CCTV Footage: ವಿಡಿಯೋ ನೋಡಿ, ಈ ಭೀಕರ ಅಪಘಾತದಲ್ಲಿ ತಪ್ಪು ಯಾರದ್ದು? ನೀವೇ ಹೇಳಿ

Published : Oct 12, 2025, 11:30 AM IST
Pimpri link road accident video

ಸಾರಾಂಶ

Pimpri link road accident video :ಮಹಾರಾಷ್ಟ್ರದ ಪುಣೆಯಲ್ಲಿ ವೇಗದ ಬೈಕ್ ಕಾರಿಗೆ ಡಿಕ್ಕಿ ಹೊಡೆದ ಭೀಕರ ಅಪಘಾತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿಕ್ಕಿಯ ರಭಸಕ್ಕೆ ಸವಾರ தூರಕ್ಕೆ ಬಿದ್ದರೂ, ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಹೆಲ್ಮೆಟ್‌ನ ಮಹತ್ವವನ್ನು ಸಾರುತ್ತದೆ.

ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಲಿಂಕ್ ರಸ್ತೆಯ ಬಳಿ ಭೀಕರ ಅಪಘಾತವೊಂದು ಸಂಭವಿಸಿದೆ. ವೇಗವಾಗಿ ಬೈಕ್ ಚಲಾಯಿಸುತ್ತಿದ್ದ ಸವಾರನೊಬ್ಬ ಕಾರಿಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆಯ ಸಂಪೂರ್ಣ ದೃಶ್ಯ ರಸ್ತೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ

ಭೀಕರ ಅಪಘಾತ ಸಿಸಿಟಿವಿಯಲ್ಲಿ ಸೆರೆ:

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬೈಕ್ ಸವಾರ ವೇಗವಾಗಿ ಚಾಲನೆ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದ್ದಕ್ಕಿದ್ದಂತೆ ಮುಂದೆ ಕಾಣಿಸಿಕೊಂಡ ಕಾರಿನಿಂದಾಗಿ ಸವಾರನಿಗೆ ಬ್ರೇಕ್ ಹಾಕಲು ಸಾಧ್ಯವಾಗದೆ, ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಸವಾರನ ತಲೆ ಕಾರಿನ ಮೇಲೆ ಬಡಿದು, ರಸ್ತೆಗೆ ರಭಸದಿಂದ ಬಿದ್ದಿದ್ದಾನೆ. ಆದರೆ, ಅದೃಷ್ಟವಶಾತ್, ಸವಾರನು ಧರಿಸಿದ್ದ ಹೆಲ್ಮೆಟ್ ಅವನ ತಲೆಗೆ ಗಂಭೀರ ಗಾಯವಾಗದಂತೆ ರಕ್ಷಿಸಿದೆ. ಹೆಲ್ಮೆಟ್ ಇಲ್ಲದಿದ್ದರೆ ಈ ಅಪಘಾತ ಜೀವಹಾನಿಗೆ ಕಾರಣವಾಗುತ್ತಿತ್ತು ಎಂದು ವಿಡಿಯೋ ಸೂಚಿಸುತ್ತದೆ.

 

ಅಪಘಾತದಲ್ಲಿ ಬೈಕ್ ಚಿಂದಿ, ಕಾರು ಪೂರ್ಣ ಜಖಂ:

ಅಪಘಾತದಿಂದ ಬೈಕ್ ಮತ್ತು ಕಾರು ಎರಡೂ ಪೂರ್ಣ ಹಾನಿಗೊಳಗಾಗಿವೆ. ಕಾರಿನ ಮುಂಭಾಗಕ್ಕೆ ಸಂಪೂರ್ಣ ಜಖಂಗೊಂಡಿದೆ. ಬೈಕ್ ಕೂಡ ಜಖಂಗೊಂಡಿದೆ. ಡಿಕ್ಕಿಯ ರಭಸಕ್ಕೆ ಸವಾರ ಸಾಕಷ್ಟು ದೂರಕ್ಕೆ ಬಿದ್ದಿದ್ದಾನೆ. ಆದರೆ, ಹೆಲ್ಮೆಟ್‌ನಿಂದಾಗಿ ಆತ ಗಂಭೀರ ಗಾಯಗಳಿಂದ ಪಾರಾಗಿದ್ದಾನೆ.

ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ

ವೈರಲ್ ಆಗಿರುವ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಲವರು ಬೈಕ್ ಸವಾರನ ವೇಗದ ಚಾಲನೆ ಮತ್ತು ನಿಯಂತ್ರಣದ ಕೊರತೆಯನ್ನು ದೂಷಿಸಿದರೆ, ಇನ್ನು ಕೆಲವರು ಕಾರು ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿರಬಹುದು ಎಂದು ಪ್ರಶ್ನಿಸಿದ್ದಾರೆ. 'ಈ ಅಪಘಾತದಲ್ಲಿ ತಪ್ಪು ಯಾರದ್ದು?' ಎಂಬ ಪ್ರಶ್ನೆಯೊಂದಿಗೆ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಹೆಲ್ಮೆಟ್‌ನ ಮಹತ್ವ

ಈ ಘಟನೆಯು ರಸ್ತೆ ಸುರಕ್ಷತೆ ಮತ್ತು ಹೆಲ್ಮೆಟ್ ಧರಿಸುವುದರ ಮಹತ್ವವನ್ನು ತಿಳಿಸಿದೆ. ಸವಾರನ ಪ್ರಾಣವನ್ನು ಉಳಿಸಿದ ಹೆಲ್ಮೆಟ್, ದ್ವಿಚಕ್ರ ವಾಹನ ಚಾಲಕರಿಗೆ ರಕ್ಷಾಕವಚವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ನೀವೇ ತೀರ್ಮಾನಿಸಿ: ತಪ್ಪು ಯಾರದ್ದು?

ಈ ವಿಡಿಯೋ ತೋರಿಸುವ ದೃಶ್ಯಗಳು ರಸ್ತೆ ಸುರಕ್ಷತೆಯ ಕುರಿತು ಗಂಭೀರ ಚಿಂತನೆಗೆ ಒಡ್ಡುತ್ತವೆ. ಈ ಅಪಘಾತದಲ್ಲಿ ತಪ್ಪು ಯಾರದ್ದು? ಬೈಕ್ ಸವಾರನ ವೇಗವೇ ಕಾರಣವೇ? ಅಥವಾ ಕಾರು ಚಾಲಕನ ನಿರ್ಲಕ್ಷ್ಯವೇ ಘಟನೆಗೆ ದಾರಿಮಾಡಿತೇ? ನಿಮ್ಮ ಅಭಿಪ್ರಾಯವೇನು?ಸಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!