ಉತ್ತರ ಕರ್ನಾಟಕ ಮಂದಿಗೆ ಮಸ್ತ್ ಸುದ್ದಿ.. ಮಿಸ್ ಮಾಡ್ದೇ ಓದಲೇಬೇಕಾದ ಸ್ಟೋರಿ ಇದು..!

Published : Aug 03, 2026, 05:20 PM IST
ksrtc spl bus

ಸಾರಾಂಶ

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು 'ರಾಜರಥ' ಹೆಸರಿನ ನೂತನ ಐಷಾರಾಮಿ ಎಸಿ ಸ್ಲೀಪರ್ ಬಸ್‌ಗಳನ್ನು ಪರಿಚಯಿಸಿದೆ. ಈ ಬಸ್‌ಗಳು ಬೆಳಗಾವಿ-ಥಾಣೆ ಮತ್ತು ಚಿಕ್ಕೋಡಿ-ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸಲಿದ್ದು, ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡುವ ಮೂಲಕ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲಿವೆ.

ಬೆಳಗಾವಿ/ಚಿಕ್ಕೋಡಿ: ಉತ್ತರ ಕರ್ನಾಟಕದ ಸಾರಿಗೆ ಸಂಪರ್ಕದಲ್ಲಿ ಮತ್ತೊಂದು ಕ್ರಾಂತಿ ಆರಂಭವಾಗಿದೆ. ಐರಾವತ ಮತ್ತು ಪಲ್ಲಕ್ಕಿ ಬಸ್‌ಗಳ ಯಶಸ್ಸಿನ ಬೆನ್ನಲ್ಲೇ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಅತ್ಯಂತ ಐಷಾರಾಮಿ 'ರಾಜರಥ' ಎಸಿ ಸ್ಲೀಪರ್ ಕೋಚ್ ಬಸ್ ಸೇವೆಗೆ ಚಾಲನೆ ನೀಡಿದೆ. ಈ ನೂತನ ಬಸ್‌ಗಳು ಬೆಳಗಾವಿ, ಚಿಕ್ಕೋಡಿ ಹಾಗೂ ಹುಬ್ಬಳ್ಳಿ ಭಾಗದ ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿವೆ.

ಚಿಕ್ಕೋಡಿ ಘಟಕಕ್ಕೆ ನೂತನ ಬಸ್‌ಗಳ ಸೇರ್ಪಡೆ

ವಾಯುವ್ಯ ಸಾರಿಗೆ ಸಂಸ್ಥೆಯ ಚಿಕ್ಕೋಡಿ ಘಟಕಕ್ಕೆ ಸದ್ಯ ಎರಡು ಅತ್ಯಾಧುನಿಕ 'ರಾಜರಥ' ಬಸ್‌ಗಳನ್ನು ಸೇರಿಸಲಾಗಿದೆ. ಈ ಪೈಕಿ ಒಂದು ಬಸ್ ಚಿಕ್ಕೋಡಿಯಿಂದ ಬೆಂಗಳೂರಿಗೆ ಕಾರ್ಯನಿರ್ವಹಿಸಿದರೆ, ಮತ್ತೊಂದು ಬಸ್ ಬೆಳಗಾವಿಯಿಂದ ಮಹಾರಾಷ್ಟ್ರದ ಪ್ರಮುಖ ನಗರವಾದ ಥಾಣೆಗೆ ಸಂಪರ್ಕ ಕಲ್ಪಿಸಲಿದೆ. ಸಂಪೂರ್ಣ ಹವಾನಿಯಂತ್ರಿತ (AC) ಮತ್ತು ಆರಾಮದಾಯಕ ಸ್ಲೀಪರ್ ಸೌಲಭ್ಯ ಹೊಂದಿರುವ ಈ ಬಸ್‌ಗಳು ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡುವಂತಿವೆ.

ಬಸ್ ವೇಳಾಪಟ್ಟಿ ಇಲ್ಲಿದೆ

ಬೆಳಗಾವಿ - ಥಾಣೆ (ಮಹಾರಾಷ್ಟ್ರ) ಮಾರ್ಗ

  • ಬೆಳಗಾವಿಯಿಂದ ಥಾಣೆಗೆ: ಪ್ರತಿದಿನ ರಾತ್ರಿ 8.15ಕ್ಕೆ ಹೊರಟು, ಮರುದಿನ ಮುಂಜಾನೆ 6.30ಕ್ಕೆ ಥಾಣೆ ತಲುಪುತ್ತದೆ.
  • ಥಾಣೆಯಿಂದ ಬೆಳಗಾವಿಗೆ: ಪ್ರತಿದಿನ ರಾತ್ರಿ 8.00ಕ್ಕೆ ಹೊರಟು, ಮರುದಿನ ಬೆಳಿಗ್ಗೆ 6.15ಕ್ಕೆ ಬೆಳಗಾವಿ ತಲುಪುತ್ತದೆ.

ಚಿಕ್ಕೋಡಿ - ಬೆಂಗಳೂರು ಮಾರ್ಗ

  • ಚಿಕ್ಕೋಡಿಯಿಂದ ಬೆಂಗಳೂರಿಗೆ: ಸಂಜೆ 7.00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 6.45ಕ್ಕೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ (ಮೆಜೆಸ್ಟಿಕ್) ತಲುಪುತ್ತದೆ.
  • ಬೆಂಗಳೂರಿನಿಂದ ಚಿಕ್ಕೋಡಿಗೆ: ರಾತ್ರಿ 9.55ಕ್ಕೆ ಹೊರಟು, ಮರುದಿನ ಬೆಳಿಗ್ಗೆ 7.45ಕ್ಕೆ ಚಿಕ್ಕೋಡಿ ತಲುಪುತ್ತದೆ.

ಟಿಕೆಟ್ ದರ ಮತ್ತು ಬುಕ್ಕಿಂಗ್

ಈ ಐಷಾರಾಮಿ ರಾಜರಥ ಬಸ್‌ನಲ್ಲಿ ಪ್ರಯಾಣಿಸಲು ತಲಾ ಒಬ್ಬರಿಗೆ 1357 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಪ್ರಯಾಣಿಕರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ www.ksrtc.in ಮೂಲಕ ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ. ದೂರದ ಪ್ರಯಾಣ ಮಾಡುವವರಿಗೆ ಸುಸ್ತಾಗದಂತೆ ಸಕಲ ಸೌಲಭ್ಯಗಳನ್ನು ಈ ರಾಜರಥ ಬಸ್‌ಗಳಲ್ಲಿ ಅಳವಡಿಸಲಾಗಿದೆ. ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲೈಟ್ ಹಾಗೂ ಅತ್ಯುತ್ತಮ ಗುಣಮಟ್ಟದ ಸೀಟುಗಳನ್ನು ಇದು ಹೊಂದಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಸಂಚರಿಸುವ ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳಿಗೆ ಈ ಸೇವೆ ವರದಾನವಾಗಲಿದೆ.

PREV
Read more Articles on
click me!

Recommended Stories

ಸವದತ್ತಿ-ಬೆಂಗಳೂರು: 'ಪಲ್ಲಕ್ಕಿ'ಯ ಹೊಸ ಪಯಣ, ಎರಡು ಬಸ್‌ಗಳಿಗೆ ಚಾಲನೆ; ಸಮಯ ಈ ರೀತಿ
ಧಾರವಾಡ-ಬೆಳಗಾವಿ ರೈಲು ಮಾರ್ಗ ಭೂಸ್ವಾಧೀನ ಕ್ಷಿಪ್ರಗತಿಯಲ್ಲಿ ಮುಗಿಸಲು, ಸಮಸ್ಯೆ ನಿವಾರಿಸಲು ಅಧಿಕಾರಿಗಳಿಗೆ ಸೂಚನೆ