
ಬೆಂಗಳೂರು(ನ.09): ತರಗತಿಯಲ್ಲಿ ಸಹಪಾಠಿಗಳ ಜತೆಗೆ ನೀರು ಚೆಲ್ಲಿಕೊಂಡು ಆಟವಾಡುವಾಗ ಹಿಂದಿ ಶಿಕ್ಷಕಿ ವಿದ್ಯಾರ್ಥಿಯೊಬ್ಬನ ಮುಖಕ್ಕೆ ಕೋಲಿನಿಂದ ಹೊಡೆದು ಹಲ್ಲು ಮುರಿದಿರುವ ಆರೋಪ ಕೇಳಿ ಬಂದಿದೆ. ಜಯನಗರ 4ನೇ ಬ್ಲಾಕ್ ನ ಹೋಲಿ ಶಾಲೆಯಲ್ಲಿ ನ.7ರಂದು ಈ ಘಟನೆ ನಡೆದಿದೆ.
6ನೇ ತರಗತಿ ವಿದ್ಯಾರ್ಥಿ ಹಲ್ಲೆಗೊಳಗಾಗಿದ್ದಾನೆ. ಈ ಸಂಬಂಧ ವಿದ್ಯಾರ್ಥಿಯ ತಂದೆ ಅನಿಲ್ ಕುಮಾರ್ ವಿ.ಪೈ ಅವರು ನೀಡಿದ ದೂರಿನ ಮೇರೆಗೆ ಹಿಂದಿ ಶಿಕ್ಷಕಿ ಅಜ್ಜತ್ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಚಾಕುವಿನಿಂದ ಇರಿದು ತಾಯಿಯನ್ನೇ ಕೊಂದ ಮಾನಸಿಕ ಅಸ್ವಸ್ಥ
ಏನಿದು ಪ್ರಕರಣ?:
ಜಯನಗರ 4ನೇ ಬ್ಲಾಕ್ ನಿವಾಸಿ ಅನಿಲ್ ಕುಮಾರ್ ವಿ.ಪೈ ಅವರ 11 ವರ್ಷದ ಪುತ್ರ ಹೋಲಿ ಕ್ರೈಸ್ತ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ನ.7ರಂದು ಮಧ್ಯಾಹ್ನ ಸುಮಾರು 12.30ಕ್ಕೆ ದೂರುದಾರರ ಪುತ್ರ ತನ್ನ ಸಹಪಾಠಿಗಳೊಂದಿಗೆ ತರಗತಿಯಲ್ಲಿ ನೀರು ಚೆಲ್ಲುತ್ತಾ ಆಡುವಾಡುತ್ತಿದ್ದ. ಈ ವಿಚಾರ ತಿಳಿದು ಹಿಂದಿ ಶಿಕ್ಷಕಿ ಅಜ್ಜತ್ ಕೋಲಿನಿಂದ ವಿದ್ಯಾರ್ಥಿ ಮುಖಕ್ಕೆ ಹೊಡೆದಿದ್ದಾರೆ. ಇದರಿಂದ ವಿದ್ಯಾರ್ಥಿ ಮುಖಕ್ಕೆ ಗಾಯವಾಗಿದ್ದು, ಹಲ್ಲೊಂದು ಮುರಿದಿದೆ. ಪುತ್ರನ ಮೇಲಿನ ಹಲ್ಲೆ ವಿಚಾರ ತಿಳಿದ ಅನಿಲ್ ಕುಮಾರ್, ಪುತ್ರನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಈ ಹಲ್ಲೆ ಘಟನೆ ಸಂಬಂಧ ಹಿಂದಿ ಶಿಕ್ಷಕಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ