
ಯಾದಗಿರಿ (ಡಿ.4): ರೈಲಿನಲ್ಲಿ ಸೀಟಿನ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿರುವ ಯಾದಗಿರಿ ಬಳಿ ಉದ್ಯಾನ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದಿದೆ.
ಯಾದಗಿರಿಯಿಂದ ಬೆಂಗಳೂರಿನತ್ತ ಹೊರಟಿದ್ದ ಟ್ರೈನ್. ಯಾದಗಿರಿ ಬಿಡುತ್ತಲೇ ನಡೆದಿರುವ ಜಗಳ. ಪ್ರಯಾಣಿಸುತ್ತಲೇ ಹೊಡೆದಾಡಿಕೊಂಡ ಯುವಕರು. ಕೆಲ ಯುವಕರು ಪುಂಡಾಟ ಮಾಡಿ ಮಹಿಳೆಯರ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಉದ್ಯಾನ ಎಕ್ಸ್ಪ್ರೆಸ್ ಪ್ರಯಾಣ ವೇಳೆ ಸೀಟಿನ ವಿಚಾರಕ್ಕೆ ನಡೆದ ಮಾತಿನ ಚಕಮಕಿ ಅನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ನಡೆದಿರೋ ಹೊಡೆದಾಟ. ಸಹಪ್ರಯಾಣಿಕರು ಬಿಡಿಸಿದ್ರೂ ಸಹ ಸೀಟಿನ ಮೇಲೆ ಏರಿ ಹಲ್ಲೆ ನಡೆಸಿರೋ ಪುಂಡರು. ಟ್ರೈನ್ ಮಂತ್ರಾಲಯ ರೀಚ್ ಆಗುತ್ತಲೇ ರೈಲು ಬೋಗಿಗೆ ಎಂಟ್ರಿ ಆದ ಪೊಲಿಸರು. ಸದ್ಯ ಹಲ್ಲೆ ನಡೆಸಿರುವ ಪುಂಡ ಯುವಕರ ವಿಚಾರಣೆ ನಡೆಸಿರು ಪೊಲೀಸರು.
ಅನ್ನಭಾಗ್ಯ ಅಕ್ಕಿ ಅಕ್ರಮದಲ್ಲಿ ಕೇಳಿಬಂದಿರೋ ವ್ಯಕ್ತಿಗೆ ಪೊಲೀಸ್ ಸನ್ಮಾನ: ಫೋಟೋ ವೈರಲ್!
ಪ್ರತಿದಿನವೂ ಉದ್ಯಾನ ಎಕ್ಸ್ಪ್ರೆಸ್ ಅತೀಯಾದ ಜನಜಂಗುಳಿಯಿಂದ ತುಂಬಿರುತ್ತದೆ ಈ ವೇಳೆ ಅನ್ಯರಾಜ್ಯದ ಪಾನಮತ್ತ ಯುವಕರು ಕ್ಷುಲ್ಲಕ ಕಾರಣಕ್ಕೆ ಜಗಳ ಹಲ್ಲೆ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಹೀಗಾಗಿ ರೈಲ್ವೆ ಪ್ರಯಾಣ ಎಂದರೆ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ. ರೈಲ್ವೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕೈಗೊಳ್ಳಬೇಕಿದೆ ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ