
ಸೂರತ್: ಪತಿಯ ಅತಿಯಾದ ಲೈಂ*ಗಿಕ ಆಸಕ್ತಿಯಿಂದ ಬೇಸತ್ತ ಪತ್ನಿ, ತನ್ನ ಗಂಡನಿಗೆ ವಿಷ ಹಾಕಿ, ಕೊನೆಗೆ ಉಸಿರುಗಟ್ಟಿಸಿ ಕೊ*ಲೆ ಮಾಡಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಪತಿಯನ್ನು ಸಾಯಿಸಿದ 39 ವರ್ಷದ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪತಿಯ ಅಂತ್ಯಕ್ರಿಯೆಯ ವ್ಯವಸ್ಥೆಗಳ ವಿಚಾರವಾಗಿ ನಡೆದ ಜಗಳದ ಬಳಿಕ ಇದು ಸಹಜ ಸಾವಲ್ಲ, ಕೊ*ಲೆ ಎನ್ನುವ ವಿಚಾರ ಬಯಲಾಗಿದೆ. ವಿಧಿವಿಜ್ಞಾನ ಶವಪರೀಕ್ಷೆಯಲ್ಲಿ ಕುತ್ತಿಗೆ ಮತ್ತು ಎದೆಯ ಮೇಲೆ ಒತ್ತಡದಿಂದ ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ದೃಢಪಟ್ಟಿದೆ. ಇದಾದ ಬಳಿಕ ಪತಿಯನ್ನು ಕೊಂ*ದ ಪತ್ನಿಯನ್ನು ಲಿಂಬಾಯತ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು, ಆರೋಪಿ ಇಶ್ರತ್ ಖಾತೂನ್ನನ್ನು ಲಿಂಬಾಯತ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಹೈದರ್ ಅಲಿ (39) ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯವನಾಗಿದ್ದು, ಮುಂಬೈನಲ್ಲಿ ಟೈಲ್ಸ್ ಹಾಕುವ ಕೆಲಸ ಮಾಡುತ್ತಿದ್ದ. ತಿಂಗಳಿಗೆ ಒಂದು ಅಥವಾ ಎರಡು ಬಾರಿ ಸೂರತ್ನಲ್ಲಿರುವ ತನ್ನ ಕುಟುಂಬವನ್ನು ಭೇಟಿ ಮಾಡುತ್ತಿದ್ದ. ಮನೆಗೆ ಬಂದಾಗ ವಯಾಗ್ರ ಮಾತ್ರೆಗಳನ್ನು ತಂದುಕೊಂಡು ಪದೇ ಪದೇ ಪತ್ನಿ ಬಳಿ ಚಿತ್ರವಿಚಿತ್ರ ಲೈಂ*ಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಅದನ್ನು ಸಹಿಸಲಾಗದೆ ಖಾತೂನ್ ಆತನನ್ನು ಕೊ*ಲ್ಲಲು ನಿರ್ಧರಿಸಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಹೈದರ್ ಅಲಿ ಜನವರಿ 1 ರಂದು ಸೂರತ್ಗೆ ಬಂದಿದ್ದ. ಚಳಿಗಾಲದಲ್ಲಿ ಒಳ್ಳೆಯದು ಎಂದು ಹೇಳಿ ಖಾತೂನ್ ಅರಿಶಿಣದ ಹಾಲನ್ನು ಸಿದ್ಧಪಡಿಸಿ, ಅದರಲ್ಲಿ ಕೀಟನಾಶಕವನ್ನು ಬೆರೆಸಿ ಪತಿಗೆ ನೀಡಿದ್ದಳು ಎನ್ನಲಾಗಿದೆ. ಅದನ್ನು ಕುಡಿದ ಕೂಡಲೇ ಅಲಿಯ ಆರೋಗ್ಯ ಹದಗೆಟ್ಟು, ಪದೇ ಪದೇ ವಾಂತಿ ಮಾಡಿಕೊಂಡಿದ್ದ. ಆದರೂ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಿಲ್ಲ.
ಜನವರಿ 5 ರಂದು ಅಲಿ ತುಂಬಾ ದುರ್ಬಲನಾಗಿದ್ದಾಗ, ಖಾತೂನ್ ಆತನ ಎದೆಯ ಮೇಲೆ ಕುಳಿತು ಕೈಗಳಿಂದ ಕತ್ತು ಹಿಸುಕಿ ಕೊಂ*ದಿದ್ದಾಳೆ ಎಂದು ಆರೋಪಿಸಲಾಗಿದೆ. ನಂತರ, ಅಲಿಯ ಆರೋಗ್ಯ ಸರಿ ಇಲ್ಲ ಎಂದು ತನ್ನ ಭಾವ ಅರ್ಷದ್ಗೆ ತಿಳಿಸಿದ್ದಾಳೆ. ಕುಟುಂಬಸ್ಥರು ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಖಚಿತಪಡಿಸಿದರು. ಇದಾದ ಬಳಿಕ ಸಾಮಾನ್ಯ ಶವಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದರು.
ಹೈದರ್ ಅಲಿಯ ಸಹೋದರ ಬಿಹಾರದಲ್ಲಿ ಅಂತ್ಯಕ್ರಿಯೆ ನಡೆಸಬೇಕೆಂದು ಪಟ್ಟು ಹಿಡಿದರೆ, ಖಾತೂನ್ ಸೂರತ್ನಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕೆಂದು ಬಯಸಿದ್ದಳು. ಇದರಿಂದ ಎರಡೂ ಕುಟುಂಬಗಳ ನಡುವೆ ಜಗಳವಾಗಿ ಅನುಮಾನ ಹೆಚ್ಚಾಯಿತು ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಜನವರಿ 6 ರಂದು, ವಿಧಿವಿಜ್ಞಾನ ಶವಪರೀಕ್ಷೆಗೆ ಆದೇಶಿಸಲಾಯಿತು, ಇದು ಉಸಿರುಗಟ್ಟಿ ಸಾವು ಎಂದು ಖಚಿತವಾದ ನಂತರ ಕುಟುಂಬಸ್ಥರು ಮೃತದೇಹವನ್ನು ಬಿಹಾರಕ್ಕೆ ಕೊಂಡೊಯ್ದು ಜನವರಿ 9 ರಂದು ಅಂತ್ಯಕ್ರಿಯೆ ನಡೆಸಿದರು.
ಪೊಲೀಸರು ಖಾತೂನ್ ವಿರುದ್ಧ ಬಿಎನ್ಎಸ್ ಸೆಕ್ಷನ್ 103(1) (ಕೊ*ಲೆ) ಮತ್ತು 123 (ವಿಷ ನೀಡಿ ನೋವುಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದಂಪತಿಗೆ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ನಾಲ್ಕು ಮಕ್ಕಳಿದ್ದಾರೆ. ಈ ಅಪರಾಧದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ