ಸಿಎಂ ಅವರ ಮತ್ತೊಂದು ಹಗರಣ ಬಯಲಿಗೆ?

Published : Jan 03, 2018, 12:46 PM ISTUpdated : Apr 11, 2018, 12:43 PM IST
ಸಿಎಂ ಅವರ ಮತ್ತೊಂದು ಹಗರಣ ಬಯಲಿಗೆ?

ಸಾರಾಂಶ

- ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಡಿನೋಟಿಫೈ ಮಾಡಿದ ಸಿಎಂ - ಬಿಜೆಪಿ ಮುಖಂಡನಿಂದ ಸಿಎಂ ವಿರುದ್ಧ ಆರೋಪ

ಬೆಂಗಳೂರು: ಹಿಂದೆ ಮೈಸೂರು ಅರಸರು ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಡಿನೋಟಿಫೈ ಮಾಡಿದ್ದಾರೆ, ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ ಅವರು ಆರೋಪಿಸಿದ್ದಾರೆ.

ಮೂರು ಎಕರೆ 39 ಗುಂಟೆ ಜಾಗವನ್ನು ಮುಖ್ಯಮಂತ್ರಿ ಡಿನೋಟಿಫೈ ಮಾಡಿದ್ದಾರೆ, ಎಂದರು. 

ಜಗದೀಶ್ ಶೆಟ್ಟರ್ ಅವರ ಸರ್ಕಾರ ಇದ್ದಾಗಲೂ ಈ ಜಾಗವನ್ನು ಡಿನೋಟಿಫೈ ಮಾಡಲು ಆಗ್ರಹಿಸಿ ಅರ್ಜಿ ಬಂದಿತ್ತು, ಆದರೆ, ಶೆಟ್ಟರ್ ಅವರು ಅದನ್ನು ಒಪ್ಪಲಿಲ್ಲ. ಇದೀಗ ಸಿಎಂ ಸಿದ್ದರಾಮಯ್ಯ  ಅವರು ಉದ್ಯಾನವನ, ಸಾರ್ವಜನಿಕ ಅನುಕೂಲಕ್ಕೆ ಮೀಸಲಿಟ್ಟು ಜಾಗವನ್ನು ಡಿನೋಟಿಫಿಕೇಶನ್ ಮಾಡಿದ್ದು, ಕೋಟ್ಯಾಂತರ ರುಪಾಯಿ ಅವ್ಯವಹಾರ ನಡೆದಿದೆ, ಎಂದು ಆರೋಪಿಸಿದ್ದಾರೆ. 
 

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ