ಮೇಲ್ಸೇತುವೆ ಕುಸಿತ; ಮೂವರು ಕಾರ್ಮಿಕರ ಸ್ಥಿತಿ ಗಂಭೀರ

By Suvarna NewsFirst Published Mar 28, 2021, 4:48 PM IST
Highlights

ಗುರುಗ್ರಾಮ-ದ್ವಾರಕಾ ಎಕ್ಸ್ ಪ್ರೆಸ್ ವೇ ಬಳಿ  ಕುಸಿದ ನಿರ್ಮಾಣ ಹಂತದ ಮೇಲ್ಸೋತುವೆ/ ಮೂವರು ಕಾರ್ಮಿಕರ ಸ್ಥಿತಿ ಗಂಭೀರ/  ದೊಡ್ಡ ಅವಘಡ ತಡೆದ ಅಗ್ನಿಶಾಮಕ ದಳ/ 

ಗುರುಗ್ರಾಮ (ಮಾ.  28) ಗುರುಗ್ರಾಮ-ದ್ವಾರಕಾ ಎಕ್ಸ್ ಪ್ರೆಸ್ ವೇ ಬಳಿ ನಿರ್ಮಾಣ ಹಂತದ ಮೇಲ್ಸೋತುವೆಯೊಂದು ಕುಸಿದುಬಿದ್ದಿದೆ. ದುರಂತದಲ್ಲಿ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮೇಲ್ಸೇತುವೆ ಕುಸಿದುಬಿದ್ದಿರುವ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ  ನಡೆಸಿ  ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದು ಜನರು ಈ ಪ್ರದೇಶದ ಕಡೆ ಬರದಂತೆ  ನೋಡಿಕೊಳ್ಳಲಾಗಿದೆ.

ರಾಯಘಡದ ಕಟ್ಟಡ ಕುಸಿತ; ಕಣ್ಣೀರ ಕತೆಗಳು

ದೌಲತಾಬಾದ್ ಬಳಿ ಗುರುಗ್ರಾಮ-ದ್ವಾರಕಾ ಎಕ್ಸ್ ಪ್ರೆಸ್ ವೇನಲ್ಲಿ ಭಾನುವಾರ ಬೆಳಿಗ್ಗೆ 7.30ರ ಸುಮಾರಿಗೆ ನಿರ್ಮಾಣ ಹಂತದ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ. ಪರಿಣಾಮ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ. ಅನೇಕ ದಿನಗಳಿಂದ ಕೆಲಸ ಪ್ರಗತಿಯಲ್ಲಿತ್ತು.

ಘಟನೆಗೆ ಏನು ಕಾರಣ ಎಂಬುದನ್ನು  ಪತ್ತೆಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕಳಪೆ ಕಾಮಗಾರಿಯೇ ಇದಕ್ಕೆಲ್ಲ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ.

 

 

click me!