
ನೆಲಮಂಗಲ (ಅ.31) ಮದುವೆಯಲ್ಲಿ ಊಟಕ್ಕೆ ಕುಳಿತ ವ್ಯಕ್ತಿಗಳನ್ನು ಎಬ್ಬಸಿ ಅವಮಾನ ಮಾಡಿ ಕಳುಹಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ನಿಮಗೆ ಊಟ ಹಾಕುವುದಿಲ್ಲ, ನೀವು ತಿಲಕ ಇಟ್ಟಿದ್ದೀರಿ ಎಂದು ಹಿಂದೂವಿಗೆ ಅವಮಾನ ಮಾಡಲಾಗಿದೆ. ಇದೀಗ ಈ ಘಟನೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇಸ್ಲಾಂಪುರದ ನಿವಾಸಿ ಸಮಿವುಲ್ಲಾ ಕುಟುಂಬದ ಮದುವೆ ಕಾರ್ಯಕ್ರಮಕ್ಕೆ ರಾಜು ಎಂಬುವರನ್ನು ಆಹ್ವಾನಿಸಲಾಗಿತ್ತು. ಆದರೆ ಮದುವೆ ಕಾರ್ಯಕ್ರಮದಲ್ಲಿ ಹಿಂದೂ, ತಿಲಕ ಇಟ್ಟಿದ್ದೀರಿ ಎಂದು ಊಟಕ್ಕೆ ಕುಳಿತಲ್ಲಿಂದ ಎಬ್ಬಿಸಿದ ಘಟನೆ ನಡೆದಿದೆ.
ನೆಲಮಂಗದಲ ಸಮೀವುಲ್ಲಾ ಮಗನ ಮದುವೆ ಕಾರ್ಯಕ್ರಮಕ್ಕೆ ರಾಜುವಿಗೆ ಆಹ್ವಾನ ನೀಡಲಾಗಿತ್ತು.ನೆಲಮಂಗದಲ ಖಾಸಗಿ ಕಲ್ಯಾಣ ಮಂಟಪದಲ್ಲಿ ಮುಜಾಮಿಲ್ ಪಾಷ ಹಾಗೂ ಸಾನಿಯಾ ಜೋಡಿ ಮದುವೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆಹ್ವಾನ ನೀಡಿದ್ದ ಕಾರಣ ಕ್ಷೌರಿಕ ಕೆಲಸವನ್ನು ಬೇಗನೆ ಮುಗಿಸಿ ಶಾಪ್ ಕ್ಲೋಸ್ ಮಾಡಿದ ರಾಜು ಮದುವೆಗೆ ತೆರಳಿದ್ದರು. ಮುಸ್ಲಿಮ್ ಕುಟುಂಬದ ಮದುವೆಗೆ ತೆರಳಿದಾ ರಾಜು, ಎಲ್ಲಾ ಮದುವೆಯಂದ ನವ ಜೋಡಿಗಳಿಗೆ ಶುಭ ಕೋರಿದ್ದರು. ಬಳಿಕ ಎಲ್ಲರೊಂದಿಗೆ ಊಟಕ್ಕೆ ಕುಳಿತಿದ್ದರು.
ಊಟಕ್ಕೆ ಪಂಕ್ತಿಯಲ್ಲಿ ಕುಳಿತ ಎಲ್ಲರಿಗೂ ಬಡಿಸುತ್ತಾ ಬಂದಿದ್ದಾರೆ. ಮುಸ್ಲಿಂ ಬಾಂಧವರ ನಡುವೆ ಕುಳಿತಿದ್ದ ರಾಜು ನೋಡಿದ ಮದುವೆ ಕುಟುಂಬಸ್ಥರು, ತಿಲಕ ಇಟ್ಟವರಿಗೆ ಊಟ ಹಾಕುವುದಿಲ್ಲ. ನಿಮ್ಮನ್ನು ಯಾರು ಕರೆದಿದ್ದು, ಹಿಂದೂ ಗಳಿಗೆ ನಾವು ಊಟ ಹಾಕುವುದಿಲ್ಲ ಇಲ್ಲಿಂದ ಎದ್ದು ಹೋಗಿ ಎಂದು ರಾಜುವಿಗೆ ಅವಮಾನ ಮಾಡಲಾಗಿದೆ ಎಂದು ವರದಿಯಾಗಿದೆ.
ಊಟಕ್ಕೆ ಕುಳಿತಲ್ಲಿಂದ ರಾಜುವನ್ನು ಎಬ್ಬಿಸಿದ ಘಟನೆಗೆ ಮದುವೆ ಕಾರ್ಯಕ್ರಮದಲ್ಲಿದ್ದ ಹಲವರು ವಿರೋಧಿಸಿದ್ದಾರೆ. ಊಟಕ್ಕೆ ಕುಳಿತಲ್ಲಿಂದ ಎಬ್ಬಿಸಿದ್ದು ತಪ್ಪು, ಯಾರೇ ಆಗಲಿ ಊಟ ಹಾಕಿ ಈ ರೀತಿ ಮಾಡಬಾರದು. ನೀವು ಮಾಡುತ್ತಿರುವುದು ತಪ್ಪು ಎಂದು ವಿರೋದ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 26ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಕುರಿತು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಪರ ವಿರೋಧಗಳು ಕೇಳಿಬರುತ್ತಿದೆ. ಆಹ್ವಾನ ನೀಡದೇ ಬಂದಿದ್ದಾರೆ ಎಂದು ಕೆಲವರ ಪರವಾಗಿ ಮಾತನಾಡಿದ್ದರೆ, ಕರೆಸಿ ಅವಮಾನ ಮಾಡಿದ್ದೇಕೆ ಎಂದು ಹಲವರು ಪ್ರಶ್ನಿಸಿದ್ದಾರೆ.