'ಸಿದ್ದು ವ್ಯಾಕರಣ ಮಾಸ್ತರಾದ್ರೂ ಕಲಿತಿರೋದು ಏಕವಚನ ಮಾತ್ರ'

By Kannadaprabha NewsFirst Published Oct 27, 2019, 9:41 AM IST
Highlights

ಸಿದ್ದರಾಮಯ್ಯ ವ್ಯಾಕರಣ ಮಾಸ್ತರ್ ಆದರೂ ಕೂಡ ಕಲಿತಿರೋದು ಏಕವಚನ ಮಾತ್ರ ಎಂದು ಸಚಿವ ಸುರೇಶಹ ಕುಮಾರ್ ಹೇಳಿದ್ದಾರೆ. 

ಚಿತ್ರದುರ್ಗ (ಅ.27): ನಾವು ಏಕವಚನ, ಬಹುವಚನ ಎರಡನ್ನೂ ಕಲಿತಿದ್ದೇವೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಾಕರಣ ಮಾಸ್ತರಾದ್ರೂ ಕಲಿತಿರೋದು ಏಕವಚನ ಮಾತ್ರ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಟಾಂಗ್‌ ನೀಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಸ್ಪೀಕರ್‌ಗೆ ಏಕವಚನ ಬಳಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾವು ಏಕವಚನ, ಬಹುವಚನ ಎರಡೂ ಕಲಿತಿದ್ದೇವೆ. ಸಿದ್ದರಾಮಯ್ಯ ಕೇವಲ ಏಕವಚನ ಮಾತ್ರ ಕಲಿತಿದ್ದು, ಅವರನ್ನು ಏನು ಮಾಡೋಕೆ ಸಾಧ್ಯ ಹೇಳಿ ಎಂದು ವ್ಯಂಗ್ಯವಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅನರ್ಹ ಶಾಸಕರ ಸೇರ್ಪಡೆ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಕಾಯುತ್ತಿದ್ದೇವೆ. ಈ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ. ಈ ವಿಚಾರದಲ್ಲಿ ಹಿಂದಿನ ಸ್ವೀಕರ್‌ ನೀಡಿದ ತೀರ್ಪು ಸರಿಯಿಲ್ಲ ಎಂಬುದು ನಮ್ಮ ವಾದವಾಗಿದೆ ಎಂದು ಹೇಳಿದರು.

click me!