ಶಿಕ್ಷಕನ ಶಿಕ್ಷೆಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಲೇರಿದ ತೆಲಂಗಾಣದ 2 ನೇ ತರಗತಿಯ ಬಾಲಕ!

Published : Mar 06, 2022, 05:44 PM ISTUpdated : Mar 06, 2022, 08:30 PM IST
ಶಿಕ್ಷಕನ ಶಿಕ್ಷೆಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಲೇರಿದ ತೆಲಂಗಾಣದ 2 ನೇ ತರಗತಿಯ ಬಾಲಕ!

ಸಾರಾಂಶ

2 ನೇ ತರಗತಿಯ ಬಾಲಕನೋರ್ವ ತನ್ನ ಶಿಕ್ಷಕನ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಲೇರಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಶಿಕ್ಷಕನ ದೈಹಿಕ ಶಿಕ್ಷೆಯ ಬಗ್ಗೆ ದೂರು ನೀಡಿದ್ದು, ಶಿಕ್ಷಕನನ್ನು ಬಂಧಿಸಿ ಶಿಕ್ಷೆ ವಿಧಿಸಿ ಎಂದು ಮನವಿ ಮಾಡಿಕೊಂಡಿದ್ದಾನೆ.

ತೆಲಂಗಾಣ: ತೆಲಂಗಾಣದಲ್ಲಿ (Telangana ) 2 ನೇ ತರಗತಿಯ ಬಾಲಕನೋರ್ವ ತನ್ನ ಶಿಕ್ಷಕನ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಲೇರಿರುವ ಘಟನೆ  ನಡೆದಿದೆ. ಅನಿಲ್ ನಾಯ್ಕ್ (Anil Naik) ಎಂಬ ಬಾಲಕ ಮಹಬೂಬಾಬಾದ್‌ನ  (Mahabubabad) ಪೊಲೀಸ್ ಠಾಣೆಯಬಾಗಿಲು ತಟ್ಟಿ, ತನ್ನ ಶಿಕ್ಷಕನ (Teacher) ದೈಹಿಕ ಶಿಕ್ಷೆಯ (physical punishment) ಬಗ್ಗೆ ದೂರು ನೀಡಿದ್ದು,  ಶಿಕ್ಷಕನನ್ನು ಬಂಧಿಸಿ ಶಿಕ್ಷೆ ವಿಧಿಸಿ ಎಂದು ಮನವಿ ಮಾಡಿಕೊಂಡಿದ್ದಾನೆ. 

ಠಾಣೆಗೆ ಬಂದ ಮಗುವನ್ನು  ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ರಮಾದೇವಿ ( Ramadevi) ಅವರು ಏಕೆ ಬಂದಿದ್ದೀಯಾ ಎಂದು  ಪ್ರಶ್ನಿಸಿದ್ದಾರೆ. ಈ ವೇಳೆ  ಶಿಕ್ಷಕ ತನ್ನನ್ನು ಹೊಡೆದಿದ್ದಾನೆ ಎಂದು ಮಗು ಉತ್ತರಿಸಿದೆ. ಶಿಕ್ಷಕರು ಏಕೆ ಹೊಡೆದರು ಎಂದು ಇನ್ಸ್‌ಪೆಕ್ಟರ್ ಕೇಳಿದಾಗ,  ಸರಿಯಾಗಿ ಓದದ ಕಾರಣ ಉತ್ತರಿಸಿದ್ದಾನೆ. 

Ukraine Educational Institutions: ರಷ್ಯಾ ದಾಳಿಯಿಂದ ಉಕ್ರೇನ್ ನಲ್ಲಿ 160 ಶಿಕ್ಷಣ ಸಂಸ್ಥೆಗಳು ನಾಶ!

ಬೇರೆ ಯಾವುದೇ ವಿದ್ಯಾರ್ಥಿಯ ಮೇಲೆ ಶಿಕ್ಷಕರು ದೈಹಿಕ ಹಿಂಸೆ ನೀಡಿದ್ದಾರಾ ಎಂದು ಇನ್ಸ್‌ಪೆಕ್ಟರ್ ವಿಚಾರಿಸಿದರು. ಇಲ್ಲ ಎಂದು ವಿದ್ಯಾರ್ಥಿ ಅನಿಲ್ ನಾಯ್ಕ್ ಹೇಳಿದ್ದು, ನನಗೊಬ್ಬನಿಗೇ ಹೊಡೆದಿದ್ದಾರೆ ಎಂದಿದ್ದಾನೆ. ಬಾಲಕ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಬಯ್ಯಾರಂ ಮಂಡಲದ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯಾಗಿದ್ದಾನೆ. 

"

ಬಾಲಕನಿಂದ ವಿವರಣೆ ಪಡೆದ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ರಮಾದೇವಿ, ವಿದ್ಯಾರ್ಥಿನಿಯ ಕಷ್ಟವನ್ನು ಸಾವಧಾನದಿಂದ ಆಲಿಸಿದರು. ಅದರ ನಂತರ, ಸಮಸ್ಯೆಯನ್ನು ಪರಿಹರಿಸಲು ಬಾಲಕನನ್ನು ಮತ್ತೆ ಶಾಲೆಗೆ ಕರೆದೊಯ್ದರು. ಆದರೆ, ವಿದ್ಯಾರ್ಥಿ ಯಾವುದೇ ರಾಜಿಗೆ ಸಿದ್ಧವಿರಲಿಲ್ಲ. ಬಳಿಕ ಕೌನ್ಸೆಲಿಂಗ್ ನಡೆಸಿ ಸಮಸ್ಯೆ ಬಗೆಹರಿಸಲಾಯಿತು ಎಂದು ತಿಳಿದುಬಂದಿದೆ.

INCOME TAX RECRUITMENT 2022: ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ

ತಾಯಿ ತಮ್ಮನನ್ನು ಸೇರಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪತ್ರ ಬರೆದ ಕೇರಳ ಬಾಲಕ:  ಕೆಲ ದಿನಗಳ ಹಿಂದೆ ಕೇರಳದ 2 ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಅಫ್ಲಾಹ್ ರೋಶನ್, ತನ್ನ ಕುಟುಂಬವನ್ನು ಮತ್ತೆ ಒಂದಾಗುವಂತೆ ವಿನಂತಿಸಿ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಅವರ ಶಾಲೆಯ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ. ಪತ್ರದಲ್ಲಿ ಅವನ ಒಂದು ಬೇಡಿಕೆಯೆಂದರೆ ಅವನ ತಾಯಿ ಮನೆಗೆ ಬರಬೇಕು, ಮತ್ತು ಅವನು ತನ್ನ ಕಿರಿಯ ಸಹೋದರನೊಂದಿಗೆ ಆಟವಾಡಲು  ಇಚ್ಚಿಸುತ್ತಿದ್ದಾನೆ . ಪತಿಯೊಂದಿಗೆ ಜಗಳವಾಡಿದ ನಂತರ ರೋಷನ್ ತಾಯಿ, ಅವರ ತವರು ಮನೆಯಲ್ಲಿ ಇದ್ದಾರೆ ಎನ್ನಲಾಗಿದೆ. ಈ ಘಟನೆಯ ನಂತರ ಬಾಲಕ ತನ್ನ ತಾಯಿಯನ್ನು ಎರಡು ಬಾರಿ ಭೇಟಿಯಾಗಿದ್ದಾನೆ ಮತ್ತು ಅವನ ಕಿರಿಯ ಸಹೋದರ ತನ್ನ ಅಜ್ಜಿಯ ಮನೆಯಲ್ಲಿ ತನ್ನ ತಾಯಿಯೊಂದಿಗೆ ನೆಲೆಸಿದ್ದಾನೆ. ಮಕ್ಕಳ ಹಕ್ಕು ಆಯೋಗ ಸೂಕ್ತ ಕ್ರಮ ಕೈಗೊಂಡು ಆದಷ್ಟು ಬೇಗ ತಮ್ಮ ಕುಟುಂಬವನ್ನು ಒಗ್ಗೂಡಿಸುತ್ತದೆ ಎಂದು ರೋಷನ್ ಭರವಸೆ ಇಟ್ಟುಕೊಂಡಿದ್ದಾನೆ.

ಶಾಂತಿಗಾಗಿ ಜಗಳಗಂಟಿ ಸೊಸೆಯನ್ನು ಹೊರ ಹಾಕಬಹುದು: ಕೋರ್ಟ್‌ ಮಹತ್ವದ ಆದೇಶ: ಮಗ ಮತ್ತು ಸೊಸೆಯ ಜಗಳದಿಂದ ಶಾಂತಿಯುತ ಜೀವನಕ್ಕೆ ಅಡ್ಡಿಪಡಿಸಿದ ಹಿರಿಯರಿಗೆ ದೆಹಲಿ ಹೈಕೋರ್ಟ್ ದೊಡ್ಡ ಪರಿಹಾರದ ಮಾರ್ಗವನ್ನು ತೋರಿಸಿದೆ. ಮಗ ಮತ್ತು ಸೊಸೆಯ ನಡುವೆ ಜಗಳವಾದರೆ, ವಯಸ್ಸಾದ ಪೋಷಕರಿಗೆ ಸೊಸೆಯನ್ನು ಮನೆಯಿಂದ ಹೊರ ಹಾಕುವ ಹಕ್ಕು ಇದೆ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಶಾಂತಿಯುತ ಜೀವನ ನಡೆಸುವ ಹಕ್ಕು ಪೋಷಕರಿಗೆ ಇದೆ, ಜಗಳ ಬಿಡಿಸಿಕೊಳ್ಳಲಾಗದ ಸೊಸೆಗೆ ಅವಿಭಕ್ತ ಮನೆಯಲ್ಲಿ ವಾಸಿಸುವ ಹಕ್ಕಿಲ್ಲ ಎಂದು ಹೈಕೋರ್ಟ್ ಹೇಳಿದೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ