ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಸುವರ್ಣ ಸೌಧದ ಮುಂದೆ ಕಾರ್ಮಿಕ ಸಂಘಟನೆ ಪ್ರತಿಭಟನೆ

Published : Nov 25, 2016, 11:04 AM ISTUpdated : Apr 11, 2018, 12:42 PM IST
ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಸುವರ್ಣ ಸೌಧದ ಮುಂದೆ ಕಾರ್ಮಿಕ ಸಂಘಟನೆ ಪ್ರತಿಭಟನೆ

ಸಾರಾಂಶ

ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ  ಅಧಿವೇಶನ 5 ನೇ ದಿನಕ್ಕೆ ಕಾಲಿಟ್ಟದೆ. ಇಂದು ಸಹ ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸುವರ್ಣ ಸೌಧದ ಮುಂದೆ  ಪ್ರತಿಭಟನೆಗಿಳಿದಿವೆ.

ಬೆಳಗಾವಿ(ನ.25): ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ  ಅಧಿವೇಶನ 5 ನೇ ದಿನಕ್ಕೆ ಕಾಲಿಟ್ಟದೆ. ಇಂದು ಸಹ ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸುವರ್ಣ ಸೌಧದ ಮುಂದೆ  ಪ್ರತಿಭಟನೆಗಿಳಿದಿವೆ.

ಧಾರವಾಡದ  'ಟಾಟಾ ಮಾರ್ಕೋಪೋಲೊ' ಹಾಗೂ ಬಳ್ಳಾರಿಯ ಜಿಂದಾಲ್, ಹಾಗೂ ಏಕಾಸ್ ಕಾರ್ಖಾನೆಗಳು ಕಾರ್ಮಿಕರ  ಮೇಲೆ ದಬ್ಬಾಳಿಕೆ ನಡೆಸುತ್ತಿವೆ. ಕಾರ್ಮಿಕ ಹೋರಾಟದಲ್ಲಿ ಭಾಗಿಯಾದ ಮುಖಂಡರನ್ನು ಸೇವೆಯಿಂದ ವಜಾ

ಮಾಡಲಾಗಿದೆ ಎಂದು ಸಾವಿರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾಗಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಕಾರ್ಮಿಕ ಮುಖಂಡರ ವಜಾ ಆದೇಶ ರದ್ದಾಗಬೇಕು. ರಾಜ್ಯದ್ಯಂತ ಗುತ್ತಿಗೆ ಕಾರ್ಮಿಕ ಪದ್ಧತಿ  ರದ್ದಾಗಬೇಕು. ಕಾರ್ಮಿಕರ ಕನಿಷ್ಠ

ವೇತನ 22 ಸಾವಿರ ನಿಗದಿ ಮಾಡಬೇಕು. ದಿನಗೂಲಿ ಹಾಗೂ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಹಗಲು ರಾತ್ರಿ ಧರಣಿ ಆರಂಭಿಸಿದ್ದಾರೆ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ