'NEET ವಂಚಿತ ಮಕ್ಕಳೊಂದಿಗೆ ನಾವು ನಿಲ್ಲಬೇಕು'

Published : May 06, 2019, 11:59 AM ISTUpdated : May 06, 2019, 12:07 PM IST
'NEET ವಂಚಿತ ಮಕ್ಕಳೊಂದಿಗೆ ನಾವು ನಿಲ್ಲಬೇಕು'

ಸಾರಾಂಶ

ನೀಟ್ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳ ಜೊತೆ ನಾವು ನಿಲ್ಲಬೇಕಿದೆ| ವಿಶೇಷ ಪರೀಕ್ಷೆ ನಡೆಸಲು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಒತ್ತಾಯಿಸೋಣ: ಸುರೇಶ್ ಕುಮಾರ್

ಬೆಂಗಳೂರು[ಮೇ.06]: ರೈಲು ವಿಳಂಬವಾದ ಹಿನ್ನೆಲೆಯಲ್ಲಿ ಹಲವಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳ ಜೊತೆ ನಾವು ನಿಲ್ಲಬೇಕಿದೆ. ಈ ಮಕ್ಕಳಿಗೆ ವಿಶೇಷ ಪರೀಕ್ಷೆ ನಡೆಸಲು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಒತ್ತಾಯಿಸೋಣ ಎಂದಿದ್ದಾರೆ.

ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಗೆ ಮನವಿಯೊಂದನ್ನು ಮಾಡಿರುವ ಸುರೇಶ್ ಕುಮಾರ್ 
ಹಂಪಿ ಎಕ್ಸ ಪ್ರೆಸ್ ರೈಲಿನ ಆಗಮನದ ವಿಳಂಬದಿಂದ ಮತ್ತು ಧಿಡೀರ್ ಪರೀಕ್ಷಾ ಕೇಂದ್ರ ಬದಲಾವಣೆಯಿಂದ ತಮ್ಮದಲ್ಲದ ತಪ್ಪಿಗೆ "ನೀಟ್" ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಆ ಸುಮಾರು 500 ವಿದ್ಯಾರ್ಥಿಗಳ ಜೊತೆ ನಾವೆಲ್ಲಾ ನಿಲ್ಲಬೇಕು. ಇವರೆಲ್ಲಾ ನಮ್ಮ‌ಮಕ್ಕಳು.‌ ಈ ಅಮಾಯಕ ವಿದ್ಯಾರ್ಥಿಗಳಿಗಾಗಿ ವಿಶೇಷ ಪರೀಕ್ಷೆ ನಡೆಸಿ ಇವರ ಕನಸು ಕಮರಿಹೋಗದಂತೆ ನೋಡಿಕೊಳ್ಳಬೇಕು.‌ ಪಕ್ಷಾತೀತವಾಗಿ ನಾವೆಲ್ಲರೂ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಒತ್ತಾಯ ತರೋಣ. ಈ ಕೆಲಸ ತುರ್ತಾಗಿ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.

ಇಷ್ಟೇ ಅಲ್ಲದೇ 'ವಿಶೇಷ ಪರೀಕ್ಷೆ ನಡೆಸುವ  ಬಗ್ಗೆ ಸದಾನಂದಗೌಡರ ಜೊತೆ ಮಾತನಾಡಿದ್ದೇನೆ. ಸದಾನಂದಗೌಡರು ಇಂದು ಸಂಬಂಧಿಸಿದ ಸಚಿವರ ಜೊತೆ ಮಾತನಾಡಿ ಪ್ರಯತ್ನ ಮಾಡೋದಾಗಿ ತಿಳಿಸಿದ್ದಾರೆ ಎಂದು  ಸುರೇಶ್ ಕುಮಾರ್ ಹೇಳಿದ್ದಾರೆ.

PREV
click me!

Recommended Stories

ಮುಂದಿನ ಶೈಕ್ಷಣಿಕ ವರ್ಷದಿಂದ ಗಣಿತ ಪರೀಕ್ಷಾ ಪದ್ಧತಿ ಬದಲಾವಣೆ ಬಹುತೇಕ ಫಿಕ್ಸ್, ವರದಿ ಕೊಡಲು ಶಿಕ್ಷಣ ಸಚಿವರ ಸೂಚನೆ
ಪ್ರಶ್ನೆಪತ್ರಿಕೆ ಸೋರಿಕೆ, ಎಚ್ಚೆತ್ತ ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಿಪರೇಟರಿ–2, 3 ಪರೀಕ್ಷೆಗೆ ಖಡಕ್ ರೂಲ್ಸ್!