
ಮನೆಯಲ್ಲಿ ಎರಡು – ಮೂರು ವರ್ಷಗಳಿಂದ ಪ್ರಮಾಣಿಕವಾಗಿ ಕೆಲ್ಸ ಮಾಡ್ತಿರೋರನ್ನು ನಾವು ಸಂಪೂರ್ಣ ನಂಬಿರ್ತೇವೆ. ಅವರು ಮನೆಯವರಾಗ್ತಾರೆ. ಅವರ ಮೇಲೆ ವಿಶ್ವಾಸ ಹೆಚ್ಚಾಗುತ್ತೆ. ಮನೆಯ ಪ್ರತಿಯೊಂದು ಕೋಣೆಗೂ ಅವರು ಪ್ರವೇಶ ಪಡೀತಾರೆ. ಮನೆಯ ಆಗುಹೋಗುಗಳೆಲ್ಲ ಅವರಿಗೆ ತಿಳಿಯುತ್ತೆ. ಮನೆ ಕೆಲ್ಸ ಮಾಡುವವರನ್ನು ಸಂಪೂರ್ಣ ನಂಬಿ ಈಗ ಮನೆ ಮಾಲೀಕನೊಬ್ಬ ಮೋಸ ಹೋಗಿದ್ದಾನೆ. ಮನೆ ಮಾಲೀಕನ ನಂಬಿಕೆಗೆ ಕೊಡಲಿಪೆಟ್ಟು ಬಿದ್ದಿದೆ. ಲಕ್ನೋದ ನಿಶಾತ್ಗಂಜ್ ಪ್ರದೇಶದಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಆಸಕ್ತಿಕರ ಸುದ್ದಿಯೊಂದು ಹೊರ ಬಿದ್ದಿದೆ. ಸಾಮಾನ್ಯವಾಗಿ ಕಳ್ಳರು, ಹಣ – ಒಡವೆ ಕದ್ದು ಪರಾರಿಯಾಗ್ತಾರೆ. ಇಲ್ಲವೆ ಆ ಹಣವನ್ನು ಖರ್ಚು ಮಾಡ್ತಾರೆ. ಆದ್ರೆ ಈ ಪ್ರಕರಣ ಸಂಪೂರ್ಣ ಭಿನ್ನವಾಗಿದೆ. ಇಲ್ಲಿ ಹಣ – ಒಡವೆ ಕದ್ದ ಕಳ್ಳ ಮನೆಯಿಂದ ಓಡಿ ಹೋಗ್ಲಿಲ್ಲ. ಹಾಗೇ ಆ ಹಣವನ್ನು ವ್ಯರ್ಥ ಹಾಳು ಕೂಡ ಮಾಡ್ಲಿಲ್ಲ. ಹಣವನ್ನು ಸುರಕ್ಷಿತವಾಗಿಟ್ಟುಕೊಂಡಿದ್ದಲ್ಲದೆ ಅದನ್ನು ಸುರಕ್ಷಿತ ಪ್ರದೇಶದಲ್ಲಿ ಹೂಡಿಕೆ ಮಾಡಿದ್ದಾನೆ.
ಸುಮಾರು ಐದಾರು ವರ್ಷಗಳಿಂದ ಕೆಲಸದಾಳು ತನ್ನ ಪತ್ನಿ ಜೊತೆ ವ್ಯಾಪಾರಿ ಮನೆಯಲ್ಲಿ ಕೆಲ್ಸ ಮಾಡ್ತಿದ್ದ. ಮನೆಯವರ ವಿಶ್ವಾಸವನ್ನು ಅವರು ಗಳಿಸಿದ್ದರು. ಹಾಗಾಗಿ ಅವರನ್ನು ಮನೆಯವರಂತೆ ನೋಡಿಕೊಳ್ಳಲಾಗ್ತಿತ್ತು. ಆದ್ರೆ ವ್ಯಾಪಾರಿ ಕುಟುಂಬಕ್ಕೆ ಇವರು ಮೋಸ ಮಾಡಿದ್ದಾರೆ. ಮನೆಯಿಂದ ಅಷ್ಟಷ್ಟೇ ಹಣ, ಒಡವೆಯನ್ನು ಕಳ್ಳತನ ಮಾಡಿದ್ದಾರೆ. ಕಪಾಟಿನಲ್ಲಾಗ್ತಿದ್ದ ಬದಲಾವಣೆ ನೋಡಿ ವ್ಯಾಪಾರಿ ಕುಟುಂಬಕ್ಕೆ ಅನುಮಾನ ಬಂದಿದೆ. ಕೆಲಸದಾಳುವನ್ನು ಪ್ರಶ್ನೆ ಮಾಡಿದ್ದಾರೆ. ಗದರಿಸುತ್ತಿದ್ದಂತೆ ಕೆಲಸದಾಳು ಎನ್ನ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಮನೆಯಿಂದ ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿದ್ದು, ಅದನ್ನು ಒಳ್ಳೆ ಜಾಗದಲ್ಲಿ ಹೂಡಿಕೆ ಮಾಡಿದ್ದೇನೆ ಎಂದಿದ್ದಾನೆ.
ಮೂಲತಃ ಬಿಹಾರ್ ಮೂಲದ ಈ ದಂಪತಿ, ತಮ್ಮ ಊರಿನ ಬ್ಯಾಂಕ್ ಸಿಬ್ಬಂದಿ ಸಹಾಯ ಪಡೆದಿದೆ. ಬ್ಯಾಂಕ್ ಸಿಬ್ಬಂದಿ ಸಲಹೆ ಮೇರೆಗೆ ಎಸ್ ಐಪಿ, ಎಫ್ಡಿಯಲ್ಲಿ ಹೂಡಿಕೆ ಮಾಡಿರೋದಾಗಿ ಆರೋಪಿ ಹೇಳಿದ್ದಾನೆ. ಹಣವನ್ನು ವಾಪಸ್ ನೀಡುವ ಭರವಸೆ ಕೂಡ ನೀಡಿದ್ದಾನೆ. ಆದ್ರೆ ಅಲ್ಲಿಂದ ತಪ್ಪಿಸಿಕೊಂಡ ದಂಪತಿ ಈಗ ಕಾಣ್ತಿಲ್ಲ. ವ್ಯಾಪಾರಿ ತನ್ನೆಲ್ಲ ಪ್ರಯತ್ನದ ನಂತ್ರ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿ ಪತ್ತೆಗೆ ಮುಂದಾಗಿದ್ದಾರೆ. ದಂಪತಿಗೆ ಸಹಾಯ ಮಾಡಿದ ಬ್ಯಾಂಕ್ ಸಿಬ್ಬಂದಿ ಬಗ್ಗೆಯೂ ಮಾಹಿತಿ ಕಲೆ ಹಾಕ್ತಿದ್ದಾರೆ. ದಂಪತಿ ಎಲ್ಲೆಲ್ಲಿ ಹಣ ಹೂಡಿಕೆ ಮಾಡಿದ್ದಾರೆ, ಎಷ್ಟು ಹೂಡಿಕೆ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಹೂಡಿಕೆ ಪತ್ರಗಳು, ಬ್ಯಾಂಕ್ ಖಾತೆಗಳು ಮತ್ತು ವಹಿವಾಟುಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಶೀಘ್ರವೇ ದಂಪತಿಯನ್ನು ಬಂಧಿಸಿ ಜೈಲಿಗಟ್ಟುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಪೊಲೀಸ್ ಪ್ರಕಾರ, ವ್ಯಾಪಾರಿ ಕುಟುಂಬಕ್ಕೆ ಚಳ್ಳೆ ಹಣ್ಣು ತಿನ್ನಿಸಿದ ಕೆಲಸದಾಳು, ಕದ್ದ ಹಣವನ್ನು ತನ್ನ ಪತ್ನಿ ಹೆಸರಿಗೆ ಟ್ರಾನ್ಸ್ಫರ್ ಮಾಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ