ಭಾರತದ ಯುವ ರಣಜಿ ಕ್ರಿಕಿಟಿಗ ಹಠಾತ್ ಸಾವು, ಶೋಕಸಾಗರದಲ್ಲಿ ಕ್ರಿಕೆಟ್ ಲೋಕ!

Published : Dec 24, 2024, 08:44 PM IST

ಕೇವಲ 39 ವಯಸ್ಸು. ರಣಜಿ, ವಿಜಯ್ ಹಜಾರೆ ಸೇರಿದಂತೆ ಹಲವು ಬಿಸಿಸಿ ಟೂರ್ನಿಗಳಲ್ಲಿ ತಂಡವನ್ನು ಗೆಲ್ಲಿಸಿದ ಬ್ಯಾಟರ್, ಹಠಾತ್ ನಿಧನರಾಗಿದ್ದಾರೆ. 

PREV
14
ಭಾರತದ ಯುವ ರಣಜಿ ಕ್ರಿಕಿಟಿಗ ಹಠಾತ್ ಸಾವು, ಶೋಕಸಾಗರದಲ್ಲಿ ಕ್ರಿಕೆಟ್ ಲೋಕ!

ಬೆಂಗಾಲ್‌ನಲ್ಲಿ ಕ್ರಿಕೆಟಿಗನ ಸಾವು. 39 ವರ್ಷದ ಕ್ರಿಕೆಟಿಗನ ಹಠಾತ್ ಸಾವು ಕ್ರಿಕೆಟ್ ಲೋಕಕ್ಕೆ ಆಘಾತ ತಂದಿದೆ. ಬೆಂಗಾಲ್ ರಣಜಿ ತಂಡದ ಮಾಜಿ ಆಟಗಾರ ಸುವೋಜಿತ್ ಬ್ಯಾನರ್ಜಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

24

ರಣಜಿ ಟ್ರೋಫಿಯಲ್ಲಿ ಆಡಿದ್ದ ಸುವೋಜಿತ್ ಬ್ಯಾನರ್ಜಿ

ಸುವೋಜಿತ್ ಬ್ಯಾನರ್ಜಿ2014 ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಒಡಿಶಾ ವಿರುದ್ಧ ಬೆಂಗಾಲ್ ಪರ ಪಾದಾರ್ಪಣೆ ಮಾಡಿದ್ದರು. ಮೂರು ರಣಜಿ ಪಂದ್ಯಗಳನ್ನೂ ಆಡಿದ್ದರು. ಬೆಳಗ್ಗೆ ಉಪಾಹಾರ ಸೇವಿಸಿದ ನಂತರ ಮನೆಯಲ್ಲಿ ಮಲಗಿದ್ದ ಸುವೋಜಿತ್ ಕೆಲವು ಗಂಟೆಗಳ ನಂತರ ಎಚ್ಚರಗೊಳ್ಳಲಿಲ್ಲ. ಕೂಡಲೇ ವೈದ್ಯರನ್ನು ಕರೆಸಲಾಯಿತಾದರೂ ಆಗಲೇ ಸಾವನ್ನಪ್ಪಿದ್ದರು ಎಂದು ವೈದ್ಯರು ಘೋಷಿಸಿದರು.

34

ಲಕ್ಷ್ಮಿ ರತನ್ ಶುಕ್ಲಾ ಹೇಳಿದ್ದೇನು?

ಸುವೋಜಿತ್ ಬ್ಯಾನರ್ಜಿ ಇನ್ನೂ ಸ್ಥಳೀಯ ಕ್ರಿಕೆಟ್ ಆಡುತ್ತಿದ್ದರು. ಅವರು ಒಳ್ಳೆಯ ಆಟಗಾರ ಮತ್ತು ಒಳ್ಳೆಯ ಸ್ನೇಹಿತ ಎಂದು ಲಕ್ಷ್ಮಿ ರತನ್ ಶುಕ್ಲಾ ಸಂತಾಪ ಸೂಚಿಸಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು.

44

ಬಲಗೈ ಬ್ಯಾಟ್ಸ್‌ಮನ್ ಸುವೋಜಿತ್

ಸುವೋಜಿತ್ ಬ್ಯಾನರ್ಜಿ ಬಲಗೈ ಬ್ಯಾಟ್ಸ್‌ಮನ್ ಮತ್ತು ಆಫ್ ಸ್ಪಿನ್ನರ್ ಆಗಿದ್ದರು. ೨೦೦೮-೦೯ ರಿಂದ ೨೦೧೬-೧೭ ರವರೆಗೆ ದೇಶಿ ಕ್ರಿಕೆಟ್‌ನಲ್ಲಿ ಈಸ್ಟ್ ಬೆಂಗಾಲ್ ಪರ ಆಡಿದ್ದರು. ಎರಡು ಬಾರಿ ತಂಡವನ್ನು ಮುನ್ನಡೆಸಿದ್ದರು. ಅವರ ಸಾವು ಬೆಂಗಾಲ್ ಕ್ರಿಕೆಟ್‌ಗೆ ನಷ್ಟ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories