ದಡ್ಡತನದಿಂದ ದೊಡ್ಡ ದುರಂತವಾಗಿದೆ; ಅಜಯ್ ರಾವ್ ಪ್ರತಿಕ್ರಿಯೆ

Published : Aug 09, 2021, 05:47 PM ISTUpdated : Aug 09, 2021, 05:51 PM IST
ದಡ್ಡತನದಿಂದ ದೊಡ್ಡ ದುರಂತವಾಗಿದೆ; ಅಜಯ್ ರಾವ್ ಪ್ರತಿಕ್ರಿಯೆ

ಸಾರಾಂಶ

* ಸಿನಿಮಾ‌ ಚಿತ್ರೀಕರಣದ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ವ್ಯಕ್ತಿ ಸಾವು * ಚಿತ್ರೀಕರಣ ವೇಳೆ ವಿದ್ಯುತ್ ಅವಘಡ ದಿಂದ ಸಾವು * ರಾಮನಗರದ ಬಿಡದಿ ಬಳಿ ಹೋಬಳಿಯ ಜೋಗರಪಾಳ್ಯದಲ್ಲಿ ಘಟನೆ * ದುರಂತದ ಬಗ್ಗೆ ನಟ ಅಜಯ್ ರಾವ್ ಪ್ರತಿಕ್ರಿಯೆ

ರಾಮನಗರ(ಆ. 09)  ಸಿನಿಮಾ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು ಯಾವ ಕಾರಣಕ್ಕೆ ಹೀಗಾಗಿದೆ ಎನ್ನುವುದು ಗೊತ್ತಾಗುತ್ತಿಲ್ಲ.. ಎಚ್ಚರಿಕೆ ತೆಗೆದುಕೊಳ್ಳಲು ಮೊದಲೇ ಹೇಳಿದ್ದೆ ಎಂದು ನಟ ಅಜಯ್ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.

ಘಟನೆ ನಡೆಯುವ ವೇಳೆ ನಾನು ಅಲ್ಲಿ ಇರಲಿಲ್ಲ..ಯಾವ ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನುವುದು ಗೊತ್ತಿಲ್ಲ.. ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಕೆಲವು ಪ್ಯಾಚ್ ವರ್ಕ್ ಶೂಟಿಂಗ್ ಕೆಲಸಗಳು ಬಾಕಿ ಇದ್ದವು. ನಾಲ್ಕು ದಿನದಿಂದ ಫೈಟ್ ಸಿಕ್ವೆನ್ಸ್ ನಡೆಯುತ್ತಿತ್ತು. ನಾನು ದೂರದಲ್ಲಿ ಕುಳಿತುಕೊಂಡಾಗ ಶಬ್ದ ಕೇಳಿದೆ. ನಾನು ಕೆಳಗೆ ಬಂದು ನೋಡಿದಾಗ ವಿವೇಕ್ ಎಂಬುವರನ್ನು ಕರೆದುಕೊಂಡು ಹೋದರು. ಆತನ ಬಾಯಿಂದ ರಕ್ತ ಸುರಿಯುತ್ತಿತ್ತು ಎಂದಿದ್ದಾರೆ.

ಸಿನಿಮಾ ಶೂಟಿಂಗ್ ವೇಳೆ ಘೋರ ದುರಂತ, ವಿದ್ಯುತ್ ಶಾಕ್ ಗೆ ಫೈಟರ್ ಬಲಿ

ಘಟನೆಯಲ್ಲಿ ವಿವೇಕ್ ಎಂಬುವರು ಮೃತಪಟ್ಟಿದ್ದರೆ.. ರಂಜಿತ್ ಎನ್ನುವರು ಗಂಭೀರ ಗಾಯಗೊಂಡಿದ್ದಾರೆ.   ಮೆಟಲ್ ರೋಪ್ ಬಳಸಿದ್ದರಿಂದ ದುರಂತ ಸಂಭವಿಸಿದೆ. ಮಧ್ಯಾಹ್ನ 12  ಗಂಟೆ ವೇಳೆ ಅವಘಡ ಸಂಭವಿಸಿದೆ ಎಂದಿದ್ದಾರೆ.

ಜೀವ ಕಳೆದುಕೊಂಡ ವ್ಯಕ್ತಿಗೆ ನ್ಯಾಯ ನೀಡಬೇಕಾಗಿದೆ.  ಹೈ ಟೆನ್ಶನ್ ವೈರ್ ಹೋಗಿರುವ ಜಾಗದಲ್ಲಿ ಸೀನ್ ಹಾಕಿಕೊಂಡಿದ್ದು ಅವಘಡಕ್ಕೆ ಕಾರಣವಾಗಿದೆ ಎಂದಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಪರೂಪದ ಕೋತಿ ಪ್ರಭೇದ ಬ್ಯಾಗ್‌ನಲ್ಲಿಟ್ಟು ವಿದೇಶದಿಂದ ಅಕ್ರಮ ಸಾಗಾಟ, ಬೆಂಗಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ!
ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ