
ಕೋಲಾರ ( ಸೆ.16) ಕೋಲಾರ - ಚಿಂತಾಮಣಿ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ತಂದೆ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೋಲಾರ ತಾಲೂಕಿನ ಮದ್ದನಹಳ್ಳಿ ಬಳಿಯ ಮುರಾರ್ಜಿ ಶಾಲೆಯ ಮುಂಭಾಗ ಅಪಘಾತ ಸಂಭವಿಸಿದೆ. KSRTC ಬಸ್ ,ಟಾಟಾ ಎಸ್ ಹಾಗೂ ದ್ವಿಚಕ್ರ ವಾಹನಗಳ ಸರಣಿ ಅಪಘಾತವಾಗಿದೆ.
ಪೆಟ್ರೋಲ್ ಖಾಲಿ ಎಂದು ಬೈಕ್ ನಿಲ್ಲಿಸಿದ್ದವರಿಗೆ ಬಂದು ಅಪ್ಪಳಿಸಿದ ಯಮ 'ಕಾರು'
ಸಾವನ್ನಪ್ಪಿರುವ ತಂದೆ ಹಾಗೂ ಮಗಳ ವಿಳಾಸ ತಿಳಿದುಬಂದಿಲ್ಲ. ಬಸ್ ಹಾಗೂ ಟಾಟಾ ಎಸಿ ನಡುವೆ ಸಿಲುಕಿಕೊಂಡ ದ್ವಿಚಕ್ರ ವಾಹನದಲ್ಲಿದ್ದವರು ಸಿಲುಕಿಕೊಂಡಿದ್ದಾರೆ. ಕೋಲಾರದಿಂದ ಚಿಂತಾಮಣಿ ಕಡೆಗೆ ಹೋಗುತ್ತಿದ್ದ KSRTC ಬಸ್ ಚಾಲಕನದ್ದೇ ತಪ್ಪಿದೆ ಎಂದು ಮೇಲು ನೋಟಕ್ಕೆ ಹೇಳಲಾಗಿದೆ.
ಬೆಂಗಳೂರಿನಲ್ಲಿಯೂ ಕಳೆದ ಒಂದೆರಡು ವಾರದಲ್ಲಿ ಭೀಕರ ಅಪಘಾತಕ್ಕೆ ಪ್ರಾಣ ಹಾನಿಯಾಗಿದೆ. ಕೋರಮಂಗಲದ ಆಡಿ ಕಾರಿನ ದುರಂತ, ಎಲೆಕ್ಟ್ರಾನಿಕ್ ಸಿಟಿ ಫ್ಲೈ ಒಔರ್ ದುರಂತ ದ ಜತೆಗೆ ಮದ್ಯದ ನಶೆಯಲ್ಲಿದ್ದ ಟಿಟಿ ಚಾಲಕ ಜನರ ಮೇಲೆ ವಾಹನ ಹಾಯಿಸಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ