
ಕೊಲೊಂಬೊ(ಜು.18): ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಮೇಲುಗೈ ಸಾಧಿಸಿದೆ. ಕರಾರುವಕ್ ದಾಳಿ ಸಂಘಟಿಸಿದ ಟೀಂ ಇಂಡಿಯಾ ಲಂಕಾ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಪಿನ್ ಹಾಗೂ ವೇಗದ ದಾಳಿಯಿಂದ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 262 ರನ್ ಸಿಡಿಸಿತು.
ಹುಟ್ಟು ಹಬ್ಬ ದಿನವೇ ಟೀಂ ಇಂಡಿಯಾಗೆ ಡೆಬ್ಯೂ ಮಾಡಿದ ಭಾರತದ 2ನೇ ಕ್ರಿಕೆಟಿಗ ಇಶಾನ್ ಕಿಶಾನ್!
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಶ್ರೀಲಂಕಾ ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರ ಹಾಕಿಕೊಂಡಿತ್ತು. ಇದರಂತೆ ಆರಂಭಿಕರು ಉತ್ತಮ ಜೊತೆಯಾಟ ನೀಡಿದರು. ಆದರೆ ಈ ಜೋಡಿಯನ್ನು ಯಜುವೇಂದ್ರ ಚಹಾಲ್ ಬೇರ್ಪಡಿಸಿದರು. ಅವಿಷ್ಕಾ ಫರ್ನಾಂಡೋ 32 ರನ್ ಸಿಡಿಸಿ ಔಟಾದರು.
ಚಹಾಲ್ ಬೆನ್ನಲ್ಲೇ ಕುಲ್ದೀಪ್ ಯಾದವ್ ಮ್ಯಾಜಿಕ್ ಲಂಕಾಗೆ ತಲೆನೋವಾಗಿ ಪರಿಣಮಿಸಿತು. ಭಾನುಕಾ ರಾಜಪಕ್ಸ24 ರನ್ ಸಿಡಿಸಿ ಔಟಾದರು . ಇನ್ನು 27 ರನ್ ಸಿಡಿಸಿದ ಮಿನೋದ್ ಬಾನುಕಾ ಕೂಡ ಕುಲ್ದೀಪ್ಗೆ ವಿಕೆಟ್ ಒಪ್ಪಿಸಿದರು. ಧನಂಜಯ್ ಡಿಸಿಲ್ವ ಕೇವಲ 14 ರನ್ ಸಿಡಿಸಿ ಔಟಾದರು.
ಚಾರಿತ್ ಆಸಲಂಕಾ ಹಾಗೂ ನಾಯಕ ದಸೂನ್ ಶನಕಾ ಜೊತೆಯಾಟ ಲಂಕಾ ತಂಡಕ್ಕೆ ನೆರವಾಯಿತು. ಚರಿತ್ 38 ರನ್ ಸಿಡಿಸಿ ಔಟಾದರೆ, ಶನಕ 39 ರನ್ ಕಾಣಿಕೆ ನೀಡಿದರು. ವಾನಿಂಡು ಹಸರಂಗ ಹಾಗೂ ಇಸ್ರು ಉದನಾ ರನ್ ಸಿಡಿಸಲಿಲ್ಲ. ಆದರೆ ಚಾಮಿಕಾ ಕರುಣಾರತ್ನೆ ಹೋರಾಟ ಮುಂದುವರಿಸಿದರು.
ಚಾಮಿಕ ಕರುಣಾರತ್ನೆ ಅಜೇಯ 43 ರನ್ ಹಾಗೂ ದುಶ್ಮಂತ ಚಮೀರಾ 13 ರನ್ ಸಿಡಿಸಿದರು. ಇದರೊಂದಿಗೆ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 262 ರನ್ ಸಿಡಿಸಿತು. ಭಾರತದ ಪರ ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ದೀಪಕ್ ಚಹಾರ್ ತಲಾ 2 ವಿಕೆಟ್ ಕಬಳಿಸಿದರು. ಹಾರ್ದಿಕ್ ಪಾಂಡ್ಯ ಹಾಗೂ ಕ್ರುನಾಲ್ ಪಾಂಡ್ಯ ತಲಾ 1 ವಿಕೆಟ್ ಕಬಳಿಸಿದರು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.