ಕನ್ನಡ ರಾಜ್ಯೋತ್ಸವದಂದು ಬೆಳ್ತಂಗಡಿಯಲ್ಲಿ ತುಳು ಧ್ವಜ ಹಾರಾಟ

Published : Nov 02, 2019, 10:12 AM IST
ಕನ್ನಡ ರಾಜ್ಯೋತ್ಸವದಂದು ಬೆಳ್ತಂಗಡಿಯಲ್ಲಿ ತುಳು ಧ್ವಜ ಹಾರಾಟ

ಸಾರಾಂಶ

ಬೆಳ್ತಂಗಡಿಯಲ್ಲಿ ತುಳು ಧ್ವಜ ಹಾರಾಟ| ಕರ್ನಾಟಕ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಕನ್ನಡ ಧ್ವಜಕಟ್ಟೆಯಲ್ಲಿ ತುಳು ಧ್ವಜ ಹಾರಾಟ|ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಗೇಟ್‌ ಮುಂಭಾಗವೂ ತುಳುನಾಡ ಧ್ವಜ|

ಬೆಳ್ತಂಗಡಿ(ನ.2]: ತುಳುನಾಡ ಧ್ವಜ ಎಂದು ಹೇಳಲಾಗುತ್ತಿರುವ ಬಾವುಟವೊಂದನ್ನು ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭ ಹಾರಿಸಿರುವ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ವರದಿಯಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೆಳ್ತಂಗಡಿ ಬಸ್ ನಿಲ್ದಾಣದ ಮುಂಭಾಗವಿರುವ ಕರ್ನಾಟಕ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಕನ್ನಡ ಧ್ವಜಕಟ್ಟೆಯಲ್ಲಿ ನ.1 ರಂದು ಬೆಳ್ಳಂಬೆಳಗ್ಗೆ ತುಳುನಾಡ ಧ್ವಜ ಹಾರಿಸಿ ಕನ್ನಡಧ್ವಜವನ್ನು ಕೆಳಭಾಗದಲ್ಲಿ ಹಾರಿಸುವ ಕೃತ್ಯ ಎಸಗಲಾಗಿದೆ. ಶುಕ್ರವಾರ ಅಪರಾಹ್ನ 12ರ ವರೆಗೂ ಧ್ವಜಹಾರಾಡುತ್ತಿತ್ತು. ಮತ್ತೊಂದೆಡೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಗೇಟ್‌ ಮುಂಭಾಗವೂ ತುಳುನಾಡ ಧ್ವಜ ಕಟ್ಟಲಾಗಿತ್ತು. ಮಧ್ಯಾಹ್ನದ ಬಳಿಕ ಪೋಲಿಸರು ಬಂದು ಏರಿಸಿರುವ ಧ್ವಜವನ್ನು ತೆರವುಗೊಳಿಸಿದ್ದಾರೆ. ಈ ಹಿಂದೆಯೂ ತಾಲೂಕಿನಲ್ಲಿ ತುಳುನಾಡ ಸಂಘಟನೆಯೊಂದು ತುಳು ಧ್ವಜ ಹಾರಿಸಿದ ಸಂದರ್ಭದಲ್ಲಿ ಪೊಲೀಸರು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದ ಘಟನೆಯೂ ನಡೆದಿತ್ತು.

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!