IPL 2022: ಚೆನ್ನೈ ಫ್ರಾಂಚೈಸಿ ಜೊತೆ ಕಿರಿಕ್ ಮಾಡಿಕೊಂಡ್ರಾ ರವೀಂದ್ರ ಜಡೇಜಾ?

Published : May 12, 2022, 03:51 PM IST
IPL 2022: ಚೆನ್ನೈ ಫ್ರಾಂಚೈಸಿ ಜೊತೆ ಕಿರಿಕ್ ಮಾಡಿಕೊಂಡ್ರಾ ರವೀಂದ್ರ ಜಡೇಜಾ?

ಸಾರಾಂಶ

* ಐಪಿಎಲ್‌ನಿಂದ ಹೊರಬಿದ್ದ ಸಿಎಸ್‌ಕೆ ಮಾಜಿ ನಾಯಕ ರವೀಂದ್ರ ಜಡೇಜಾ * ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ದ ಮುನಿಸಿಕೊಂಡ್ರಾ ಜಡ್ಡು? * ಇನ್‌ಸ್ಟಾಗ್ರಾಂನಲ್ಲಿ ಜಡೇಜಾ ಅನ್‌ಪಾಲೋ ಮಾಡಿದ ಸಿಎಸ್‌ಕೆ..!

ಮುಂಬೈ(ಮೇ.12): ಐಪಿಎಲ್​ನಲ್ಲಿ ಇಂದು ಮೋಸ್ಟ್ ಪಾಪ್ಯುಲರ್​ ಟೀಮ್​ಗಳಾದ ಸಿಎಸ್​ಕೆ (Chennai Super Kings) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ಮುಖಾಮುಖಿಯಾಗ್ತಿವೆ. ಈ ಎರಡು ಟೀಮ್ಸ್​ ಈಗಾಗಲೇ ಪ್ಲೇ ಆಫ್ ರೇಸ್​ನಿಂದ ಹೊರಬಿದ್ದಿವೆ. ಹಾಗಾಗಿ ಈ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ. ಫ್ಯಾನ್ಸ್​ ಸಹ ಆಸಕ್ತಿ ಕಳೆದುಕೊಂಡಿದ್ದಾರೆ. ಆದ್ರೆ ಎಂಎಸ್ ಧೋನಿ ಆಡೋದ್ರಿಂದ ಈ ಪಂದ್ಯ ಕುತೂಹಲ ಕೆರಳಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್‌ 11 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿದ್ದರೆ, ಮುಂಬೈ ಕೇವಲ ಎರಡನ್ನು ಗೆದ್ದಿದೆ. ಮುಂಬೈ ಇಂಡಿಯನ್ಸ್ ಗುರಿ ಒಂದೇ. ಪಾಯಿಂಟ್ ಟೇಬಲ್​ನಲ್ಲಿ ಕೊನೆ ಸ್ಥಾನದಿಂದ ಮೇಲೇಳಬೇಕು. ಅದು ಸಾಧ್ಯವಾಗಬೇಕಾದ್ರೆ ಉಳಿದ ಮೂರಕ್ಕೆ ಮೂರು ಪಂದ್ಯವನ್ನ ಗೆಲ್ಲಬೇಕು. ಆದರೆ ಸೋಲಿನ ಸುಳಿಯಲ್ಲಿ ಸಿಕ್ಕ ಒದ್ದಾಡುತ್ತಿರುವ ಮುಂಬೈ, ಗೆಲುವಿನ ಹಳಿಗೆ ಮರಳುವುದು ತುಂಬಾ ಕಷ್ಟ. ಇಬ್ಬರು ಕೂಲ್ ಕ್ಯಾಪ್ಟನ್​ಗಳ ಕಾಳಗದಲ್ಲಿ ಗೆಲ್ಲೋರ್ಯಾರು ಅನ್ನೋದೇ ಕುತೂಹಲ.

ಜಡೇಜಾ ಇಂಜುರಿನಾ..? ಟೀಮ್​ನಿಂದ ಡ್ರಾಪ್ ಮಾಡಿದ್ದಾ..?:

ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಇಂಜುರಿಯಾಗಿದ್ದ ಸಿಎಸ್​ಕೆ ಆಲ್​ರೌಂಡರ್​ ರವೀಂದ್ರ ಜಡೇಜಾ (Ravindra Jadeja Injury), ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿರಲಿಲ್ಲ. ಈಗ ಇಂದಿನ ಪಂದ್ಯ ಮಾತ್ರವಲ್ಲ, ಇಡೀ ಐಪಿಎಲ್​ನಿಂದಲೇ ಕಿಕೌಟ್ ಆಗಿದ್ದಾರೆ ಅನ್ನೋ ಸುದ್ದಿ ಬಂದಿದೆ. ಸಿಎಸ್​​ಕೆ ಆಡೋ ಉಳಿದ ಮೂರು ಮ್ಯಾಚ್​ಗಳನ್ನೂ ಜಡ್ಡು ಆಡ್ತಿಲ್ಲ. ಹಾಗಾದ್ರೆ ಸರ್ ಜಡೇಜಾಗೆ ಏನಾಗಿದೆ. ನಿಜವಾಗ್ಲೂ ಅವರು ಇಂಜುರಿಯಾಗಿದ್ದಾರಾ..? ಅಥವಾ ಫ್ರಾಂಚೈಸಿ ಜೊತೆ ಕಿರಿಕ್ ಮಾಡಿಕೊಂಡಿದ್ದಾರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಕೆ ಎಲ್ ರಾಹುಲ್-ಆತಿಯಾ ವಿವಾಹಕ್ಕೆ ಗ್ರೀನ್‌ ಸಿಗ್ನಲ್ ಕೊಟ್ಟ ಸುನಿಲ್ ಶೆಟ್ಟಿ..!

ಈ ಸೀಸನ್ ಐಪಿಎಲ್​ ಸ್ಟಾರ್ಟ್​ ಆಗೋಕು ಮುನ್ನ ರವೀಂದ್ರ ಜಡೇಜಾ ಅವರನ್ನ ಸಿಎಸ್​ಕೆ ನಾಯಕನನ್ನಾಗಿ ಫ್ರಾಂಚೈಸಿ ನೇಮಿಸಿತ್ತು. ಆದರೆ ಜಡ್ಡು ಕ್ಯಾಪ್ಟನ್ಸಿಯಲ್ಲಿ ಚೆನ್ನೈ ಸೋಲುಗಳನ್ನ ಕಂಡು ಪ್ಲೇ ಆಫ್ ರೇಸ್​ನಿಂದ ಹೊರಬಿತ್ತು. ಜಡೇಜಾ ಸಹ ವೈಯಕ್ತಿಕವಾಗಿ ವಿಫಲರಾದ್ರು. ಇದರಿಂದ ಬೇಸತ್ತ ಜಡ್ಡು, ನಾಯಕತ್ವಕ್ಕೆ ರಾಜೀನಾಮೆ ನೀಡಿ ಮತ್ತೆ ಧೋನಿ ಕೈಗೆ ಚುಕ್ಕಾಣಿ ಕೊಟ್ರು. ಇದು ನಮಗೆ ನಿಮಗೆ ಗೊತ್ತಿರುವ ಸ್ಟೋರಿ. ಆದ್ರೆ ಈಗ ಚೆನ್ನೈನಿಂದ ಬೇರೇನೆ ಸ್ಟೋರಿಯೊಂದು ಬಂದಿದೆ.

ಜಡೇಜಾರನ್ನ ಸಿಎಸ್​ಕೆ ಆನ್​ ಫಾಲೋ ಮಾಡಿದ್ದೇಕೆ..?:

ಜಡೇಜಾ ಮತ್ತು ಸಿಎಸ್​ಕೆ ಫ್ರಾಂಚೈಸಿ ನಡುವೆ ಏನೋ ಕೋಲ್ಡ್ ವಾರ್ ನಡೆದಿದೆ. ಹಾಗಾಗಿ ಜಡ್ಡುನನ್ನ ನಾಯಕತ್ವದಿಂದ ಕೆಳಗಿಳಿಸಿ, ಧೋನಿಯನ್ನ ಮತ್ತೆ ನಾಯಕನನ್ನಾಗಿ ಮಾಡಲಾಗಿದೆ. ಜಡ್ಡು ಇಂಜುಯಾಗಿರೋ ನೆಪವೊಡ್ಡಿ ಟೀಮ್​ನಿಂದಲೇ ಕಿಕೌಟ್ ಮಾಡಲಾಗಿದೆ ಅನ್ನೋ ಸುದ್ದಿ ಬಂದಿದೆ. ಇದಕ್ಕೆ ಇಂಬು ನೀಡುವಂತೆ ಇನ್ ಸ್ಟ್ರಾಗ್ರಾಮ್​ನಲ್ಲಿ ಜಡೇಜಾ ಅವರನ್ನ ಸಿಎಸ್​ಕೆ ಆನ್ ಫಾಲೋ ಮಾಡಿದೆ. ಆಗ್ಲೇ ಈ ಎಲ್ಲಾ ಸುದ್ದಿಗಳು ಹರಿದಾಡಿದ್ದು. ಆದ್ರೆ ಒಳಗಿನ ಮರ್ಮಾ ಮಾತ್ರ ಯಾರೂ ಹೇಳ್ತಿಲ್ಲ. ಜಡೇಜಾ ಇಂಜುರಿ, ಐಪಿಎಲ್​ನಿಂದ ಔಟ್ ಅನ್ನೋ ಸುದ್ದಿ ಮಾತ್ರ ಹೇಳ್ತಿದ್ದಾರೆ. ಒಟ್ನಲ್ಲಿ ಸುರೇಶ್ ರೈನಾ (Suresh Raina) ನಂತರ ಜಡೇಜಾ, ಫ್ರಾಂಚೈಸಿ ಜೊತೆ ಕಿತ್ತಾಡಿಕೊಂಡು ರೈನಾರಂತೆ ಸಿಎಸ್​ಕೆ ಬಿಡ್ತಾರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ