ಕುಕ್ಕೆಗೆ ಭೇಟಿ ನೀಡಿದ ಪವನ್‌ ಕಲ್ಯಾಣ್‌: ಆಶ್ಲೇಷಾ ಬಲಿ ಸೇವೆ ನೆರವೇರಿಸಿದ ಟಾಲಿವುಡ್ ನಟ

By Suvarna NewsFirst Published Mar 30, 2022, 2:02 PM IST
Highlights

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆಲುಗು ಸೂಪರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಮಂಗಳವಾರ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಸೇವೆ ನೆರವೇರಿಸಿ, ಪ್ರಸಾದ ಸ್ವೀಕರಿಸಿದರು. 

ಸುಬ್ರಹ್ಮಣ್ಯ (ಮಾ.30): ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ (Kukke Subramanya Temple) ತೆಲುಗು ಸೂಪರ್‌ ಸ್ಟಾರ್‌ ಪವನ್‌ ಕಲ್ಯಾಣ್‌ (Pawan Kalyan) ಮಂಗಳವಾರ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಸೇವೆ ನೆರವೇರಿಸಿ, ಪ್ರಸಾದ ಸ್ವೀಕರಿಸಿದರು. ಮೊದಲಿಗೆ ದೇವಸ್ಥಾನದ ‘ಭೂ ಸುಪೋಸನ್‌’ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುತ್ರಾನ್ಜೀವ ಎಂಬ ಸುಬ್ರಮಣ್ಯ ದೇವರಿಗೆ ಸಂಬಂಧ ಪಟ್ಟ ಗಿಡ ನೆಟ್ಟರು. ಬಳಿಕ ದೇವರ ದರ್ಶನ ಪಡೆದು ಮಹಾಪೂಜೆ, ಆಶ್ಲೇಷಾ ಬಲಿ ಪೂಜೆ ನೆರವೇರಿಸಿದರು ಹಾಗೂ ಪ್ರಸಾದ ಸ್ವೀಕರಿಸಿದರು. ಆದಿ ಸುಬ್ರಹ್ಮಣ್ಯ ದೇವಾಲಯದಲ್ಲಿ ವಸ್ತ್ರ ಸಮರ್ಪಣೆ ನೆರವೇರಿಸಿದರು.

ಪ್ಲಾಸ್ಟಿಕ್‌ ಎಸೆಯದಿರಿ: ದೇವಾಲಯದ 500ಕ್ಕೂ ಮಿಕ್ಕಿದ ನೌಕರರು ಆಡಳಿತ ಮಂಡಳಿಯೊಂದಿಗೆ ಸೇರಿ ಪ್ರತಿ ಏಕಾದಶಿಯಂದು ನಡೆಯುವ ಸ್ವಚ್ಛ ಮಂದಿರ ಸೇವಾ ಅಭಿಯಾನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ನಟ ಪವನ್‌ ಕಲ್ಯಾಣ್‌, ಪ್ರತಿ ದೇವಾಲಯದವರು ಕೂಡ ಇದನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇಲ್ಲಿಗೆ ಬರುವ ಭಕ್ತಾದಿಗಳು ಆದಷ್ಟು ಪ್ಲಾಸ್ಟಿಕ್‌ ಕಡಿಮೆ ಬಳಕೆ ಮಾಡಿ. ಇದು ವಿವಿಧ ನಾಗ ಸಂಚಾರದ ಕ್ಷೇತ್ರವಾಗಿದ್ದು, ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಎಲ್ಲೆಂದಲ್ಲಿ ಬಿಸಾಡಿ ಅವುಗಳಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದರು. 

Latest Videos

Bheemala Nayak ನಟ ಪವನ್ ಕಲ್ಯಾಣ್ ಸಿನಿಮಾಗೆ ಆಂಧ್ರ ಸಿಎಂ ತೊಂದರೆ?

ದೇವಸ್ಥಾನದ ವತಿಯಿಂದ ಮಾಸ್ಟರ್‌ ಪ್ಲಾನ್‌ನಲ್ಲಿ ತೆಗೆದುಕೊಳ್ಳಲು ನಿರ್ಣಯಿಸಿರುವ ಕಟ್ಟಡಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ನಾವೆಲ್ಲರೂ ಜೊತೆಗೂಡಿ ದೇವಾಲಯದ ಪಾವಿತ್ಯತೆ ಹಾಗೂ ಪರಂಪರೆಯನ್ನು ಮುಂದುವರಿಸೋಣ ಎಂದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ ರಾಂ ಸುಳ್ಳಿ, ಸದಸ್ಯ ಪ್ರಸನ್ನ ದರ್ಬೆ ಮತ್ತಿತರರು ಹಾಜರಿದ್ದರು.

'ಭೀಮ್ಲಾ ನಾಯಕ್' ಭರ್ಜರಿ ಯಶಸ್ಸು: ಪವನ್‌ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ (Rana Daggubati) ಕಾಂಬಿನೇಷನ್‌ನಲ್ಲಿ ತೆರೆಗೆ ಬಂದ 'ಭೀಮ್ಲಾ ನಾಯಕ್' (Bheemla Nayak) ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ರಿಮೇಕ್ ಆಗಿತ್ತು ಈ ಚಿತ್ರಕ್ಕೆ ಸಾಗರ್‌.ಕೆ. ಚಂದ್ರಾ ನಿರ್ದೇಶನ ಮಾಡುತ್ತಿದ್ದು, ಸಿತಾರಾ ಎಂಟರ್ಟೈನ್‌ಮೆಂಟ್‌ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳವನ್ನು ಹೂಡಿಕೆ ಮಾಡಿದೆ. ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಪವನ್‌ ಕಲ್ಯಾಣ್‌ ನಟಿಸಿದ್ದು, ನಿತ್ಯಾ ಮೆನನ್‌, ಸಂಯುಕ್ತಾ ಮೆನನ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಪವನ್ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ನಿರ್ದೇಶಕ ಕ್ರಿಷ್ ಜೊತೆಗೆ 'ಹರಿಹರ ವೀರ ಮಲ್ಲು' ಹಾಗೂ ಹರೀಶ್ ಶಂಕರ್ ಜೊತೆಗೆ 'ಭವದಿಯುಡು ಭಗತ್ ಸಿಂಗ್' ಸಿನಿಮಾಗಳನ್ನು ಅವರು ಮಾಡಲಿದ್ದಾರೆ.

Chiranjeevi- Pawan Kalyan ತಾಯಿ ಅಂಜಮ್ಮಗೆ ಕ್ಷಮೆ ಕೇಳಿದ ನಟಿ ಶ್ರೀ ರೆಡ್ಡಿ!

ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಭೇಟಿ: ಬಾಲಿವುಡ್‌ನ ಖ್ಯಾತ ನಟ ತುಳುನಾಡಿನ ಸುನಿಲ್‌ ಶೆಟ್ಟಿ (Suniel Shetty) ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಈ ಮೊದಲು ಭೇಟಿ ನೀಡಿದ್ದರು. ಕುಕ್ಕೆಗೆ ಸ್ನೇಹಿತರೊಂದಿಗೆ ಆಗಮಿಸಿದ ಅವರು ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ದೇವರ ದರುಶನ ಪಡೆದು, ಬಳಿಕ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಶಿಷ್ಟಾಚಾರ ವಿಭಾಗದ ಜಯರಾಮ ರಾವ್‌ ಉಪಸ್ಥಿತರಿದ್ದರು. ಉಡುಪಿಯ ಕಾಪು ಜಾತ್ರೆಗೆ ಆಗಮಿಸಿದ್ದ ಅವರು ಕುಕ್ಕೆ ಶ್ರೀ ದೇವರ ದರುಶನ ಪಡೆಯಲೆಂದು ಆಗಮಿಸಿದ್ದರು. ತುಳುನಾಡಿನವರಾದ ಸುನಿಲ್‌ ಶೆಟ್ಟಿ ಹಿಂದಿ ಚಿತ್ರರಂಗದಲ್ಲಿ ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದು, ಮುಂಬೈನಲ್ಲಿ ನೆಲೆಸಿದ್ದಾರೆ.

click me!