ಐಪಿಎಲ್ 2025ರಲ್ಲಿ ಹೊರಹೊಮ್ಮಿದ ತಾರೆಗಳು, ತಂಡವನ್ನು ವೈಭವಕ್ಕೆ ಕೊಂಡೊಯ್ಯಬಲ್ಲ ಉದಯೋನ್ಮುಖ ಆಟಗಾರರು

Published : May 29, 2025, 07:34 PM ISTUpdated : Jun 03, 2025, 08:10 PM IST
Emerging players IPL 2025

ಸಾರಾಂಶ

ಐಪಿಎಲ್ 2025 ರಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ಮಾಡುತ್ತಿರುವ ಉದಯೋನ್ಮುಖ ತಾರೆಯರನ್ನು ನೋಡೋಣ; ಪ್ರಸ್ತುತ ಸೀಸನ್ನಿನಲ್ಲಿ ಐಪಿಎಲ್-ಗೆ ಪ್ರಪ್ರಥಮವಾಗಿ ಪಾದಾರ್ಪಣೆ ಮಾಡಿದ ಆಟಗಾರರನ್ನು ಮಾತ್ರ ಪರಿಗಣಿಸಲಾಗಿದೆ:

2025 ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೇವಲ 14 ವರ್ಷ ವಯಸ್ಸಿನ ಯುವ ಪ್ರತಿಭೆಗಳು ಪ್ರಸ್ತುತ ನಡೆಯುತ್ತಿರುವ ಲೀಗ್ ಸೀಸನ್‌ನಲ್ಲಿ ಬೆಂಕಿ ಕಾರುವ ಡ್ರ್ಯಾಗನ್-ಗಳಾಗಿ ವಿಶ್ವ ದರ್ಜೆಯ ಕ್ರಿಕೆಟ್‌ನ ಗೋಡೆಗಳನ್ನು ಪಟಾರನೆ ಸಪ್ಪಳದೊಂದಿಗೆ ಭೇದಿಸಿ ಈಗ ದೊಡ್ಡ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಪ್ರಸಿದ್ಧ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರರಾದ ಸರ್ ವಿವಿಯನ್ ರಿಚರ್ಡ್ಸ್, ಈಗ ಪ್ಯಾರಿಮ್ಯಾಚ್ ಕ್ರೀಡಾ ವಿಶ್ಲೇಷಕರಾಗಿದ್ದು, ಈ ಉದಯೋನ್ಮುಖ ತಾರೆಯನ್ನ ಪ್ರಶಂಸಿ, ಐಪಿಎಲ್ 2025 ಕವರೇಜ್‌ಗೆ ಮೌಲ್ಯಯುತ ವಿಶ್ಲೇಷಣೆ ನೀಡಿದ್ದಾರೆ.

ಎಂಎಸ್ ಧೋನಿ, ರೋಹಿತ್ ಶರ್ಮಾ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ವಿರಾಟ್ ಕೊಹ್ಲಿಯಂತಹ ಪ್ರಸಿದ್ಧ ಆಟಗಾರರ ಹೆಸರುಗಳು ಉತ್ತಮ ಫಾರ್ಮ್‌ನಲ್ಲಿ ಇದ್ದರೂ, ದೇಶಾದ್ಯಂತ ಹೊರಹೊಮ್ಮುತ್ತಿರುವ ಪ್ರತಿಭೆಗಳು ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಫ್ರಾಂಚೈಸ್-ಗಳ ಈ ಕ್ರಿಕೆಟ್‌ನ ಅತಿದೊಡ್ಡ ವೈಭವಯುತ ವೇದಿಕೆಯಲ್ಲಿ ಪ್ರದರ್ಶಿಸುವ ಮೂಲಕ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳನ್ನು ಮೆಚ್ಚಿಸುತ್ತಿರುವುದರಿಂದ ಈ ಪ್ರಸಿದ್ಧಿ ವ್ಯಕ್ತಿಗಳ ಹೆಸರು ಈಗ ಊರ ಮಂದಿ ಬಡಬಡಿಸುವ ರೀತಿ ಎಂದಿನಂತೆ ಸುದ್ದಿಯಲ್ಲಿಲ್ಲ.

ಐಪಿಎಲ್ 2025 ರಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ಮಾಡುತ್ತಿರುವ ಉದಯೋನ್ಮುಖ ತಾರೆಯರನ್ನು ನೋಡೋಣ; ಪ್ರಸ್ತುತ ಸೀಸನ್ನಿನಲ್ಲಿ ಐಪಿಎಲ್-ಗೆ ಪ್ರಪ್ರಥಮವಾಗಿ ಪಾದಾರ್ಪಣೆ ಮಾಡಿದ ಆಟಗಾರರನ್ನು ಮಾತ್ರ ಪರಿಗಣಿಸಲಾಗಿದೆ:

#5 ಆಯುಷ್ ಮ್ಹಾತ್ರೇ (ಚೆನ್ನೈ ಸೂಪರ್ ಕಿಂಗ್ಸ್)

ವಿರಾರ್‌ನಿಂದ ಚರ್ಚ್‌ಗೇಟ್‌ಗೆ ಪ್ರತಿದಿನ 160 ಕಿಲೋಮೀಟರ್ ಪ್ರಯಾಣಿಸಿ ಜಾಲಿಗಳಲ್ಲಿ ಕ್ರಿಕೆಟ್ ಅಭ್ಯಾಸಕ್ಕೆ ಹಾಜರಾಗುತ್ತಿದ್ದ ಬಾಲಕನಿಗೆ XI ರಲ್ಲಿ ಆಡುವ ಅನುಭವದ ಮೇರೆಗೆ ಅಂತಿಮವಾಗಿ ಐಪಿಎಲ್ ಆಡುವ ಅವಕಾಶವು ಬಹುಮಾನದ ಹಾಗೆ ಸ್ಥಾನ ಸಿಕ್ಕಿದೆ. ಮ್ಹಾತ್ರೇ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಿಂದ - ಇಬ್ಬರಿಂದಲೂ ಅವರಿಗೆ ಟ್ರಯಲ್ಸ್‌ಗೆ ಆಹ್ವಾನಿಸಲಾಯಿತು, ಆದರೆ ದುಬೈನ ಜೆಡ್ಡಾದಲ್ಲಿ ನಡೆದ ಮೆಗಾ-ಹರಾಜಿನಲ್ಲಿ ಈ ಇಬ್ಬರು ಫ್ರಾಂಚೈಸಿಗಳು ಯುವ ಆಟಗಾರನಿಗೆ ಬಿಡ್ ಸಲ್ಲಿಸಲಿಲ್ಲ.

ನಂತರದಲ್ಲಿ, ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ ರವರು ಮೊಣಕೈ ಮೂಳೆ ಮುರಿತದಿಂದಾಗಿ ಈ ಸೀಸನ್‍ನಿಂದ ಹೊರಗುಳಿದಿದ್ದಾರೆ ಎಂದಾದಾಗ ಅವರ ಬದಲಿಗೆ ಯುವ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿತು. ಸಂಯೋಗವಶಾತ್, ಮ್ಹಾತ್ರೇ ಅವರು ತಮ್ಮ ತವರಿನ ಮೈದಾನ ವಾಂಖೆಡೆ ಕ್ರೀಡಾಂಗಣದಲ್ಲಿ ಐ.ಪೀ.ಎಲ್. ಗೆ ಪ್ರಪ್ರಥಮ ಬಾರಿ ಪಾದಾರ್ಪಣೆ ಮಾಡಿದರು, ಅಲ್ಲಿ ಬ್ಯಾಟರ್ ಪಾತ್ರದಲ್ಲಿ ಮ್ಹಾತ್ರೇ ಸಿ.ಎಸ್.ಕೆ ತಂಡದ ಕಟ್ಟಾ ಪ್ರತಿಸ್ಪರ್ಧಿ ಎನಿಸಿಕೊಂಡಿರುವ ಎಂ.ಐ ವಿರುದ್ಧ 15 ಎಸೆತಗಳಲ್ಲಿ 32 ರನ್ ಗಳಿಸಿದರು.

ಹದಿಹರೆಯದ ಆಟಗಾರ ಅಲ್ಲಿಂದೀಚೆಗೆ ಅಮೂಲ್ಯವಾದ ಹಲವು ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ, ಸನ್-ರೈಸರ್ಸ್ ಹೈದರಾಬಾದ್ ವಿರುದ್ಧ 19 ಎಸೆತಗಳಲ್ಲಿ 30 ರನ್ ಗಳಿಸಿದ್ದಾರೆ, ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 48 ಎಸೆತಗಳಲ್ಲಿ 94 ರನ್ ಗಳಿಸಿದ್ದಾರೆ, ಇದರಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್-ಗಳು ಒಳಗೊಂಡಿರುತ್ತವೆ.

#4 ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್)

ವೈಭವ್ ಸೂರ್ಯವಂಶಿ ದುಬೈನ ಜೆಡ್ಡಾದಲ್ಲಿ ನಡೆದ ಮಹಾ-ಹರಾಜಿನ 2 ನೇ ದಿನದಂದು ತಮ್ಮ ಹೆಸರನ್ನು ಮುಖ್ಯಾಂಶಗಳನ್ನು ಮಾಧ್ಯಮಗಳಲ್ಲಿ ಮುದ್ರಿಸುವಂತೆ ಮಾಡಿದರು, ಏಕೆಂದರೆ ಬಿಹಾರದ ಈ 13 ವರ್ಷದ ಬಾಲಕನನ್ನು ರಾಜಸ್ಥಾನ್ ರಾಯಲ್ಸ್ ಬೃಹತ್ ಮೊತ್ತಕ್ಕೆ, ಕಲ್ಪನೆಗೆ ಬಾರದ ಈ ಅದ್ಭುತ ಪ್ರತಿಭೆಯನ್ನು ಪಡೆದುಕೊಂಡಾಗ ಕೋಟ್ಯಾಧಿಪತಿಯಾದರೋ, ಇದು ಅನುಭವಿ ವೃತ್ತಿಪರರ ಮೇಲೆ ಪರಿಣಾಮ ಬೀರಬಹುದಾದ ಘಳಿಗೆಯಾಗಿಬಿಟ್ಟಿದೆ.

ಆರ್. ಆರ್. ತಂಡದ ನಾಯಕ ಸಂಜು ಸ್ಯಾಮ್ಸನ್ ರವರನ್ನು ಈ ಸೀಸನ್‍ನಿಂದ ಕೈಬಿಟ್ಟ ನಂತರ, ಸೂರ್ಯವಂಶಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಐಪಿಎಲ್-ಗೆ ಪಾದಾರ್ಪಣೆ ಮಾಡಿದರು ಮತ್ತು ರಿಷಭ್ ಪಂತ್ ರವರಿಂದ ಸ್ಟಂಪ್ ಔಟ್ ಆಗುವ ಮೊದಲು 20 ಎಸೆತಗಳಲ್ಲಿ 34 ರನ್-ಗಳನ್ನು ಸರಿಯಾಗಿ ಬ್ಯಾಟ್ ಬೀಸಿ ಗಳಿಸಿದ್ದರು.

ಪ್ಲೇ-ಆಫ್ ಪಟ್ಟಿಯಲ್ಲಿ ಅಗ್ರಜ ಎನಿಸಿಕೊಂಡಿರುವ ಆರ್.ಸಿ.ಬಿ. ವಿರುದ್ಧ ಸಾಧಾರಣ ಸ್ಕೋರ್ ಗಳಿಸಿದ ನಂತರ, ಸೂರ್ಯವಂಶಿ-ರವರು ಆಕಾಶದಲ್ಲಿ ತೇಲಿ ಬೀಗುತ್ತಿದ್ದ ಗುಜರಾತ್ ಟೈಟಾನ್ಸ್ ತಂಡದ ಬೌಲಿಂಗ್ ಘಟಕವನ್ನು 38 ಎಸೆತಗಳಲ್ಲಿ 101 ರನ್ ಗಳಿಸುವ ಮೂಲಕ ವೀಕ್ಷಕರನ್ನು ಬೆರಗುಗೊಳಿಸಿದರು. ಈ ಇನ್ನಿಂಗ್ಸ್-ನಲ್ಲಿ ಈ ಹದಿಹರೆಯನ ಸ್ಕೋರ್-ಕಾರ್ಡ್ ನೋಡಿದಲ್ಲಿ 7 ಬೌಂಡರಿ ಮತ್ತು 11 ಸಿಕ್ಸರ್-ಗಳು ಒಳಗೊಂಡಿರುತ್ತವೆ. ವೈಭವ್ ಐಪಿಎಲ್ ಶತಕವನ್ನು ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡರು ಮತ್ತು "ಬ್ರಹ್ಮಾಂಡದ ಬಾಸ್" ಕ್ರಿಸ್ ಗೇಲ್ ನಂತರ ಐಪಿಎಲ್ ಇತಿಹಾಸದಲ್ಲಿ ಎರಡನೇ ವೇಗದ ಶತಕವನ್ನು ದಾಖಲಿಸಿದರು.

#3 ವಿಪರಾಜ್ ನಿಗಮ್ (ಡೆಲ್ಹಿ ಕ್ಯಾಪಿಟಲ್ಸ್)

ವಿಪರಾಜ್ ನಿಗಮ್ ರವರು ಯುಪಿ ಟಿ20 ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕ್ರೀಡಾಪಟುಗಳ ಹೋಡುಕಾಟದಲ್ಲಿದ್ದ ಸ್ಕೌಟ್‌ಗಳನ್ನು ಮೆಚ್ಚಿಸಿದರು ಮತ್ತು ಮುಷ್ಠಿ-ಮಣಿಕಟ್ಟಿನ ಸ್ಪಿನ್ನರ್ ಅನ್ನು ಹರಾಜಿನಲ್ಲಿ 50 ಲಕ್ಷ ರೂಪಾಯಿಗಳಿಗೆ ಕ್ಯಾಪಿಟಲ್ಸ್ ಖರೀದಿಸಿತು. ಅವರು ತಮ್ಮ ಆರಂಭಿಕ ಪೈಪೋಟಿಯಲ್ಲಿ 15 ಎಸತಗಳಲ್ಲಿ 39 ರನ್ ಗಳಿಸಿದಲ್ಲದೆ ಏಡೆನ್ ಮಾರ್ಕ್ರಾಮ್ ರವರ ವಿಕೆಟ್ ಪಡೆದಿದ್ದಾರೆ. ಈ ಆಲ್ ರೌಂಡರ್ ಡಿಸಿಯ ಎಲ್ಲಾ 11 ಪ್ರತಿಷ್ಠಿತ ಪಂದ್ಯಗಳಲ್ಲಿ ಭಾಗವಹಿಸಿದ ನಂತರ ಇವರ ತೆಲೆಗೆ ಬೆಲೆಕಟ್ಟಿದ ಮೊತ್ತ ಒಂದು ದೊಡ್ಡ ರಿಯಾಯಿತಿಯಂತೆ ತೋರುತ್ತದೆ.

ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲಿ ಮಿಂಚಿದ ವಿಪರಾಜ್ ನಿಗಮ್ , ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 2/27 ಅಂಕಿಗಳನ್ನು ದಾಖಲಿಸಿದರು, ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ತಮ್ಮದೇ ಅಂಗಳದಲ್ಲಿ (ಎಮ್. ಚಿನ್ನಸ್ವಾಮಿ ಕ್ರೀಡಾಂಗಣ) ಸೋಲಿಸಲು 2/18 ರ ಅದ್ಭುತ ಮಾಯಾಜಾಲ ಬೀಸುವ ಮಾಂತ್ರಿಕ ಎಸೆತಗಳನ್ನು ಮಾಡಿದರು. ನಿಗಮ್ ನಂತರ ದಿಲ್ಲಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ವಿಕೆಟ್‌ಗಳನ್ನು ಪಡೆದರು, ನಂತರ ಸತತ ನಾಲ್ಕು ಪಂದ್ಯಗಳಲ್ಲಿ ಶೂನ್ಯ ವಿಕೆಟ್ ಗಳಿಸುವ ಹಂತಕ್ಕೆ ತಲುಪಿದರು.

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ತವರಿನಲ್ಲಿ ನಡೆದ ಪಂದ್ಯದ ಸೋಲಿನಲ್ಲಿ, ಆಲ್‌ರೌಂಡರ್ ಶಾಪಗ್ರಸ್ತ ಬ್ಯಾಟಿಂಗ್ ಪ್ರದರ್ಶನವನ್ನು ಗೈದ ಜೊತೆಗಾರಿಕೆಯ ಆಟವನ್ನು ಮುರಿದು, 2/41 ಅಂಕಿ ಗಳಿಸಿದರು ಮತ್ತು 19 ಎಸೆತಗಳಲ್ಲಿ 38 ರನ್ ಗಳಿಸಿ ಪಂದ್ಯದ ಕೊನೆಯ ಓವರ್‌ನವರೆಗೂ ಕ್ಯಾಪಿಟಲ್ಸ್ ತಂಡವನ್ನು ಬುಗಿಲು ಎಬ್ಬಿಸಿ ಬೇಟೆಯಲ್ಲಿಟ್ಟರು.

#2 ದಿಗ್ವೇಶ್ ರಾಠೀ (ಲಖ್ನೌ ಸೂಪರ್ ಜೈಂಟ್ಸ್)

ದಿಗ್ವೇಶ್ ರಾಠೀ ಎಲ್ಲಿಂದಲೋ ಬಂದು ಐಪಿಎಲ್ 2025 ರಲ್ಲಿ ಲಖ್ನೌ ಸೂಪರ್ ಜೈಂಟ್ಸ್ ತಂಡದ ಮೊದಲ ಆಯ್ಕೆಯ ಪ್ರಮುಖ ಸ್ಪಿನ್ನರ್ ಆದರು. ಎಲ್‌ಎಸ್‌ಜಿ ಸೀಸನ್‍ನ ಮೊದಲ ಪಂದ್ಯದಿಂದಲೂ, ನಾಯಕ ಪಂತ್ ಅತ್ಯಂತ ಅಗತ್ಯವಿರುವ ಪಂದ್ಯ ಕತ್ತಿನವರೆಗೆ ಬಂದ ಸಮಯದಲ್ಲಿ ರಾಠೀ ರವರಿಗೆ ಚೆಂಡನ್ನು ನೀಡಿದ್ದಾರೆ. ಸೂಪರ್ ಜೈಂಟ್ಸ್‌ನ ವೇಗದ ಬೌಲಿಂಗ್ ಘಟಕವು ಮೆಡಿಕಲ್ ರೂಮ್‍ನಲ್ಲಿ ಅಥವಾ ಮೈದಾನದಲ್ಲಿ ಒದ್ದಾಡುತ್ತಿರುವ ವೇಳೆ, ರಾಠೀರವರು ಆಗಾಗ್ಗೆ ಚಂಡಮಾರುತದ ಸಂದರ್ಭಗಳಲ್ಲಿ ಹೊಳೆಯುವ ಬೆಳಕಾಗಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪೋಟಿಯ ಚೊಚ್ಚಲ ಪಂದ್ಯದಲ್ಲಿ, ರಾಠೀ ಮಿತವ್ಯಯದ ಮಾಂತ್ರಿಕ ಬೌಲಿಂಗ್ ಪ್ರದರ್ಶಿಸಿದರು(ಸರಾಸರಿ 7.75), ನಾಲ್ಕು ಓವರ್‌ಗಳಲ್ಲಿ ಕೇವಲ 31 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು, ಅದೇನೇ ಆದಾಗ್ಯೂ ಕ್ಯಾಪಿಟಲ್ಸ್ ತಂಡವು ಆ ಪಂದ್ಯದಲ್ಲಿ ಒಂದು ವಿಕೆಟ್ ಬಾಕಿ ಇರುವಾಗಲೇ 211 ರನ್‌ಗಳ ಗುರಿಯನ್ನು ತಲುಪಿತು. ಎದುರಾಳಿ ತಂಡದ ನಾಯಕ ಅಕ್ಸರ್ ಪಟೇಲ್ ಮತ್ತು ಅಪಾಯಕಾರಿ ಸಹ ಆಟಗಾರ ನಿಗಮ್ ರವರನ್ನು ರಾಠೀ ಔಟ್ ಮಾಡಿದ ಪರಿಣಾಮ ಬೀರದೇ ಹೋಗಿ ಎಲ್‌ಎಸ್‌ಜಿ ಸೋಲಿನೊಂದಿಗೆ ಹೊಸ ಯುಗ ಆರಂಭಗೊಳ್ಳಲು ರಹದಾರಿ ಹಾಕಿಕೊಂಡಿತು.

ಅಂದಿನಿಂದ, ರಾಠೀ ಮೊದಲ ಆಯ್ಕೆಯ ಸ್ಪಿನ್ನರ್ ಆಗಿದ್ದಾರೆ ಮತ್ತು ಭಾರತದ ಪ್ರಮುಖ ಟಿ20ಐ ಸ್ಪಿನ್ನರ್ ರವಿ ಬಿಷ್ಣೋಯ್ ರವರ ಆಗಮಿಸುವುದರಗಿಂತ ಮೊದಲೇ ಆಡಿದ್ದಾರೆ ಮತ್ತು ರಾಠೀ ಇದುವರೆಗಿನ ಎಲ್ಲಾ ಪಂದ್ಯಗಳಲ್ಲಿ 4 ಓವರ್‌ಗಳ ಪೂರ್ಣ ಕೋಟಾವನ್ನು ಬೌಲ್ ಮಾಡಿದ್ದಾರೆ, ಹೀಗೆ ಸಾಗಿ ನಗದು-ಭರಿತ ಲೀಗ್‌ನಲ್ಲಿ 11 ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ.

#1 ಪ್ರಿಯಾಂಶ್ ಆರ್ಯ (ಪಂಜಾಬ್ ಕಿಂಗ್ಸ್)

ಸೀಸನ್‍ನ ಮಧ್ಯದಲ್ಲಿ ಮ್ಹಾತ್ರೆ ಮತ್ತು ಸೂರ್ಯವಂಶಿರವರಿಗೆ ಅವಕಾಶ ನೀಡಲಾಗಿದ್ದರೆ, ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಪಾದಾರ್ಪಣೆ ಮಾಡುವ ಮೊದಲೇ ರಿಕಿ ಪಾಂಟಿಂಗ್ ರವರ ಪಂಜಾಬ್ ಕಿಂಗ್ಸ್ ಪರ ಪ್ರಿಯಾಂಶ್ ಆರ್ಯ ಮೊದಲ ಆಯ್ಕೆಯ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದರು.

ಪ್ರಭಸಿಮ್ರನ್ ಸಿಂಗ್ ರವರೊಂದಿಗೆ ಆರಂಭಿಕನಾಗಿ ಆಡಿದ ದೆಹಲಿ ಬ್ಯಾಟ್ಸ್‌ಮನ್ 11 ಪಂದ್ಯಗಳಲ್ಲಿ 192.77 ಸ್ಟ್ರೈಕ್ ರೇಟ್‌ನಲ್ಲಿ 347 ರನ್ ಗಳಿಸುವ ಮೂಲಕ ತಮ್ಮ ಕ್ಷಮ್ಯತೆಯ ಋಜುವಾತು, ಅರ್ಹತೆಯನ್ನು ಸಾಬೀತುಪಡಿಸಿದ್ದಾರೆ, ಇದರಲ್ಲಿ ಪ್ರೀತಿ ಜಿಂಟಾ ಒಡೆತನದ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮಣಿಸಿಹಾಕಾಲು ಸಹಾಯ ಮಾಡಿದ 39 ಎಸೆತಗಳಲ್ಲಿ ಅಬ್ಬರದ ಶತಕವೂ ಒಳಗೊಂಡಿರುತ್ತದೆ. 42 ಎಸೆತಗಳಲ್ಲಿ 103 ರನ್ ಗಳಿಸಿದ ಆರ್ಯ ರವರ ಇನ್ನಿಂಗ್ಸ್, ಆ ಸಮಯದಲ್ಲಿ ಐಪಿಎಲ್‌ನಲ್ಲಿ ಎರಡನೇ ಅತಿ ವೇಗದ ಶತಕ ಮತ್ತು ಐಪಿಎಲ್‌ನಲ್ಲಿ ಕಿತ್ತಳೆ ಟೋಪಿ ಧರಿಸದೆಯೇ ಆಟಗಾರನೊಬ್ಬ ಗಳಿಸಿದ ಅತ್ಯಂತ ವೇಗದ ಶತಕ ಎಂಬ ದಾಖಲೆಯ ಸಾಧನೆಗೆ ಕಾರಣರಾದರು.

ಈ ಶತಕವು ಒಂದು ಐತಿಹಾಸಿಕ ಸಾಧನೆಯಾಗಿದೆ ಏಕೆಂದರೆ ಪಂಜಾಬ್ ಕಿಂಗ್ಸ್ ಈಗ ಕಿತ್ತಳೆ ಟೋಪಿ ಧರಿಸದೆಯೇ ಯಾರೋ ಆಡದ 4 ಆಟಗಾರರು ಶತಕಗಳನ್ನು ಹೊಂದಿದ್ದಾರೆ. ಅದೇ 2008 ರಿಂದ ಐಪಿಎಲ್‌ನಲ್ಲಿ ಇಲ್ಲಿಯವರೆಗೆ ಕೇವಲ 9 ಕಿತ್ತಳೆ ಟೋಪಿ ಧರಿಸದೆಯೇ ಪಂದ್ಯಗಳಲ್ಲಿ ಆಡದ ಬ್ಯಾಟ್ಸ್‌ಮನ್‌ಗಳು ಮಾತ್ರ ಶತಕ ಗಳಿಸಿದ್ದುದುಂಟು. ಹಾಗೆ ನೋಡಿದರೆ ಉಳಿದ 5 ಕಿತ್ತಳೆ ಟೋಪಿ ಧರಿಸದೆಯೇ ಶತಕಕ್ಕೆ ಆಡಿದವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಥವಾ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುವೆ ಮುಂದೂಡಿಕೆ ಬಳಿಕ ಸ್ಮೃತಿ ಮಂಧನಾ ಮೊದಲ ಪೋಸ್ಟ್: ನಿಶ್ಚಿತಾರ್ಥ ಉಂಗುರ ನಾಪತ್ತೆ! ಏನಾಯ್ತು ಎಂದ ಫ್ಯಾನ್ಸ್
ದಕ್ಷಿಣ ಆಫ್ರಿಕಾ ಎದುರಿನ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಮೇಜರ್ ಚೇಂಜ್?