
ಗದಗ (ಡಿ.3) : ನಗರದ ಜೋಡ ಮಾರುತಿ ದೇವಸ್ಥಾನದ ಬಳಿ ಯುವಕರ ಗುಂಪು ಕುಡಿದ ಮತ್ತಿನಲ್ಲಿ ಮೂವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಊಟ ಮಾಡಿ ರಸ್ತೆ ಪಕ್ಕನಿಂತಿದ್ದ ವಸಂತ ಬಾಕಳೆ, ಗೋಪಾಲ ಖೋಡೆ, ಮಾಧು ಸಾ ಬದಿ ಎಂಬುವವರಿಗೆ ಐವರು ಪುಂಡರು ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೂವರು ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ರಾತ್ರಿ ರಂಗನವಾಡಿ ಬಡಾವಣೆಯ ಸಾದೀಕ್ ಅಲ್ಲೊಳ್ಳಿ, ವಿನೇಶ್ ಶಿರಹಟ್ಟಿ, ಸೆಟಲ್ಮೆಂಟ್ ಏರಿಯಾದ ಶಿವಾನಂದ ಸೇರಿದಂತೆ ಐವರು ಕುಡಿದು ಬೈಕ್ ಮೇಲೆ ಬರುತ್ತಿದ್ರು. ಗದ್ದಲ ಗಲಾಟೆ ಮಾಡ್ತಿದ್ದ ಪುಂಡರಿಗೆ ವಸಂತ, ಗೋಪಾಲ್ ಬುದ್ಧಿ ಹೇಳೋದಕ್ಕೆ ಮುಂದಾಗಿದ್ರಂತೆ. ಇದ್ರಿಂದ ಕೋಪಗೊಂಡಿರುವ ಪುಂಡರು ಏಕಾಏಕಿ ಬೈಕ್ ನಿಲ್ಲಿಸಿ ದಾಳಿ ಮಾಡಿದ್ದಾರೆ. ಈ ವೇಳೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.. ವಸಂತ, ಗೋಪಾ, ಮಾಧು ಅವರಿಗೆ ಭುಜ, ಬೆನ್ನು ಎದೆ ಭಾಗಕ್ಕೆ ಚಾಕು ಇರಿತದಿಂದ ಗಂಭೀರ ಗಾಯಗೊಂಡಿದ್ದಾರೆ.
ಬೈಕ್ ತಾಗಿದ್ದಕ್ಕೆ ಹಿಂದೂ ಯುವಕರಿಬ್ಬರಿಗೆ ಹಲ್ಲೆ
ರಾತ್ರಿ ಕುಡಿದಿದ್ದ ಪುಂಡರ ಗುಂಪು, ಮುಳಗುಂದ ನಾಕಾ ಬಳಿಯೇ ಗಲಾಟೆ ಮಾಡಿಕೊಂಡು ಬಂದಿದ್ದಾರೆ. ಮಾರುತಿ ಮಂದಿರದ ಬಳಿ ಬರ್ತಿದ್ದಂತೆ ಮತ್ತೆ ಗಲಾಟೆ ಮಾಡಿಕೊಂಡು ಹಲ್ಲೆ ನಡೆಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಶಹರ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ