​ಪೀಣ್ಯದಲ್ಲಿ ಪುಂಡರ ಅಟ್ಟಹಾಸ: ಪ್ರಶ್ನಿಸಿದ ಸ್ಥಳೀಯರ ಕಾರು ಧ್ವಂಸ! ಕ್ರಮ ಕೈಗೊಳ್ಳದೆ ಕೈತೊಳೆದುಕೊಂಡ ಪೋಲಿಸರು!

Published : Aug 05, 2026, 10:27 AM IST
Wheeling Row Turns Violent Peenya Miscreants Attack Local's Vehicle

ಸಾರಾಂಶ

ಬೆಂಗಳೂರಿನ ಪೀಣ್ಯ ಠಾಣಾ ವ್ಯಾಪ್ತಿಯ ಕರಿಹೋಬನಹಳ್ಳಿಯಲ್ಲಿ ಗಣಿ ಮತ್ತು ನಂಜುಂಡ ಎಂಬ ಪುಂಡರು ಗಾಂಜಾ ಮತ್ತಿನಲ್ಲಿ ವೀಲಿಂಗ್ ಮಾಡಿ, ಪ್ರಶ್ನಿಸಿದ ಸ್ಥಳೀಯರ ಕಾರು ಧ್ವಂಸಗೊಳಿಸಿದ್ದಾರೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದರೂ, ದೂರು ಸ್ವೀಕರಿಸಿದ ಪೀಣ್ಯ ಪೊಲೀಸರು ಕೇವಲ ಎನ್‌ಸಿಆರ್ (NCR) ಹಾಕಿ ಕೈತೊಳೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ತಕ್ಷಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರಿಹೋಬನಹಳ್ಳಿಯಲ್ಲಿ ಪುಂಡರ ಪುಂಡಾಟ: ಕ್ಯಾರೇ ಎನ್ನದ ಪೀಣ್ಯ ಪೋಲಿಸರು!

​ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಹೋಬನಹಳ್ಳಿಯಲ್ಲಿ ಪುಂಡ ಪೋಕರಿಗಳ ಉಪಟಳ ಮಿತಿಮೀರಿದ್ದು, ಸಾರ್ವಜನಿಕರು ಪ್ರತಿನಿತ್ಯ ಕಿರಿಕಿರಿಯನ್ನು ಅನುಭವಿಸುವಂತಾಗಿದೆ. ರಸ್ತೆಗಳಲ್ಲಿ ಭೀಕರವಾಗಿ ವೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಪುಂಡರನ್ನು ಪ್ರಶ್ನಿಸಿದ್ದಕ್ಕೆ, ಅವರು ಕಾರಿನ ಮೇಲೆ ಕಲ್ಲು ತೂರಿ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿ ಆತಂಕ ಸೃಷ್ಟಿಸಿದ್ದಾರೆ.

ಗಾಂಜಾ ಮತ್ತಿನಲ್ಲಿ ಕಾರು ಧ್ವಂಸ!

​ಸ್ಥಳೀಯರ ಪ್ರಕಾರ, ಗಣಿ ಮತ್ತು ನಂಜುಂಡ ಎಂಬ ರೌಡಿಗಳು ಗಾಂಜಾ ಸೇವಿಸಿ ಯಾವುದೇ ಕಾರಣವಿಲ್ಲದೆ ಕರಿಹೋಬನಹಳ್ಳಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಆಗಸ್ಟ್ 3 ರಂದು ಇವರ ಪುಂಡಾಟವನ್ನು ಪ್ರಶ್ನಿಸಿದಾಗ, ಆಕ್ರೋಶಗೊಂಡ ಇಬ್ಬರೂ ಆರೋಪಿಗಳು ಕಾರಿನ ಕಿಟಕಿಗಳನ್ನು smashing ಮಾಡಿ ವಾಹನವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ. ಈ ಕೃತ್ಯದ ಭೀಕರ ದೃಶ್ಯಗಳು ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸರೆಯಾಗಿವೆ.

​ಎನ್‌ಸಿಆರ್‌ ದಾಖಲಿಸಿ ಕೈತೊಳೆದುಕೊಂಡ ಪೋಲಿಸರು ​ಈ ಪುಂಡರ ನಿರಂತರ ಕಿರುಕುಳದಿಂದ ಬೇಸತ್ತ ಸ್ಥಳೀಯ ನಿವಾಸಿಗಳು ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ದೂರು ನೀಡಿ ದಿನಗಳು ಕಳೆದರೂ ಪೋಲಿಸರು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಕೇವಲ ಎನ್.ಸಿ.ಆರ್ (NCR) ದಾಖಲಿಸಿಕೊಂಡು ಪೋಲಿಸರು ತಮ್ಮ ಜವಾಬ್ದಾರಿಯಿಂದ ಜಾರಿಕೊಂಡಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಬಗ್ಗೆ ಹೆಚ್ಚುತ್ತಿರುವ ಆತಂಕ

ಸ್ಥಳೀಯರ ಆರೋಪದಂತೆ, ಈ ಭಾಗದಲ್ಲಿ ಪುಂಡರ ಉಪಟಳ ಇದೇ ಮೊದಲಲ್ಲ. ಆಗಾಗ್ಗೆ ವೀಲಿಂಗ್, ಗಲಾಟೆ, ಗಾಂಜಾ ಸೇವನೆ ಹಾಗೂ ಸಾರ್ವಜನಿಕರಿಗೆ ಬೆದರಿಕೆ ಹಾಕುವ ಘಟನೆಗಳು ನಡೆಯುತ್ತಿದ್ದರೂ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಕಾರಣ ಅವರು ಮತ್ತಷ್ಟು ಧೈರ್ಯದಿಂದ ಪುಂಡಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸಿಸಿಟಿವಿ ದೃಶ್ಯಗಳು ಮತ್ತು ಸ್ಥಳೀಯರ ದೂರುಗಳಿದ್ದರೂ ತಕ್ಷಣ ಬಂಧನವಾಗದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಇಂತಹ ಸಮಾಜಘಾತುಕ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸರು ಶೀಘ್ರವೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

 

PREV
Read more Articles on
click me!

Recommended Stories

ಮೊಬೈಲ್​ನಲ್ಲಿ ಈ ಸೆಟ್ಟಿಂಗ್ಸ್​ ಆಫ್​ ಮಾಡಿದ್ರೆ ಸೈಬರ್​ ದಾಳಿಯಿಂದ ನೀವು ಸೇಫ್​: ಬೆಂಗಳೂರು ಪೊಲೀಸರ ಮಾಹಿತಿ
GBA ಶಾಂತಿನಗರ ವಿಭಾಗದಲ್ಲಿ 8.91 ಕೋಟಿ ಲೂಟಿ ಆರೋಪ.. ಬೆಚ್ಚಿ ಬೀಳಿಸುತ್ತೆ ಅಂಕಿ-ಅಂಶ..!