
ಭೋಪಾಲ್ (ಡಿ.11): ಮುದ್ದು ಮಾಡಲು ಬಂದ ಪುಟ್ಟ ನಾಯಿಮರಿಯೊಂದನ್ನು ವ್ಯಕ್ತಿಯೊಬ್ಬ ಆಕ್ರೋಶದಿಂದ ಎತ್ತಿ ನೆಲಕ್ಕೆ ಬಡಿದು ಹತ್ಯೆ ಮಾಡಿದ ಪೈಶಾಚಿಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಘಟನೆಗೆ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿ ವಿರುದ್ಧ ಸೂಕ್ತ ಕ್ರಮದ ಭರವಸೆಯನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೀಡಿದ್ದಾರೆ.
ರಾಜ್ಯದ ಗುಣಾ ನಗರದ ಸುಭಾಷ್ ಕಾಲೊನಿಯಲ್ಲಿ ವ್ಯಕ್ತಿಯೊಬ್ಬ ಮುಚ್ಚಿದ ಅಂಗಡಿ ಮುಗ್ಗಟ್ಟಿನ ಮೆಟ್ಟಿಲುಗಳ ಮೇಲೆ ಕುಳಿತುಕೊಂಡಿದ್ದ. ಈ ವೇಳೆ ಆತನ ಬಳಿ ಎರಡು ಪುಟ್ಟ ನಾಯಿಮರಿಗಳು ಬಾಲ ಅಲ್ಲಾಡಿಸುತ್ತ ಬಂದಿವೆ. ಈ ಪೈಕಿ ಒಂದು ಮರಿ ಹಿಂದಿನಿಂದ ಆತನನ್ನು ಮುಟ್ಟಿದಾಗ ಒಮ್ಮೆಗೆ ಗಾಬರಿಗೊಂಡ ಆತ, ಸಿಟ್ಟಿನಲ್ಲಿ ನಾಯಿಮರಿಯನ್ನು ಎತ್ತಿ ನೆಲಕ್ಕೆ ಅಪ್ಪಳಿಸಿದ್ದಾನೆ. ಬಳಿಕ ಎದ್ದು ಹೋಗಿ ಮತ್ತೆ ನಾಯಿಯನ್ನು ಜೋರಾಗಿ ಎರಡು ಮೂರು ತುಳಿದಿದ್ದಾನೆ. ಪರಿಣಾಮ ಮರಿ ಅಲ್ಲೇ ಸಾವನ್ನಪ್ಪಿದೆ. ಈ ಘಟನೆ ಸಿಸಿಟೀವಿಯೊಂದಲ್ಲಿ ಸೆರೆಯಾಗಿದ್ದು, ನಾಯಿಮರಿ ಕೊಂದ ವ್ಯಕ್ತಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ