ಮಂಗಳೂರಲ್ಲಿ 38 ಮಂದಿ ಶ್ರೀಲಂಕಾ ಪ್ರಜೆಗಳ ಬಂಧನ

Kannadaprabha News   | Asianet News
Published : Jun 12, 2021, 08:08 AM ISTUpdated : Jun 12, 2021, 05:07 PM IST
ಮಂಗಳೂರಲ್ಲಿ 38 ಮಂದಿ ಶ್ರೀಲಂಕಾ ಪ್ರಜೆಗಳ ಬಂಧನ

ಸಾರಾಂಶ

* ಮಾನವ ಕಳ್ಳ ಸಾಗಾಟ ಜಾಲ ಪತ್ತೆ * ತಮಿ​ಳು​ನಾ​ಡು ಮೂಲ​ಕ ಮಂಗ​ಳೂ​ರಿ​ಗೆ ಬಂದು ಅಕ್ರ​ಮ​ವಾ​ಗಿ ನೆಲೆಸಿದ್ದ ಲಂಕಾ ಪ್ರಜೆಗಳು * ತಮಿ​ಳು​ನಾ​ಡು ಗು​ಪ್ತ​ಚ​ರ ಇಲಾ​ಖೆ​ಯಿಂದ ಬಂದ ಮಾಹಿ​ತಿ

ಮಂಗಳೂರು(ಜೂ.12): ಉದ್ಯೋ​ಗ ಅರ​ಸಿ ಕೆನ​ಡಾ ತೆರ​ಳು​ವ ಯತ್ನ​ದ​ಲ್ಲಿ ತಮಿ​ಳು​ನಾ​ಡು ಮೂಲ​ಕ ಮಂಗ​ಳೂ​ರಿ​ಗೆ ಬಂದು ಅಕ್ರ​ಮ​ವಾ​ಗಿ ಆಶ್ರ​ಯ ಪಡೆ​ದಿ​ದ್ದ 38 ಮಂದಿ ಶ್ರೀಲಂಕಾ​ ಪ್ರಜೆ​ಗ​ಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

"

ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾನವ ಕಳ್ಳ​ಸಾ​ಗಾ​ಟ​ದ ​ಗಂಭೀ​ರ ಪ್ರಕ​ರ​ಣ ಇದಾ​ಗಿ​​ದ್ದು, ​ವಶ​ಕ್ಕೆ ಪಡೆ​ಯ​ಲಾ​ದವರು ಉತ್ತ​ರ ಶ್ರೀಲಂಕಾ​ದ ನಿ​ವಾ​ಸಿ​ಗಳು. ಇವರು ಸೀ ಪೋರ್ಟ್‌ ​ಹಾ​ಗೂ ಮಂಗ​ಳೂ​ರು ರಾವ್‌ ಆ್ಯಂಡ್‌ ರಾವ್‌ ಸರ್ಕ​ಲ್‌ ಬಳಿ​ಯ ಸಿಟಿ ಲಾ​ಡ್ಜ್‌​ ಹಾಗೂ ಕಸ​ಬಾ ಬೆಂಗ​ರೆ​ಯ ಮನೆ​ಯೊಂದ​ರ​ಲ್ಲಿ ​ಕೂ​ಲಿ​ ಆಳೆಂದು ಹೇಳಿ​ಕೊಂಡು ನೆಲೆ​ಸಿ​ದ್ದರು. ಇವ​ರ ವಿರು​ದ್ಧ ಪಾಂಡೇ​ಶ್ವ​ರ ಠಾಣೆ​ಯ​ಲ್ಲಿ ವಿದೇ​ಶಿ ಕಾಯ್ದೆ, ಐ​ಪಿ​ಸಿ ಸೆಕ್ಷ​ನ್‌ 14ರ ವಿದೇ​ಶಿ​ಯ​ರ ಕಾಯ್ದೆ 1964 ಸೆಕ್ಷ​ನ್‌ 12 (1) (ಎ​)​ ಪಾಸ್‌​ಪೋ​ರ್ಟ್‌ ಕಾಯ್ದೆ 1967ರಂತೆ​ ಪ್ರಕ​ರ​ಣ ದಾಖ​ಲಾ​ಗಿ​ದೆ ಎಂದರು.

ಬೆಳಗಾವಿ: ಲಾಕ್‌ಡೌನ್ ವೇಳೆ ಹಣ ಸುಲಿಗೆ, ಪೊಲೀಸಪ್ಪನ ಬಂಧನ

ಶ್ರೀ​ಲಂಕಾ ಏಜೆಂಟ​ರ ಮೂಲ​ಕ ಕೆನ​ಡಾ​ದ​ಲ್ಲಿ ಉದ್ಯೋ​ಗ​ ಭ​ರ​ವ​ಸೆ​ಯೊಂದಿ​ಗೆ 6ರಿಂದ 10 ಲಕ್ಷದ ಶ್ರೀ​​ಲಂಕಾ ಕರೆ​ನ್ಸಿ​ ಪಡೆದು ಖಾಸ​ಗಿ ಬೋಟ್‌ ಮೂಲ​ಕ ಮಾ.17ರಂದು ಚೆನ್ನೈ​ಯ ತೂತು​ಕು​ಡಿ​ಗೆ ಕರೆತರ​ಲಾ​ಗಿ​ತ್ತು. ​​ಆದ​ರೆ ಅಲ್ಲಿ ಚುನಾ​ವ​ಣೆ ಹಿನ್ನೆ​ಲೆ​ಯ​ಲ್ಲಿ ಬಿಗಿ ತಪಾ​ಸ​ಣೆ ಆರಂಭ​ಗೊಂ​ಡಾ​ಗ ಬಂಧ​ನ ಭೀತಿ​ಯ​ಲ್ಲಿ ಬೆಂಗ​ಳೂ​ರಿ​ಗೆ ಬಸ್‌​ನ​​ಲ್ಲಿ ಕಳು​ಹಿ​ಸಿ ಅಲ್ಲಿಂದ ಮಂಗ​ಳೂ​ರಿ​ಗೆ ಸಾಗಿ​ಸ​ಲಾ​ಗಿ​ತ್ತು.

ಇವರು ಮಂಗ​ಳೂ​ರಿ​ನ​ಲ್ಲಿ ಒಂದೂ​ವ​ರೆ ತಿಂಗ​ಳಿ​ನಿಂದ ವಾಸ​ವಾ​ಗಿದ್ದರು. ತಮಿ​ಳು​ನಾ​ಡು ಗು​ಪ್ತ​ಚ​ರ ಇಲಾ​ಖೆ​ಯಿಂದ ಬಂದ ಮಾಹಿ​ತಿ ಮೇರೆ​ಗೆ 78 ಗಂಟೆ​ಗ​ಳ ಕಾರ್ಯಾ​ಚ​ರ​ಣೆ​ ನಡೆಸಿ ವಶಕ್ಕೆ ಪಡೆಯಲಾಗಿದೆ ಎಂದು ಕಮಿಷನರ್‌ ತಿಳಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!