ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ : ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕ

By Web DeskFirst Published Oct 22, 2019, 1:22 PM IST
Highlights

ಸಾರಿಗೆ ಬಸ್ ಚಾಲಕನ ಸಮಯ ಪ್ರಜ್ಞೆ 20 ಜನರ ಪ್ರಾಣ ಕಾಪಾಡಿದೆ. ಬಸ್ ಚಾಲಕ ಕಂದಕಕ್ಕೆ ಉರುಳುತ್ತಿದ್ದ ಬಸ್ ನಿಯಂತ್ರಿಸಿ ಜೀವ ರಕ್ಷಿಸಿದ್ದಾರೆ.

ಹುಬ್ಬಳ್ಳಿ [ಅ.22]: ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 

ಹುಬ್ಬಳ್ಳಿ ತಾಲೂಕಿನ ಚನ್ನಾಪುರ ಗ್ರಾಮದ ಕೆರೆಯ ಪಕ್ಕದಲ್ಲಿಯೇ  ರಸ್ತೆ ಬದಿಯಲ್ಲಿ ಬಾರೀ ಕಂದಕವಾಗಿದ್ದು, ಕಂದಕಲದಲ್ಲಿ ಬಸ್ ಸಿಲು ಸಂಪೂರ್ಣ ವಾಲಿದ್ದು, ಈ ವೇಳೆ ಬಸ್ ಚಾಲಕನ ನಿಯಂತ್ರಣದಿಂದ ಅವಘಡವೊಂದು ತಪ್ಪಿದಂತಾಗಿದೆ. 

ಸಾರಿಗೆ ಇಲಾಖೆಗೆ ಸೇರಿದ ಬಸ್ ಗಿರಿಯಾಲದಿಂದ ಚನ್ನಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳುತ್ತಿತ್ತು. ಮಳೆಯಿಂದ ಉಂಟಾದ ಕಂದಕ ಕಾಣಿಸದೇ ಬಸ್ ವಾಲಿದ್ದು, ಈ ವೇಳೆ ಚಾಲಕ ನಾರಾಯಣ್ ತಮ್ಮ ಚಾಲಾಕಿನಿಂದ ಬಸ್ಸಿನಲ್ಲಿದ್ದ 20ಕ್ಕೂ ಅಧಿಕ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆ ಕುಸಿದು ಕಂದಕವಾಗಿದ್ದು,  ಅದೃಷ್ಟವಶಾತ್ ಅವಘಡವೊಂದು ತಪ್ಪಿದೆ.

click me!