ದೈವಾರಾಧನೆಗೆ ಅವಹೇಳನ: ಆಯುಕ್ತರಿಗೆ ದೂರು

By Kannadaprabha NewsFirst Published Oct 23, 2019, 3:08 PM IST
Highlights

ತುಳುನಾಡಿನ ಜನರ ಪ್ರಬಲ ನಂಬಿಕೆ, ಭಯ ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿರುವ ದೈವಾರಾಧನೆಯನ್ನು ಅವಹೇಳನ ಮಾಡುವಂತಹ ಪೋಸ್ಟ್‌ ಒಂದನ್ನು ‘ಟ್ರೋಲ್‌ ಹೂ ಟ್ರೋಲ್‌ ಕನ್ನಡಿಗ’ ಪೇಸ್ಬುಕ್‌ ಪುಟದಲ್ಲಿ ಹಾಕಿದ್ದು ಈ ಕುರಿತು ದೂರು ದಾಖಲಾಗಿದೆ.

ಮಂಗಳೂರು(ಅ.23): ತುಳುನಾಡಿನ ಜನರ ಪ್ರಬಲ ನಂಬಿಕೆ, ಭಯ ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿರುವ ದೈವಾರಾಧನೆಯನ್ನು ಅವಹೇಳನ ಮಾಡುವಂತಹ ಪೋಸ್ಟ್‌ ಒಂದನ್ನು ‘ಟ್ರೋಲ್‌ ಹೂ ಟ್ರೋಲ್‌ ಕನ್ನಡಿಗ’ ಪೇಸ್ಬುಕ್‌ ಪುಟದಲ್ಲಿ ಹಾಕಿದ್ದು ಈ ಕುರಿತು ದೂರು ದಾಖಲಾಗಿದೆ.

Daiva's are heart and soul of this land. The daiva's here are respected by each and every individual of any community. Disrespecting it is not acceptable.Kindly refrain disrespecting Daiva's in your arguments related to any matter.I request to pls look into this matter pic.twitter.com/hbKHpGmrJQ

— Vedavyas Kamath (@vedavyasbjp)

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌ ಅವರು ಈ ಪೋಸ್ಟ್‌ ಕುರಿತಾಗಿ ತಮ್ಮ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲದೇ ಈ ರೀತಿಯಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ವ್ಯಕ್ತಿಗಳು ಮತ್ತು ಫೇಸ್ಬುಕ್‌ ಪೇಜ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ಪೊಲೀಸ್‌ ಕಮಿಷನರ್‌ ಹರ್ಷ ಅವರಿಗೆ ಮನವಿಯನ್ನೂ ಸಹ ಮಾಡಿದ್ದಾರೆ.

ಚಾಕ್ ಪೀಸ್ ನಿಂದ ವರ್ಲ್ಡ್‌ಕಪ್ ಕಲಾಕೃತಿ: ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಗೆ ಕಾರ್ಕಳದ ಸುರೇಂದ್ರ

‘ಟ್ರೋಲ್‌ ಹೂ ಟ್ರೋಲ್‌ ಕನ್ನಡಿಗ’ ಎಂಬ ಫೇಸ್ಬುಕ್‌ ಪುಟದಲ್ಲಿ ಈ ಹಿಂದೆಯೂ ದೈವದೇವರನ್ನು ಅವಮಾನಿಸುವ ರೀತಿಯ ಪೋಸ್ಟ್‌ ಗಳನ್ನು ಹಾಕಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ದೈವಾರಾಧನಾ ಚಾವಡಿ ಮತ್ತು ದಲಿತ ರಕ್ಷಣಾ ವೇದಿಕೆಯವರು ಮಂಗಳೂರು ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಯಲ್ಲಿ ದೂರೊಂದನ್ನೂ ಸಹ ಸಲ್ಲಿಸಿದ್ದರು.

ಮಂಗಳೂರು: ಎಲ್ಲ ಅಂಚೆ ಕಚೇರಿ ವಿವರ ಗೂಗಲ್ ಮ್ಯಾಪ್‌ನಲ್ಲಿ..!

click me!