ್ ಪ್ರವೇಶಿಸಿದರೆ ಹಣ ಬಲ ತೋಳ್ಬಲ ಅವರಿಗೆ ನೆರವಾಗಲಿದೆ ಎಂದು ಚರ್ಚೆ ನಡೆಯುತ್ತಿದೆ. ಹೀಗಾಗಿ ಹಲವರು ಪಂಜಾಬ್ ಕಿಂಗ್ಸ್ ಫೈನಲ್ ಪ್ರವೇಶಿಸಲಿ ಎಂದು ಹಾರೈಸುತ್ತಿದ್ದಾರೆ. ಇತ್ತ ಕೆಲ ಅಭಿಮಾನಿಗಳು ಯಾರೇ ಬರಲಿ, ಬಲಿಷ್ಠ ತಂಡ ಹೊಡೆದು ಪ್ರಶಸ್ತಿ ಗೆಲ್ಲಬೇಕು ಎಂದು ಆತ್ಮವಿಶ್ವಾಸದಲ್ಲಿದ್ದಾರೆ.