ನೆರೆಹೊರೆಯವರಿಗೆ ಕಚ್ಚಿದ ನಾಯಿಯ ಮಾಲಿಕನಿಗೆ ಜೈಲು!

Published : Jan 06, 2020, 09:51 AM IST
ನೆರೆಹೊರೆಯವರಿಗೆ ಕಚ್ಚಿದ ನಾಯಿಯ ಮಾಲಿಕನಿಗೆ ಜೈಲು!

ಸಾರಾಂಶ

ನೆರೆಹೊರೆಯವರಿಗೆ ಕಚ್ಚಿದ ನಾಯಿಯ ಮಾಲಿಕನಿಗೆ ಒಂದು ವರ್ಷ ಜೈಲು!| ಮಾಲಿಕನ ಬೇಜವಾಬ್ದಾರಿಯಿಂದಾಗಿ ನಾಯಿ ದಾಳಿ ಮಾಡಿ ಜೀವಕ್ಕೆ ಅಪಾಯ ಉಂಟಾಗುವಂತೆ ದಾಳಿ ಮಾಡಿದೆ

ಅಹ್ಮದಾಬಾದ್‌[ಜ.06]: ನಿಮ್ಮ ಮನೆಯ ನಾಯಿ ಬೇರೆಯವರಿಗೆ ತೊಂದರೆ ಕೊಡುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಇಲ್ಲದಿದ್ದರೆ ಕಂಬಿ ಎಣಿಸಬೇಕಾಗಬಹುದು. ಹೌದು ಪಕ್ಕದ ಮನೆಯ ನಾಲ್ವರಿಗೆ ಕಚ್ಚಿದ್ದಕ್ಕೆ ನಾಯಿಯ ಮಾಲೀಕರಿಗೆ ಸ್ಥಳೀಯ ನ್ಯಾಯಾಲಯವೊಂದು 1 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಇಲ್ಲಿನ ಘೋಡಾಸರ್‌ ನಿವಾಸಿ ಭರೇಶ್‌ ಪಾಂಡ್ಯಾ (49) ಎಂಬುವವರ ನಾಯಿ 2012 ಹಾಗೂ 2014ರಲ್ಲಿ ನೆರೆ ಮನೆಯ ಮೂವರು ಮಕ್ಕಳು ಸೇರಿ ನಾಲ್ಕು ಮಂದಿಗೆ ಗಾಯ ಮಾಡಿತ್ತು. ನಾಯಿ ದಾಳಿಯಿಂದ ಮೂಳೆ ಮುರಿತವಾಗಿದೆ ಎಂದು ಅವಿನಾಶ್‌ ಪಟೇಲ್‌ ಎಂಬುವವರು ಇಸಾನ್‌ಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದ.

ಮಾಲಿಕನ ಬೇಜವಾಬ್ದಾರಿಯಿಂದಾಗಿ ನಾಯಿ ದಾಳಿ ಮಾಡಿ ಜೀವಕ್ಕೆ ಅಪಾಯ ಉಂಟಾಗುವಂತೆ ದಾಳಿ ಮಾಡಿದೆ ಎಂದು ಪರಿಗಣಿಸಿ ನ್ಯಾಯಾಲಯ 1 ವರ್ಷ ಜೈಲು ಹಾಗೂ 1500ರು. ದಂಡ ವಿಧಿಸಿದೆ. 15 ಸಾಕ್ಷಿಗಳನ್ನು ವಿಚಾರಣೆ ನಡೆಸಿ ಕೋರ್ಟ್‌ ಈ ತೀರ್ಪು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಫೇಸ್‌ಬುಕ್‌ ಗೆಳತಿಗಾಗಿ ಮಡಿಕೇರಿಗೆ ಬಂದು ನರಕ ನೋಡಿದ ಮಂಡ್ಯದ ಹೈದ! ಬೆತ್ತಲೆಯಾಗಿ ಓಡೋಡಿ ಬಂದ!
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?