ಕಮೆಂಟ್ ಮಾಡಿದ್ದ  ಬಿಗ್ ಬಾಸ್ ಪ್ರಥಮ್‌ಗೆ ಸಂಕಷ್ಟ, ಉತ್ತರ ಕೊಡ್ಲೇ ಬೇಕು!

Published : Aug 18, 2020, 08:08 PM IST
ಕಮೆಂಟ್ ಮಾಡಿದ್ದ  ಬಿಗ್ ಬಾಸ್ ಪ್ರಥಮ್‌ಗೆ ಸಂಕಷ್ಟ, ಉತ್ತರ ಕೊಡ್ಲೇ ಬೇಕು!

ಸಾರಾಂಶ

ಪ್ರಥಮ್ ಗೆ ಹಲಸೂರು ಗೇಟ್ ಪೊಲೀಸರಿಂದ ನೋಟಿಸ್/ 7 ದಿನದೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್/ ಡಿಜೆ ಹಳ್ಳಿ ಗಲಭೆ ಪ್ರಕರಣ ಟ್ರೋಲ್ ವಿಡಿಯೋಗೆ ಕಮೆಂಟ್ ಮಾಡಿದ್ದ ಪ್ರಥಮ್/

ಬೆಂಗಳೂರು (ಆ.18): ಬಿಗ್  ಬಾಸ್ ಪ್ರಥಮ್ ಗೆ  ಪ್ರಥಮ್ ಗೆ ಹಲಸೂರು ಗೇಟ್ ಪೊಲೀಸರು ನೋಟಿಸ್ ನೀಡಿದ್ದಾರೆ. 7 ದಿನದೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ್ದ ಟ್ರೋಲ್ ವಿಡಿಯೋಗೆ ಕಮೆಂಟ್ ಮಾಡಿದ್ದ ಪ್ರಥಮ್ ವಿರುದ್ಧ ದೂರು ದಾಖಲಾಗಿತ್ತು. ಪ್ರಥಮ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಎಸ್ ಡಿ ಪಿ ಐ ನ ಉಮರ್ ಫಾರೂಕ್ ದೂರು ದಾಖಲಿಸಿದ್ದರು. ಸಮುದಾಯಕ್ಕೆ  ಅವಹೇಳನ ಮಾಡಿದ್ದಾರೆಂದು ಕೇಸ್ ದಾಖಲಾಗಿತ್ತು.

ಎಂದೂ ಹುಟ್ಟುಹಬ್ಬ ಆಚರಿಸದ ಹಿರಿಯ ನಟನಿಂದ ಕೇಕ್ ಕಟ್‌ ಮಾಡಿಸಿದ ಪ್ರಥಮ್!

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಸೇರಿದಂತೆ ಇನ್ನಿತರ ಪರಿಚ್ಛೇದಗಳಡಿ ಪ್ರಥಮ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ವಿಚಾರಣೆಗೆ ಬರುವಂತೆ ಆರೋಪಿಗೆ ಶೀಘ್ರವೇ ನೋಟಿಸ್‌ ನೀಡಲಾಗುತ್ತದೆ ಎಂದು ಅಧಿಕಾರಿಗಳು ಈ ಮೊದಲೆ ಹೇಳಿದ್ದು ಈಗ ನೋಟಿಸ್ ನೀಡಿದ್ದು ಪ್ರಥಮ್ ಉತ್ತರ ನೀಡಲೇಬೇಕಾಗಿದೆ.

ಫೆಸ್ ಬುಕ್ ಪೋಸ್ಟ್ ಕಾರಣಕ್ಕೆ ಹುಟ್ಟಿಕೊಂಡ ಬೆಂಗಳೂರು ಗಲಭೆ ಸಾರ್ವಜನಿಕ ಆಸ್ತಿ ಹಾನಿಗೂ ಕಾರಣವಾಗಿತ್ತು. ಕಿಡಿಗೇಡಿಗಳು ಪೊಲೀಸ್ ಠಾಣೆಯ ಮೇಲೂ ದಾಳಿ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಉತ್ತರಕನ್ನಡ: ನೀರು ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮರು ಎಸ್ಕೇಪ್!
ನಟಿ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿಯಿಂದ ಗಲಾಟೆ; ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ!