ಸಹಪಾಠಿಯನ್ನೇ ಕೊಂದ ಭಗ್ನ ಪ್ರೇಮಿ

By Suvarna Web DeskFirst Published Feb 20, 2018, 6:50 PM IST
Highlights

ಪ್ರೇಮ ವೈಫಲ್ಯಕ್ಕೆ ನೊಂದು ವಿದ್ಯಾರ್ಥಿನಿಯನ್ನು ಚೂರಿ ಇರಿದು ಹತ್ಯೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದೆ.

ಮಂಗಳೂರು: ಪ್ರೇಮ ವೈಫಲ್ಯಕ್ಕೆ ನೊಂದು ವಿದ್ಯಾರ್ಥಿನಿಯನ್ನು ಚೂರಿ ಇರಿದು ಹತ್ಯೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದೆ.


ಬಿಎಸ್ಸಿ ವಿದ್ಯಾರ್ಥಿನಿ ಅಕ್ಷತಾ ಕೊಲೆಯಾದ ದುರ್ದೈವಿ. ಪ್ರೇಮ ವೈಫಲ್ಯದಿಂದ ಆಕ್ರೋಶಗೊಂಡು ಕಾರ್ತಿಕ್ ಈ ದುಷ್ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. 

ಸಹಪಾಠಿಯನ್ನೇ ಹತ್ಯೆಗೈದು ನಂತರ ಈತ ಆತ್ಮಹತ್ಯೆಗೆ ಯತ್ನಿಸಿದ್ದಾನೆ, ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಕಾರ್ತಿಕ್ ಚಿಕಿತ್ಸೆ ಪಡೆಯುತ್ತಿದ್ದು, ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
 

click me!