
ಬೆಂಗಳೂರು(ಮೇ.21): ಹಣಕಾಸಿನ ವಿವಾದಕ್ಕೆ ಬಾಂಗ್ಲಾದೇಶ ಮೂಲದ 23 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅದನ್ನು ಚಿತ್ರೀಕರಣ ಮಾಡಿ ವೈರಲ್ ಮಾಡಿದ್ದ 12 ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣ ಕುರಿತು ವಿಚಾರಣೆ ನಡೆಸಿದ ನಗರದ 54ನೇ ಸೆಷನ್ಸ್ ಮತ್ತು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎನ್.ಸುಬ್ರಹ್ಮಣ್ಯ ಅವರು ಪ್ರಕರಣದ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಪ್ರಕರಣ ಪ್ರಮುಖ ಆರೋಪಿಗಳಾದ ಬಾಂಗ್ಲಾದೇಶ ಮೂಲದ ಹೃದಯ್ ಬಾಬು, ಮೊಹಮ್ಮದ್ ಬಾಬು ಅನ್ವರ್, ಅಕಿಲ್, ಸಾಗರ್ ಅಲಿಯಾಸ್ ರಕಿಬುಲ್ ಇಸ್ಲಾಂ ಸಾಗರ್, ಕಾಜಲ್, ಮಹಮ್ಮದ್ ಅಲಾಮಿನ್ ಹುಸೇನ್, ತಾನೀಯಾಖಾನ್ ಎಂಬುವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ, ಆರೋಪಿಗಳಿಗೆ ಪ್ರೋತ್ಸಾಹ ನೀಡಿದ್ದ ನಸ್ರುತ್ ಎಂಬಾಕೆಗೆ 20 ವರ್ಷ, ದಾಲೀಮ್ ಅಹ್ಮದ್ ಜೋಬಿನ್ ಎಂಬಾತನಿಗೆ 5 ವರ್ಷ ಹಾಗೂ ಶೋಬುಜ್ ಮತ್ತು ಮೊಹ್ಮಮದ್ಗೆ 9 ತಿಂಗಳು ಶಿಕ್ಷೆ ವಿಧಿಸಿದೆ.
ಹೈದರಾಬಾದ್ ರೇಪಿಸ್ಟ್ಗಳ ಎನ್ಕೌಂಟರ್ ನಕಲಿ, ನ್ಯಾಯಾಂಗ ಆಯೋಗದ ವರದಿಯಲ್ಲಿ ಶಾಕಿಂಗ್ ಮಾಹಿತಿ!
ಹಿನ್ನೆಲೆ:
2021ರ ಮೇ 18ರಂದು ರಾಮಮೂರ್ತಿ ನಗರದ ಕನಕ ನಗರದ ಮನೆಯಲ್ಲಿ ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ವಿಡಿಯೋ ವೈರಲ್ ಆಗಿತ್ತು. ಬಾಂಗ್ಲಾ ಮತ್ತು ಭಾರತದ ಕೆಲ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ತನಿಖೆ ಕೈಗೊಂಡ ಬೆಂಗಳೂರು ಪೊಲೀಸರು 3 ದಿನಗಳಲ್ಲಿ ಪ್ರಕರಣ ಪತ್ತೆ ಹಚ್ಚಿದ್ದರು.
ಅಲ್ಲದೆ, 11 ಬಾಂಗ್ಲಾ ದೇಶಿಗರು ಮತ್ತು ಒಬ್ಬ ಸ್ಥಳೀಯನನ್ನು ಬಂಧಿಸಿದ್ದರು. ತನಿಖೆ ವೇಳೆ ವೈಜ್ಞಾನಿಕ ವಿಧಾನಗಳಾದ ಡಿಎನ್ಎ, ವಿದ್ಯುನ್ಮಾನ ಸಾಕ್ಷ್ಯಗಳು, ಮೊಬೈಲ್ ಕರೆಗಳು, ಬೆರಳಚ್ಚು, ಧ್ವನಿ ಮುದ್ರಣಗಳನ್ನು ಸಂಗ್ರಹಿಸಿ 28 ದಿನಗಳಲ್ಲಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗಿತ್ತು. ಅಲ್ಲದೆ, ಕೇವಲ 3 ತಿಂಗಳಲ್ಲಿ 44 ಸಾಕ್ಷ್ಯಿಧಾರರ ವಿಚಾರಣೆಗೆ ಒಳಪಡಿಸಲಾಗಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಶುಕ್ರವಾರ ತೀರ್ಪು ನೀಡಿದೆ. ಪ್ರಕರಣ ಸಂಬಂಧ ಸರ್ಕಾರದ ಪರವಾಗಿ ವೀರಣ್ಣ ತಿಗಡಿ ವಾದ ಮಂಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ