
ಬೆಂಗಳೂರು(ಮಾ. 30) ಕೋರೋನಾ ಬಗ್ಗೆ ಸುಳ್ಳು ಸುದ್ದಿ ಹರಡಿ ಕಾರ್ಫೋರೇಟರ್ ಪತಿ ಅಂದರ್ ಆಗಿದ್ದಾನೆ. ಯಲಹಂಕ ಪೊಲೀಸರಿಂದ ಕಾರ್ಪೋರೇಟರ್ ಪದ್ಮಾವತಿ ಪತಿ ಅಮರ್ ನಾಥ್ ಬಂಧನವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನಿಗೆ ಕೊರೋನಾ ಇದೆ ಎಂದು ವದಂತಿ ಹಬ್ಬಿಸಿದ್ದ ಅಮರ್ ನಾಥ್ ಇದೀಗ ಪೊಲೀಸರ ಕಸ್ಟಡಿಯಲ್ಲಿ ಇದ್ದಾನೆ.
ಚೌಡೇಶ್ವರಿ ವಾರ್ಡ್ 2 ರ ಕಾರ್ಫೋರೇಟರ್ ಪದ್ಮಾವತಿ ಪತಿ ಈ ಅಮರ್ ನಾಥ್ ಬಂಧನವಾಗಿದೆ. ಜನಪ್ರತಿನಿಧಿಯ ಗಂಡ ಎಂಬುದನ್ನೂ ಮರೆತು ಪುಂಡು-ಪೋಕರಿಗಳಂತೆ ಸುಳ್ಳು ಸುದ್ಧಿ ಹರಿಬಿಟ್ಟ ವಿಕೃತಿ ಮೆರೆದಿದ್ದಕ್ಕೆ ಇದೀಗ ವಿಚಾರಣೆ ಎದುರಿಸಬೇಕಾಗಿ ಬಂದಿದೆ. ಅಮರ್ ನಾಥ್ ವಿರುದ್ಧ ಐಪಿಸಿ ಸೆಕ್ಷನ್ 153, 188, 504 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಅರೆಸ್ಟ್ ಮಾಡಿ ಯಲಹಂಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯಾರೇಳಿದ್ದು ಗಡಿ ಬಂದ್ ಮಾಡಿದ್ದಾರೆ ಅಂಥ, ಅರಣ್ಯದಲ್ಲಿ ಹರಿದ ಮದ್ಯದ ಹೊಳೆ!
ಕೊರೋನಾ ಆತಂಕ ಇಡೀ ಪ್ರಪಂಚ ಕಾಡುತ್ತಿದೆ. ದಯವಿಟ್ಟು ಎಲ್ಲರೂ ಜಾಗೃತರಾಗಿರಿ, ಸ್ವಚ್ಛತೆಗೆ ವಿಶೇಷ ಗಮನ ನೀಡಿ, ಸುಳ್ಳು ಸುದ್ದಿ ಹರಬೇಡಿ ಎಂದು ಕೇಳಿಕೊಂಡಿದ್ದರೂ ಈ ರೀತಿಯ ಬೆಳವಣಿಗೆ ನಡೆದಿರುವುದು ನಿಜಕ್ಕೂ ಆತಂಕಕಾರಿ. ಸೋಶಿಯಲ್ ಮೀಡಿಯಾದ ಕಣ್ಣಿಡುವಾಗ ಒಂಚೂರು ಪರಾಮರ್ಶೆಗೆ ಒಳಪಡಿಸುವುದು ಒಳಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ