ಮಲ್ಲೇಶ್ವರಂ ಎಂಎಲ್ಎ ಕಾಲೇಜಿನಲ್ಲಿ ಯುವಸೌರಭದ ಸಂಭ್ರಮ

By Gowthami KFirst Published Aug 20, 2022, 8:12 PM IST
Highlights

ಮಲ್ಲೇಶ್ವರಂ ನಲ್ಲಿನ ಎಂಎಲ್ಎ ಕಾಲೇಜಿನಲ್ಲಿ ಸಂಭ್ರಮದ 'ಯುವ ಸೌರಭ' ಕಾರ್ಯಕ್ರಮ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಭಗತ್ ಸಿಂಗ್' ನಾಟಕ ಪ್ರದರ್ಶನದ ಜತೆಗೆ ಜಾನಪದ ಗಾಯನ, ಡೊಳ್ಳು ಕುಣಿತ ಮತ್ತು ಕಂಸಾಳೆ ಕಲಾ ಪ್ರದರ್ಶನ ನಡೆಯಿತು.

ಬೆಂಗಳೂರು (ಆ. 20): ಮಲ್ಲೇಶ್ವರಂ ನಲ್ಲಿನ ಎಂಎಲ್ಎ ಕಾಲೇಜಿನಲ್ಲಿ ಶನಿವಾರ ಸಂಭ್ರಮದ 'ಯುವ ಸೌರಭ' ಕಾರ್ಯಕ್ರಮ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಭಗತ್ ಸಿಂಗ್' ನಾಟಕ ಪ್ರದರ್ಶನದ ಜತೆಗೆ ಜಾನಪದ ಗಾಯನ, ಸಮೂಹ ನೃತ್ಯ, ಸುಗಮ ಸಂಗೀತ, ಡೊಳ್ಳು ಕುಣಿತ ಮತ್ತು ಕಂಸಾಳೆ ಕಲಾ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ,  ಅಭಿವೃದ್ಧಿ ಹೊಂದಿದ ಮತ್ತು ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಯುವಜನರ ಕೊಡುಗೆ ಅತ್ಯಂತ ಮೌಲಿಕವಾದುದು ಎಂದರು. ಯುವಜನರಿಗೆ ಗುಣಮಟ್ಟದ ಸಮಕಾಲೀನ ಶಿಕ್ಷಣ ಮತ್ತು ಕನಸಿನ ಉದ್ಯೋಗ ಸಿಗುವಂತೆ ಮಾಡಲು ಸ್ಕಿಲ್ ಕನೆಕ್ಟ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ಆಧುನಿಕ ಕೌಶಲ್ಯಗಳನ್ನು ಕಲಿಸಲಾಗುತ್ತಿದ್ದು, ನಿರುದ್ಯೋಗ ನಿವಾರಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಮತ್ತು ಸಮಗ್ರ ಕಲಿಕೆಗೆ ಆದ್ಯತೆ ಕೊಡಲಾಗಿದೆ. ಉದ್ಯಮ ವಲಯಕ್ಕೆ ಬೇಕಾದ ನುರಿತ ಮಾನವ ಸಂಪನ್ಮೂಲವನ್ನು ಒದಗಿಸಲು ಕರ್ನಾಟಕವು ಸಮರ್ಥವಾಗಿದೆ ಎಂದು ಅವರು ಪ್ರತಿಪಾದಿಸಿದರು.

 

ಯುವಜನತೆಯ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವ ನಾಡು ನಮ್ಮ ಕರ್ನಾಟಕ.

ನಮ್ಮ ಬೆಂಗಳೂರು, ನಮ್ಮ ಕರ್ನಾಟಕದ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ, ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸಲು ಅಗತ್ಯ ಕ್ರಮ ವಹಿಸಲಾಗುತ್ತಿದೆ. ಹಾಗೆಯೇ, 'ಸ್ಕಿಲ್‌ ಕನೆಕ್ಟ್‌ ಪೋರ್ಟಲ್‌' ಮೂಲಕ ಉದ್ಯೋಗಾವಕಾಶಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

2/2 pic.twitter.com/tp0jOmwxbZ

— Dr. Ashwathnarayan C. N. (@drashwathcn)

ಭಾರತ ಮತ್ತು ಜಗತ್ತಿನ ಪ್ರತಿಭಾವಂತರನ್ನು ಬೆಂಗಳೂರು ಆಕರ್ಷಿಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ಅವಕಾಶಗಳ ಕೊರತೆಯಾಗಲಿ, ಹಣದುಬ್ಬರದ ಬಿಸಿಯಾಗಲಿ ಇಲ್ಲ. ಒಟ್ಟಾರೆ ರಾಜ್ಯದಲ್ಲಿ ಅತ್ಯುತ್ತಮ ಕಾರ್ಯ ಪರಿಸರವಿದೆ ಎಂದು ಅವರು ನುಡಿದರು.

ಕಲಿಕೆಯ ತಾಣಗಳಲ್ಲಿ ಸ್ವಾತಂತ್ರ್ಯ ಇದ್ದಾಗ ಯುವಜನರಿಂದ ಸೃಜನಶೀಲ ಸಾಧನೆಗಳು ಸಾಧ್ಯವಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ವಿನೂತನ ಅನುಭವಗಳಿಗೆ ತೆರೆದು ಕೊಳ್ಳಬೇಕು ಎಂದು ಅಶ್ವತ್ಥ ನಾರಾಯಣ ಸಲಹೆ ನೀಡಿದರು.

 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಲ್ಲೇಶ್ವರ ಲೇಡೀಸ್‌ ಕ್ಲಬ್‌, ಅಕಾಡೆಮಿ ಆಫ್‌ ಹೈಯರ್‌ ಲರ್ನಿಂಗ್‌ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ 'ಯುವ ಸೌರಭ'ದಲ್ಲಿ ಪಾಲ್ಗೊಳ್ಳಲಾಯಿತು.

ಜನಪದ ಕಲೆಗಳ ತವರೂರಾದ ನಮ್ಮ ಕರ್ನಾಟಕದ ವಿಶಿಷ್ಟ, ವಿಭಿನ್ನ ಕಲೆಗಳನ್ನು ಉಳಿಸಿ, ಬೆಳೆಸುವಲ್ಲಿ ಯುವಜನತೆಯ ತೊಡಗಿಸಿಕೊಳ್ಳುವಿಕೆ ಬಹುಮುಖ್ಯ.

1/2 pic.twitter.com/8B8F7XzSlZ

— Dr. Ashwathnarayan C. N. (@drashwathcn)

ಕಾರ್ಯಕ್ರಮದಲ್ಲಿ ಎಂಎಲ್ಎ ಸಂಸ್ಥೆಯ ಗೌರವ ಕಾರ್ಯದರ್ಶಿ ಲಕ್ಷ್ಮೀ ನಾಗೇಶ್ವರ, ಪ್ರಿನ್ಸಿಪಾಲ್ ಪಿ.ವಿ.ಪದ್ಮಜಾ,  ಸಮಯ ಪ್ರತಿಷ್ಠಾನದ ಅಧ್ಯಕ್ಷೆ ಮತ್ತು ಬಿಜೆಪಿ ನಾಯಕಿ ಕಾವೇರಿ ಕೇದಾರನಾಥ್ ಮುಂತಾದವರಿದ್ದರು.

click me!