ಯುಗಾದಿ ಹಬ್ಬದಿಂದ 3 ದಿನ ಕಳ್ಳರ ಕಾಟ ಹೆಚ್ಚು: ಪೊಲೀಸ್​ ಇಲಾಖೆಯ ಈ ಕುತೂಹಲದ ಪ್ರಕಟಣೆಯಲ್ಲಿ ಏನಿದೆ ನೋಡಿ!

Published : Mar 24, 2025, 02:11 PM ISTUpdated : Mar 24, 2025, 02:52 PM IST
ಯುಗಾದಿ ಹಬ್ಬದಿಂದ 3 ದಿನ ಕಳ್ಳರ ಕಾಟ ಹೆಚ್ಚು: ಪೊಲೀಸ್​ ಇಲಾಖೆಯ ಈ ಕುತೂಹಲದ ಪ್ರಕಟಣೆಯಲ್ಲಿ ಏನಿದೆ ನೋಡಿ!

ಸಾರಾಂಶ

ತುಮಕೂರು ಜಿಲ್ಲೆಯ ತಿಪಟೂರು ಪೊಲೀಸರು 1966ರಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಕಳ್ಳತನದ ಬಗ್ಗೆ ಎಚ್ಚರಿಕೆ ನೀಡಿದ್ದರು. ಹಬ್ಬದ ಸಮಯದಲ್ಲಿ ಹಣ, ಚಿನ್ನಾಭರಣಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಮತ್ತು ಜೂಜಾಟಗಳಿಂದ ದೂರವಿರಲು ಸೂಚಿಸಲಾಗಿತ್ತು. ಈಗ ಈ ಪ್ರಕಟಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಬ್ಬಗಳಲ್ಲಿ ಕಳ್ಳತನ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈ ಎಚ್ಚರಿಕೆ ಈಗಲೂ ಪ್ರಸ್ತುತವಾಗಿದೆ.

'ಯುಗಾದಿ ಹಬ್ಬದ ಬಳಿಕ ಮೂರು ದಿನಗಳವರೆಗೆ ಕಳ್ಳರ ಕಾಟ ಹೆಚ್ಚಾಗಿರುತ್ತದೆ ರಾತ್ರಿಯ ವೇಲೆ ಕಳ್ಳತನವಾಗುವ ಸಂಭವವಿದೆ. ನಿಮ್ಮ ಮನೆ, ಅಂಗಡಿಗಳಲ್ಲಿ ಇರುವ ಹಣ, ಬೆಳ್ಲಿ, ಬಂಗಾರ, ಭಾರಿ ಬಟ್ಟೆ ಭದ್​ರವಾಗಿ ಇಟ್ಟುಕೊಳ್ಳಿ. ಆಲಸ್ಯದಿಂದ ಅನಾಹುತ ಎನ್ನುವುದನ್ನು ಮರೆಯಬೇಡಿ. ಪೊಲೀಸರೊಂದಿಗೆ ಸಹಕರಿಸಿ, ನಿಮ್ಮ  ದ್ರವ್ಯವನ್ನು ಕಾಪಾಡಿಕೊಳ್ಳಿ. ಆ ದಯಾಮಯನಾದ ಪರಮಾತ್ಮನು ತಮಗೆಲ್ಲರಿಗೂ ಶುಭ, ಸಂಪತ್ತು ಮತ್ತು ಶ್ರೇಯಸ್ಸನ್ನು ಕೊಟ್ಟು ಯುಗದ ಆದಿಯಾಗಿ ಸದಾ ಸುಖವಾಗಿಡಲೆಂದು ಪ್ರಾರ್ಥಿಸುತ್ತೇವೆ. ಯುಗಾದಿ ಹಬ್ಬದಲ್ಲಿ ಇಸ್ಪೀಟು ವಗಯರೆ ಜೂಜಾಟಗಳನ್ನು ಆಡಿ ಕಷ್ಟಪಟ್ಟು ಸಂಪಾದಿಸಿದ ನಿಮ್ಮ ಹಣವನ್ನು ಕಳೆದುಕೊಳ್ಳಬೇಡಿ...'

ಹೀಗೆಂದು ಪ್ರಕಟಣೆ ಹೊರಡಿಸಿರುವುದು ಪೊಲೀಸ್​ ಇಲಾಖೆ, 'ಸಜ್ಜನರಿಗೆ ಅರಮನೆ, ದುರ್ಜನರಿಗೆ ಸೆರೆಮನೆ, ತಿಪಟೂರು ಸರ್ಕಲ್​  ಪೊಲೀಸ್​ ಸಿಬ್ಬಂದಿ' ಎಂದು ತುಮಕೂರು ಜಿಲ್ಲೆಯ ತಿಪಟೂರಿನ ಪೊಲೀಸ್​ ಇಲಾಖೆಯಿಂದ ಇಂಥದ್ದೊಂದು ಪ್ರಕಟಣೆ ಹೊರಡಿಸಲಾಗಿದೆ. ಇನ್ನೇನು ಯುಗಾದಿ ಹತ್ತಿರ ಬಂದಿದೆ. ಈ ಯುಗಾದಿಗೆ ಪೊಲೀಸರು ಹೀಗೊಂದು ಪ್ರಕಟಣೆ ಹೊರಡಿಸಿದ್ದಾರೆ ಎಂದುಕೊಳ್ಳಬೇಡಿ ಮತ್ತೆ. ಇದು ಪ್ರಕಟವಾಗಿದ್ದು, 1966ರಲ್ಲಿ! 59 ವರ್ಷಗಳ ಹಿಂದಿನ ಈ ಪ್ರಕಟಣೆಯು ಈಗ ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗ್ತಿದೆ. ಹಬ್ಬದ ಸಂದರ್ಭಗಳಲ್ಲಿ ಚಿನ್ನ, ಒಡವೆ ಇತ್ಯಾದಿಗಳನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳುವವರ ಸಂಖ್ಯೆ ಹೆಚ್ಚಿರುವುದರಿಂದ ಆಗ ಪೊಲೀಸ್​ ಇಲಾಖೆ ಇಂಥದ್ದೊಂದು ಪ್ರಕಟಣೆ ಹೊರಡಿಸಿತ್ತು. 

ರಜೆಚೀಟಿಯಲ್ಲಿ ಸಿಕ್ಕಾಪಟ್ಟೆ ಸ್ಪೆಲ್ಲಿಂಗ್​ ಮಿಸ್ಟೆಕ್​: ಲೇಡಿ ಸಬ್ ಇನ್ಸ್‌ಪೆಕ್ಟರ್ ಅರೆಸ್ಟ್​! ಅಷ್ಟಕ್ಕೂ ಆಗಿದ್ದೇನು ನೋಡಿ...

ಹಾಗೆ ನೋಡಿದರೆ, ಈಗಲೂ ಇದು ಪ್ರಸ್ತುತ ಎನ್ನಬಹುದು. ಏಕೆಂದರೆ ಇಂದಿಗೂ ಕಳ್ಳರ ಕಣ್ಣು ಹಬ್ಬಗಳ ಮೇಲೆಯೇ ನೆಟ್ಟಿರುತ್ತದೆ. ಅದರಲ್ಲಿಯೂ ಯುಗಾದಿ, ಲಕ್ಷ್ಮೀ ಪೂಜೆ ಇಂಥ ಸಂದರ್ಭಗಳಲ್ಲಿ ಮನೆಯಲ್ಲಿ ಹಬ್ಬ ಮಾಡುವ ಸಲುವಾಗಿ ಬ್ಯಾಂಕ್​ನಲ್ಲಿ ಇಟ್ಟಿರೋ ಚಿನ್ನಾಭರಣಗಳನ್ನು ಮನೆಗೆ ತರಲಾಗುತ್ತದೆ. ಮದುವೆಯ ಸಂದರ್ಭಗಳಿಗೂ ಇದು ಅನ್ವಯ. ಇಂಥ ಮನೆಯಗಳನ್ನೇ ಹೊಂಚು ಹಾಕಿ ದರೋಡೆ ಮಾಡುವುದು ಸಾಮಾನ್ಯವಾಗಿದೆ. ಆದರೆ ಈಗ ಪೊಲೀಸರು ಇಂಥ ಪ್ರಕಟಣೆ ಹೊರಡಿಸುವುದಿಲ್ಲವಷ್ಟೇ. 

ಇಂದು ಯುಗಾದಿ ಅಥವಾ ಇನ್ನಿತರೇ ಸಂದರ್ಭಗಳಲ್ಲಿ ಜ್ಯೋತಿಷಿಗಳು ಜಾತಕದ ಫಲ, ರಾಶಿ ಫಲ ಇತ್ಯಾದಿಗಳನ್ನು ಹೇಳುವುದು ಸಾಮಾನ್ಯವಾಗಿದೆ.   ಈಗ ಇಂತಿಂಥ ರಾಶಿಯವರಿಗೆ ಕಳ್ಳರ ಭಯವಿದೆ, ಯುಗಾದಿಯ ಬಳಿಕ ಹೀಗಾಗಲಿದೆ, ಇಂಥ ರಾಶಿಯವರಿಗೆ ಈ ರೀತಿಯ ಫಲವಿದೆ ಎಂದು ಹೇಳುತ್ತಾರೆ. ಆದರೆ ಅಂದು, ಪೊಲೀಸ್​ ಇಲಾಖೆಯವರು ಜನರಿಗೆ ಈ ರೀತಿ ಎಚ್ಚರಿಕೆ ಕೊಡುತ್ತಿದ್ದರು. 

ಸರ್ಕಾರಿ ಉದ್ಯೋಗ ಕೊಡಿಸೋದಾಗಿ ಪತಿಗೇ ನಾಮ ಹಾಕಿದ್ಲು: ಸಿಕ್ಕಿಬೀಳ್ತೇನೆಂದು ವರದಕ್ಷಿಣೆ ಕೇಸ್​ ಜಡಿದಳು- ಏನಾಯ್ತು ನೋಡಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!